ಆ್ಯಪ್ನಗರ

ಮಠಾಧೀಶರ ವೇದಿಕೆ ಪದಾಧಿಕಾರಿಗಳ ಆಯ್ಕೆ

ವಿಕ ಸುದ್ದಿಲೋಕ 3 Jul 2017, 2:00 am

ಗೋಕಾಕ: ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಗೋಕಾಕ ತಾಲೂಕು ಮಠಾಧೀಶರ ವೇದಿಕೆ ಪದಾಧಿಕಾರಿಗಳ ಆಯ್ಕೆ ಹಿನ್ನೆಲೆಯಲ್ಲಿ ಸಭೆ ಜರುಗಿತು.

ತಾಲೂಕು ಮಠಾಧೀಶರ ವೇದಿಕೆಯ ಗೌರವಾಧ್ಯಕ್ಷ ರಾಗಿ ಘೋಡಗೇರಿ ವಿರಕ್ತಮಠದ ಶ್ರೀ ಕಾಶೀನಾಥ ಸ್ವಾಮಿಗಳು, ಅಧ್ಯಕ್ಷ ರಾಗಿ ಗೋಕಾಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು, ಕಾರ್ಯಾಧ್ಯಕ್ಷ ರಾಗಿ ಹುಣಶ್ಯಾಳ ಪಿ.ಜಿ. ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವರು, ಕಾರ್ಯದರ್ಶಿಯಾಗಿ ಕಪರಟ್ಟಿ ಶ್ರೀ ಗುರುಮಹಾದೇವಾಶ್ರಮದ ಬಸವರಾಜ ಹಿರೇಮಠ, ಸದಸ್ಯರಾಗಿ ಮುನ್ಯಾಳದ ಶ್ರೀ ಶಿವಯೋಗೀಶ್ವರ ಮಠದ ಶ್ರೀ ಶಿವಲಿಂಗ ಮುರುಘರಾಜೇಂದ್ರ ಸ್ವಾಮಿಗಳು, ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಗಳು, ಹೊಸಯರಗುದ್ರಿಯ ಈರಲಿಂಗೇಶ್ವರ ಮಠದ ಶ್ರೀ ಸಿದ್ಧಪ್ರಭು ಸ್ವಾಮಿಗಳು, ಮನ್ನಿಕೇರಿಯ ಶ್ರೀ ಮಹಾಂತಲಿಂಗೇಶ್ವರ ಮಠದ ಶ್ರೀ ವಿಜಯ ಸಿದ್ಧೇಶ್ವರ ಸ್ವಾಮಿಗಳು, ಮಮದಾಪುರ ಶ್ರೀ ಚರಮೂರ್ತೇಶ್ವರ ಮಠದ ಶ್ರೀ ಡಾ.ಸಿದ್ಧಲಿಂಗ ದೇವರು, ಹೂಲಿಕಟ್ಟಿಯ ಶ್ರೀ ಶಿವಲಿಂಗೇಶ್ವರ ಮಠದ ಶ್ರೀ ಕುಮಾರ ದೇವರು, ತಳಕಟ್ನಾಳದ ಶ್ರೀ ಸಿದ್ಧಾರೂಢಮಠದ ಶ್ರೀ ಆತ್ಮಾನಂದ ಸ್ವಾಮಿಗಳು, ಹೊಸೂರದ ಶ್ರೀ ಸಂಗಮೇಶ್ವರ ಸ್ವಾಮಿಗಳು ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ನೂತನ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಮಠಾಧೀಶರು ತಮ್ಮ ಭಕ್ತರಿದ್ದಲ್ಲಿಯೇ ಹೋಗಿ ಅವರಿಗೆ ಅರಿವು ಮೂಡಿಸುವ ಕಾರ್ಯ ಇಂದಿನ ದಿನಗಳಲ್ಲಿ ಅವಶ್ಯವಿದೆ. ಆಧುನಿಕತೆಯ ಹೆಸರಿನಲ್ಲಿ ಯುವಜನಾಂಗ ದಾರಿ ತಪ್ಪುತ್ತಿದ್ದು, ಸಮಾಜದಲ್ಲಿ ಬದಲಾವಣೆ ತರಲು ನಾವಿಂದು ಶ್ರಮಿಸಬೇಕಾಗಿದೆ ಎಂದರು.

Vijaya Karnataka Web
ಮಠಾಧೀಶರ ವೇದಿಕೆ ಪದಾಧಿಕಾರಿಗಳ ಆಯ್ಕೆ


ಗೋಕಾಕ ತಾಲೂಕಿನ ಸಮಾನ ಮನಸ್ಕಮಠಾಧೀಶರು ಸೇರಿಕೊಂಡು ಈ ವೇದಿಕೆ ಮುಖಾಂತರ 'ಶ್ರೀಗಳ ನಡಿಗೆ ಜನಜಾಗೃತಿಯ ಕಡೆಗೆ' ಎನ್ನುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಆರೋಗ್ಯ, ಶಿಕ್ಷ ಣ, ಸ್ವಚ್ಛತೆ, ಕೈದಿಗಳ ಮನಪರಿವರ್ತನೆ, ರೈತರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಲಾಗುವುದು ಎಂದು ಅವರು ಹೇಳಿದರು. ಘಟಪ್ರಭಾದ ಮಹಾಂತೇಶ ಶಾಸ್ತ್ರಿಗಳು ಸ್ವಾಗತಿಸಿ, ವಂದಿಸಿದರು.

ಫೋಟೋ 02ಜಿವೋಕೆ 1

ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಗೋಕಾಕ ತಾಲೂಕು ಮಠಾಧೀಶರ ವೇದಿಕೆ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಪಾಲ್ಗೊಂಡ ಮಠಾಧೀಶರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ