ಸೊಪ್ಪಡ್ಲದ ಗ್ರಾಮದ ರೈತ ಆತ್ಮಹತ್ಯೆ
ಯರಗಟ್ಟಿ: ಸಮೀಪದ ಸೊಪ್ಪಡ್ಲ ಗ್ರಾಮದ ರೈತ ಶ್ರೀಶೈಲ ಪರುತಪ್ಪ ಕಟ್ಟಿ (44) ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬರಗಾಲದಿಂದ ಕಂಗಾಲಾಗಿದ್ದ ಶ್ರೀಶೈಲ ಕಟ್ಟಿ ಯರಗಟ್ಟಿಯ ವಿವಿಧ ಸಹಕಾರಿ ಬ್ಯಾಂಕ್ಗಳಲ್ಲಿ ಹಾಗೂ ಕೈಗಡ ರೂಪದಲ್ಲಿ ಒಟ್ಟು 15 ಲಕ್ಷ ರೂ. ಸಾಲ ಮಾಡಿದ್ದರು. ಎರಡು ತಿಂಗಳ ಹಿಂದೆ ತಮ್ಮ ಜಮೀನಿನಲ್ಲಿ 4 ಕೊಳವೆ ಬಾವಿ ಕೊರೆಸಿದ್ದರೂ ನೀರು ಬಂದಿರಲಿಲ್ಲ. ಇದರಿಂದ ಸುಮಾರು 11 ಎಕರೆ ಜಮೀನಿನಲ್ಲಿರುವ ಕಬ್ಬು ಸಂಪೂರ್ಣ ಒಣಗಿ ಹೋಗಿರುವುದನ್ನು ಕಂಡು ಮನನೊಂದಿದ್ದ ಇವರು ಸೋಮವಾರ ತಮ್ಮ ತೋಟದ ಮನೆಯಲ್ಲಿ ವಿಷ ಸೇವಿಸಿದ್ದರು. ಕುಟುಂಬಸ್ಥರು ತಕ್ಷ ಣ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಕೆಎಲ್ಇ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.