ಆ್ಯಪ್ನಗರ

ರಸ್ತೆ ಅಪಘಾತ: ಇಬ್ಬರ ಸಾವು

ವಿಕ ಸುದ್ದಿಲೋಕ 6 Jul 2017, 2:00 am

ಬೆಳಗಾವಿ: ರಕ್ಕಸಕೊಪ್ಪ ರಸ್ತೆಯ ಬೆನಕನಹಳ್ಳಿ ಬಳಿ ಮಂಗಳವಾರ ಸಂಜೆ ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರೂ ಸವಾರರು ಮೃತಪಟ್ಟಿದ್ದಾರೆ. ತಾಲೂಕಿನ ಬೆಳಗುಂದಿಯ ಡಾ. ಚಂದ್ರಕಾಂತ ಜಂಬು ಬಿಂದಗೆ (60) ಸ್ಥಳದಲ್ಲೇ ಮೃತಪಟ್ಟರೆ, ಮಚ್ಛೆ ಗ್ರಾಮದ ವಿನಾಯಕ ಯಲ್ಲಪ್ಪ ಪಾಟೀಲ (24) ಜಿಲ್ಲಾ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

Vijaya Karnataka Web
ರಸ್ತೆ ಅಪಘಾತ: ಇಬ್ಬರ ಸಾವು


ವೈದ್ಯ ಚಂದ್ರಕಾಂತ ಬಿಂದಗೆ ಬೆಳಗಾವಿಯಿಂದ ಬೆಳಗುಂದಿ ಕಡೆಗೆ ಹಾಗೂ ಯುವಕ ವಿನಾಯಕ ಬೆಳಗುಂದಿಯಿಂದ ಬೆಳಗಾವಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ವಿನಾಯಕ ಅತಿವೇಗವಾಗಿ ಬಂದು ಅಪ್ಪಳಿಸಿದ್ದು ಅಪಘಾತಕ್ಕೆ ಕಾರಣವಾಗಿದೆ. ತೀವ್ರ ಗಾಯಗೊಂಡಿದ್ದ ವಿನಾಯಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ರಾತ್ರಿ ಮೃತಪಟ್ಟಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಪಿಎಸ್‌ಐಗಳಾದ ಅರ್ಜುನ ಹಂಚಿನಮನಿ, ಬಿ.ಜೆ. ನದಾಫ್‌, ಹವಾಲ್ದಾರ ಎಂಕೆ ಹಿರೇಮಠ ಮತ್ತು ಇತರರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡರು. ಪ್ರಕರಣ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ