ಕಬ್ಬಿಗೆ ಹತ್ತಿದ ಬೆಂಕಿ ಆರಿಸಲು ಹೋಗಿ ರೈತನ ಸಜೀವ ದಹನ
ನಿಪ್ಪಾಣಿ (ಬೆಳಗಾವಿ): ಸಮೀಪದ ಬೋಳೆವಾಡಿ ಗ್ರಾಮದಲ್ಲಿ ಕಬ್ಬಿಗೆ ತಗುಲಿದ ಬೆಂಕಿ ನಂದಿಸಲು ಯತ್ನಿಸಿದ ರೈತರೊಬ್ಬರು ಅದೇ ಬೆಂಕಿಯಲ್ಲಿ ಸಜೀವ ದಹನವಾದ ಘಟನೆ ಜರುಗಿದೆ.
Vijaya Karnataka Web 10 Mar 2016, 3:14 am
ನಿಪ್ಪಾಣಿ (ಬೆಳಗಾವಿ): ಸಮೀಪದ ಬೋಳೆವಾಡಿ ಗ್ರಾಮದಲ್ಲಿ ಕಬ್ಬಿಗೆ ತಗುಲಿದ ಬೆಂಕಿ ನಂದಿಸಲು ಯತ್ನಿಸಿದ ರೈತರೊಬ್ಬರು ಅದೇ ಬೆಂಕಿಯಲ್ಲಿ ಸಜೀವ ದಹನವಾದ ಘಟನೆ ಜರುಗಿದೆ.
ವಿಷ್ಣು ವರಾಳೆ (55) ಮೃತ ರೈತ. ಇವರು ಕಾರ್ಖಾನೆಗೆ ಕಬ್ಬು ಕಳುಹಿಸಿದ ಬಳಿಕ ಹೊಲದಲ್ಲಿ ಉಳಿದ ಎಲೆಗಳಿಗೆ ಬೆಂಕಿ ಹಚ್ಚಿದ್ದರು. ಈ ವೇಳೆ, ಪಕ್ಕದ ಮತ್ತೊಬ್ಬ ರೈತರ ಹೊಲಕ್ಕೂ ಬೆಂಕಿ ಹರಡಿದಾಗ ಅದನ್ನು ಆರಿಸಲು ಹೋದ ವಿಷ್ಣು ವರಾಳೆ ಆಕಸ್ಮಿಕವಾಗಿ ಬೆಂಕಿಯಲ್ಲಿ ಬಿದ್ದು ಸುಟ್ಟು ಕರಕಲಾಗಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ್ಣು ವರಾಳೆ (55) ಮೃತ ರೈತ. ಇವರು ಕಾರ್ಖಾನೆಗೆ ಕಬ್ಬು ಕಳುಹಿಸಿದ ಬಳಿಕ ಹೊಲದಲ್ಲಿ ಉಳಿದ ಎಲೆಗಳಿಗೆ ಬೆಂಕಿ ಹಚ್ಚಿದ್ದರು. ಈ ವೇಳೆ, ಪಕ್ಕದ ಮತ್ತೊಬ್ಬ ರೈತರ ಹೊಲಕ್ಕೂ ಬೆಂಕಿ ಹರಡಿದಾಗ ಅದನ್ನು ಆರಿಸಲು ಹೋದ ವಿಷ್ಣು ವರಾಳೆ ಆಕಸ್ಮಿಕವಾಗಿ ಬೆಂಕಿಯಲ್ಲಿ ಬಿದ್ದು ಸುಟ್ಟು ಕರಕಲಾಗಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.