ಆ್ಯಪ್ನಗರ

ಹುಕ್ಕೇರಿ ತಾಪಂ ಕಾಂಗ್ರೆಸ್‌ಗೆ: ಜಾರಕಿಹೊಳಿ ಹರ್ಷ

ಯಮಕನಮರಡಿ: ಮತಕ್ಷೇತ್ರದ 7 ಜಿಪಂ ಕ್ಷೇತ್ರಗಳಲ್ಲಿ ಮತ್ತು ಹುಕ್ಕೇರಿ ತಾಲೂಕು ಪಂಚಾಯಿತಿಗೆ ಹೆಚ್ಚು ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಸಣ್ಣ ಕೆಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ವಿಕ ಸುದ್ದಿಲೋಕ 28 Feb 2016, 3:14 am
ಯಮಕನಮರಡಿ: ಮತಕ್ಷೇತ್ರದ 7 ಜಿಪಂ ಕ್ಷೇತ್ರಗಳಲ್ಲಿ ಮತ್ತು ಹುಕ್ಕೇರಿ ತಾಲೂಕು ಪಂಚಾಯಿತಿಗೆ ಹೆಚ್ಚು ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಸಣ್ಣ ಕೆಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Vijaya Karnataka Web
ಹುಕ್ಕೇರಿ ತಾಪಂ ಕಾಂಗ್ರೆಸ್‌ಗೆ: ಜಾರಕಿಹೊಳಿ ಹರ್ಷ


ಸಮೀಪದ ಇಂದಿರಾನಗರದ ನೂತನ ಐಟಿಐ ಕಾಲೇಜಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹುಕ್ಕೇರಿ ತಾಲೂಕು ಪಂಚಾಯಿತಿ ಕಾಂಗ್ರೆಸ್ ಮಡಿಲಿಗೆ ಬಂದಿರುವುದು ಐತಿಹಾಸಿಕ. ಠಾಣಾ-ಹತ್ತರಗಿ ತಾಪಂ ಕ್ಷೇತ್ರದಲ್ಲಿ ನಮ್ಮದೇ ಪಕ್ಷದವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕಾರಣ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಅಂತರ ಕಡಿಮೆ ಇದೆ. ಪಕ್ಷದ ವಿರುದ್ಧ ಇರುವ ಕಾರ್ಯಕರ್ತರು ಬೇಕಿಲ್ಲ. ಅವರು ಬೇಕಾದ ಕಡೆ ಹೋಗಲಿ. ಹತ್ತರಗಿಯಲ್ಲಿ ಕಾಂಗ್ರೆಸ್‌ಗೆ ಕಡಿಮೆ ಮತ ಬಂದಿದ್ದು,ಕುರಣಿಯಲ್ಲಿ ಅಧಿಕ ಮತ ಬಂದಿದೆ ಎಂದು ಅವರು ಹೇಳಿದರು.

ರವಿ ಜಿಂಡ್ರಾಳಿ, ಹತ್ತರಗಿ ತಾಪಂ ಸದಸ್ಯೆ ದಸ್ತಗೀರ ಬಸ್ಸಾಪುರಿ, ವಿಠ್ಠಲ ಕಡಗಾಂವಿ, ಹತ್ತರಗಿ ಗ್ರಾಪಂ ಅಧ್ಯಕ್ಷ ಮಹಾದೇವ ಪಟೋಳಿ, ಶಿವಶಂಕರ ಝುಟ್ಟಿ, ಶಂಕರ ಕುಡಚಿ, ಯಲ್ಲಪ್ಪ ಹಂಚಿನಮನಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ