ಆ್ಯಪ್ನಗರ

ಗುಣಮಟ್ಟದ ಸೀರೆ ಹಂಚಿ ಚುನಾಣೆ ಎದುರಿಸಲು ಸಿದ್ಧ

Vijaya Karnataka 28 Aug 2017, 2:00 am

ಬೆಳಗಾವಿ: ಸೀರೆ ಹಂಚಿಯೇ ಚುನಾವಣೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾದರೆ, ನಾನು ನಂಬಿದ ತತ್ವ ಸಿದ್ಧಾಂತವನ್ನು ಕೆಲಕಾಲ ಬದಿಗಿಟ್ಟು ಉತ್ತಮ ಗುಣಮಟ್ಟದ ಸೀರೆಯನ್ನೇ ಹಂಚಿ ಚುನಾವಣೆ ಎದುರಿಸಲೂ ಸಿದ್ಧ ಎಂದು ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಶಿವಬಸವ ನಗರದ ಕೆಪಿಟಿಸಿಎಲ್‌ ಸಭಾಭವನದಲ್ಲಿ ಸತೀಶ ಜಾರಕಿಹೊಳಿ ಅಭಿಮಾನಿ ಬಳಗದ ತಾಲೂಕು ಘಟಕದಿಂದ ಏರ್ಪಡಿಸಿದ್ದ ಸಮಾರಂಭದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿದ್ದಾಗ ನಾವು ಶೋಷಿತರ ಪರ ಮಾಡಿದ ಕೆಲಸಗಳು ಮುಖ್ಯ ಎಂದ ಅವರು, ಮೂರು ವರ್ಷಗಳ ಕಾಲ ಜಿಲ್ಲಾ ಉಸ್ತುವಾರಿ ಸಚಿವನಿದ್ದಾಗ ಜಿಲ್ಲೆಯ ಜನರ ಕಷ್ಟಗಳನ್ನು ಆಲಿಸುವ ಕೆಲಸ ಮಾಡಿದ್ದೇನೆ. ಈಗ ಸಚಿವ ಸ್ಥಾನ ಹೋಗಿರಬಹುದು, ಮತ್ತೆ ಬರಬಹುದು. ಆದರೆ ಜನರ ಕಷ್ಟಗಳನ್ನು ಆಲಿಸಿ, ಪರಿಹರಿಸುವ ಕಾರ್ಯ ಈಗಲೂ ನಿರಂತರವಾಗಿ ನಡೆದಿದೆ ಎಂದರು.

Vijaya Karnataka Web
ಗುಣಮಟ್ಟದ ಸೀರೆ ಹಂಚಿ ಚುನಾಣೆ ಎದುರಿಸಲು ಸಿದ್ಧ


800 ವರ್ಷ ಕಳೆದ ನಂತರ ಬಸವಣ್ಣನ ವಿಚಾರಗಳಿಗೆ ಮನ್ನಣೆ ಸಿಗುತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮದ ಕೂಗು ಕೋಮುವಾದಿ ಶಕ್ತಿಗಳ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಹೆಚ್ಚಿನ ಬಲ ನೀಡಿದೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಹೊಟ್ಟೆ ಉರಿ: ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ ಸೇರಿದಂತೆ ಉತ್ತಮ ಕುಲದಲ್ಲಿ ಜನಿಸಿದವರಿಂದ ಶೋಷಿತ ಸಮಾಜಕ್ಕೆ ಧ್ವನಿ ಸಿಕ್ಕಿಲ್ಲ. ಆದರೆ, ಬುದ್ಧ - ಬಸವ - ಅಂಬೇಡ್ಕರ್‌ ಶೋಷಿತರು ಸೇರಿದಂತೆ ಮಾನವ ಕುಲಕ್ಕೆ ದಾರಿದೀಪವಾಗಿದ್ದಾರೆ ಎಂದರು.

ಕರ್ನಾಟಕದಲ್ಲಿ ಮೇಲ್ವರ್ಗದ ಶಾಸಕರು, ಸಂಸದರು ಅದರಲ್ಲೂ ಲಿಂಗಾಯತ ಸಮಾಜದ ಶಾಸಕರು, ಸಂಸದರು ಲಿಂಗಾಯತ ಹೆಸರು ಹೇಳಲು ಹಿಂಜರಿಯುತ್ತಿದ್ದಾರೆ. ಅವರೆಲ್ಲರಿಗೂ ಬಸವಣ್ಣ ಎಂದರೆ ಹೊಟ್ಟೆ ಉರಿ ಎಂದು ಅವರು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ವೀರಕುಮಾರ ಪಾಟೀಲ, ರಾಜೇಂದ್ರ ಅಂಕಲಗಿ, ಸುನೀಲ ಹನುಮಣ್ಣವರ, ಲಕ್ಷ್ಮಣರಾವ್‌ ಚಿಂಗಳಿ, ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ ಮತ್ತಿತರರು ವೇದಿಕೆ ಮೇಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ