ಬೆಳಗಾವಿ: ಜಿಲ್ಲೆಯ ನಾನಾ ಭಾಗಗಳಲ್ಲಿ ವಾಲ್ಮೀಕಿ ಭವನಗಳ ನಿರ್ಮಾಣಕ್ಕೆ ಸರಕಾರ 48 ಲಕ್ಷ ರೂ. ಮಂಜೂರು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ತಿಳಿಸಿದರು. ಈ ಕುರಿತು ಪ್ರಕಟಣೆ ನೀಡಿರುವ ಅವರು, ತಮ್ಮ ಕೋರಿಕೆಗೆ ಸ್ಪಂದಿಸಿರುವ ರಾಜ್ಯ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಅನುದಾನಕ್ಕೆ ಮಂಜೂರಾತಿ ನೀಡಿದ್ದಾರೆ. ಬೈಲಹೊಂಗಲ ತಾಲೂಕಿನ ಮರಿಕಟ್ಟಿ, ರಾಯಬಾಗ ತಾಲೂಕಿನ ಬೆಂಡವಾಡ, ಹುಕ್ಕೇರಿ ತಾಲೂಕಿನ ಗೋಟೂರು, ಚಿಕ್ಕೋಡಿ ತಾಲೂಕಿನ ಲಖನಾಪುರ ಗ್ರಾಮಗಳಲ್ಲಿ ತಲಾ 12 ಲಕ್ಷ ರೂ. ಅನುದಾನದಂತೆ ಒಟ್ಟು 48 ಲಕ್ಷ ರೂ. ಮಂಜೂರಾಗಿದೆ ಎಂದು ತಿಳಿಸಿದರು.
ನಾಲ್ಕು ವಾಲ್ಮೀಕಿ ಭವನಗಳಿಗೆ ಅನುದಾನ
ವಿಕ ಸುದ್ದಿಲೋಕ ಬೆಳಗಾವಿ ಜಿಲ್ಲೆಯ ನಾನಾ ಭಾಗಗಳಲ್ಲಿ ವಾಲ್ಮೀಕಿ ಭವನಗಳ ನಿರ್ಮಾಣಕ್ಕೆ ಸರಕಾರ 48 ಲಕ್ಷ ರೂ...
ವಿಕ ಸುದ್ದಿಲೋಕ 31 Mar 2017, 1:00 am