ಆ್ಯಪ್ನಗರ

ಸಮರ್ಪಕ ಚರಂಡಿ ವ್ಯವಸ್ಥೆಗೆ ಆಗ್ರಹ

ಹಣ್ಣಿಕೇರಿ: ಬೈಲಹೊಂಗಲ ತಾಲೂಕು ಸಂಪಗಾಂವ ಗ್ರಾಮದ ಮಲ್ಲಗೌಡ ಪ್ಲಾಟ್‌ ಓಣಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ...

Vijaya Karnataka 24 Aug 2018, 5:00 am
ಹಣ್ಣಿಕೇರಿ: ಬೈಲಹೊಂಗಲ ತಾಲೂಕು ಸಂಪಗಾಂವ ಗ್ರಾಮದ ಮಲ್ಲಗೌಡ ಪ್ಲಾಟ್‌ ಓಣಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಗ್ರಾಪಂ ಅಧ್ಯಕ್ಷ ಬಸವರಾಜ ನೇಸರಗಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web
ಸಮರ್ಪಕ ಚರಂಡಿ ವ್ಯವಸ್ಥೆಗೆ ಆಗ್ರಹ


ಓಣಿಯ ಎರಡೂ ಕಡೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಓಣಿಯ ನಿವಾಸಿಗಳ ದಿನಬಳಕೆಯ ನೀರು ರಸ್ತೆಗೆ ಹರಿದು ದುರ್ನಾತ ಬೀರುತ್ತಿದೆ. ಇಲ್ಲಿ ನಿರ್ಮಿಸಲಾದ ಮನೆಗಳ ಹಿಂಬದಿ ಚರಂಡಿ ಇದೆಯಾದರೂ ಅದೂ ಮುಚ್ಚಿ ಹೋಗಿರುವುದರಿಂದ ಶೌಚಾಲಯಗಳಿಂದ ಹರಿಯುವ ಮಲಮೂತ್ರ, ಹೊಸಲು ನೀರು ಅಲ್ಲಲ್ಲಿ ನಿಂತು ವಾತಾವರಣ ಹದಗೆಟ್ಟು ಹೋಗುತ್ತಿದೆ. ಕೆಲವು ಮನೆಗಳ ಒಳಗೂ ಹೊಲಸು ನೀರು ಹರಿಯುತ್ತಿದ್ದು ಜನರ ವಾಸಕ್ಕೂ ತೊಂದರೆಯಾಗಿದೆ. ಹೀಗಾಗಿ ಶೀಘ್ರ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮನವಿ ಸ್ವೀಕರಿಸಿದ ಗ್ರಾಪಂ ಅಧ್ಯಕ್ಷ ರು ಸೂಕ್ತ ಕ್ರಮ ಕೈಕೊಳ್ಳುವ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಂಜು ಉಳವಿ, ಬಾಬುಸಾಬ ನಗಾರಸಿ, ಕಮಲ ಅದೋನಿ, ಯಲ್ಲಪ್ಪ ನಾಅಯಕ, ಬಾಳಪ್ಪ ಭಜಂತ್ರಿ, ಮಲಿಕ ಇರಾಣಿ, ಹಸನ್‌ ಮುಲ್ಲಾ, ಅನಿಸಾ ಇರಾಣಿ, ಮಂಜುಳಾ ಹುಬ್ಬಳ್ಳಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ