ಆ್ಯಪ್ನಗರ

ರಸಗೊಬ್ಬರ ಮಾರಾಟ ಪರವಾನಗಿ ನವೀಕರಿಸಿ

ಬೆಳಗಾವಿ :ಕ್ರಿಮಿನಾಶಕ ಹಾಗೂ ರಸಗೊಬ್ಬರ ಮಾರಾಟ ಪರವಾನಗಿ ನವೀಕರಣ ಮಾಡುವಂತೆ ಒತ್ತಾಯಿಸಿ ಬೆಳಗಾವಿ ಆಗ್ರೋ ಟ್ರೇಡರ್ಸ್ ಅಸೋಸಿಯೇಶನ್ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ವಿಕ ಸುದ್ದಿಲೋಕ 5 Mar 2016, 3:01 am
ಬೆಳಗಾವಿ :ಕ್ರಿಮಿನಾಶಕ ಹಾಗೂ ರಸಗೊಬ್ಬರ ಮಾರಾಟ ಪರವಾನಗಿ ನವೀಕರಣ ಮಾಡುವಂತೆ ಒತ್ತಾಯಿಸಿ ಬೆಳಗಾವಿ ಆಗ್ರೋ ಟ್ರೇಡರ್ಸ್ ಅಸೋಸಿಯೇಶನ್ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web
ರಸಗೊಬ್ಬರ ಮಾರಾಟ ಪರವಾನಗಿ ನವೀಕರಿಸಿ


ಹಲವಾರು ವರ್ಷಗಳಿಂದ ಕ್ರಿಮಿನಾಶಕ, ರಸಗೊಬ್ಬರ ಮಾರಾಟ ಮಾಡುತ್ತಿದ್ದೇವೆ. ಆದರೆ, ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಮಾರಾಟ ಪರವಾನಗಿ ನವೀಕರಣ ಮಾಡಲು ಕೃಷಿ ಪದವಿ ಹೊಂದರಬೇಕು ಎಂಬ ಕಾಯ್ದೆ ಹೇಳುತ್ತಿದ್ದಾರೆ. ಇದರಿಂದ ರಸಗೊಬ್ಬರ ಮಾರಾಟ ಮಾಡುವ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಸಾಕಷ್ಟು ಅಂಗಡಿಗಳ ಮಾಲೀಕರು ಕೃಷಿ ಪದವಿ ಹೊಂದಿಲ್ಲ. ಕೃಷಿ ತಾಂತ್ರಿಕತೆಗೆ ಬೇಕಾಗುವ ಮಾಹಿತಿಯನ್ನು ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರಗಳು ನೀಡುತ್ತಿರುವುದರಿಂದ ಅದೇ ಪ್ರಕಾರ ರೈತರ ಬೇಡಿಕೆಗೆ ಅನುಗುಣವಾಗಿ ಕೃಷಿ ಪರಿಕರಗಳನ್ನು ನಮ್ಮ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರಸಗೊಬ್ಬರ ವ್ಯಾಪಾರಸ್ಥರಿಗೆ ಕೃಷಿ ಪದವಿ ಕಡ್ಡಾಯಗೊಳಿಸದೆ ಈಗಿರುವ ಲೈಸೆನ್ಸ್‌ಗಳನ್ನು ನವೀಕರಿಸಬೇಕು. ನೂತನವಾಗಿ ಕೃಷಿ ಪರಿಕರ ಅಂಗಡಿಗಳನ್ನು ತೆರೆಯುವ ಮಾಲೀಕರಿಗೆ ಈ ಕಾಯ್ದೆ ಅಳವಡಿಸಿ. ಆದರೆ, ಹಲವಾರು ವರ್ಷಗಳಿಂದ ಕೃಷಿ ಪರಿಕರ ಅಂಗಡಿಗಳನ್ನು ನಡೆಸುತ್ತಾ ಬಂದಿರುವ ಅಂಗಡಿಕಾರರ ಲೈಸೆನ್ಸ್ ನವೀಕರಣ ಮಾಡಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿ.ಆರ್. ಪಾಟೀಲ, ಗುರುಪುತ್ರ ಬಾಳಿ, ಆನಂದ ಕುಂಬಾರ, ನಾಗರಾಜ ಹುಂಡೆಕರ, ಶಿವಾಜಿ ಕಿನಕರ ಮತ್ತಿತರರು ಭಾಗವಹಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ