ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಬೃಹತ್ ಲಿಂಗಾಯತ ರಾರಯಲಿ ಹಾಗೂ ಅದರ ನೇತೃತ್ವ ವಹಿಸಿದ್ದ ನಾಗನೂರು ಸಿದ್ದರಾಮ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಂಸದ ಸುರೇಶ ಅಂಗಡಿ ಕೂಡಲೇ ಸ್ವಾಮೀಜಿಗಳ ಹಾಗೂ ಲಿಂಗಾಯತ ಸಮಾಜದವರ ಕ್ಷಮೆ ಕೇಳಬೇಕು ಎಂದು ಜಿಪಂ ಸದಸ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ. ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಡೆದ ರಾರಯಲಿಯನ್ನು ಕಾಂಗ್ರೆಸ್ ರಾರಯಲಿ ಎಂದು ಬಿಂಬಿಸಿದ್ದು ಅಂಗಡಿಯವರಿಗೆ ಶೋಭೆ ತರುವಂಥದ್ದಲ್ಲ. ಅವರು ಕ್ಷಮೆ ಕೇಳದಿದ್ದರೆ ಲಿಂಗಾಯತ ಸಮಾಜದ ಎಲ್ಲರೊಂದಿಗೆ ಅವರ ಮನೆ ಮುಂದೆ ಧರಣಿ ಕೂರಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಸಂಸದ ಸುರೇಶ ಅಂಗಡಿ ಕ್ಷಮೆ ಕೇಳಲಿ
Vijaya Karnataka 29 Aug 2017, 2:00 am