ಆ್ಯಪ್ನಗರ

ಟ್ರ್ಯಾಕ್ಟರ್‌ಗೆ ಸಿಲುಕಿ ಮಹಿಳೆ ಸಾವು

ಗಳತಗಾ-ಭೀಮಾಪುರವಾಡಿ ರಸ್ತೆಯ ಗಳತಗಾ ಬಳಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ ಟ್ರಾಲಿ ಹಿಂಬದಿ ಚಕ್ರಕ್ಕೆ ಸಿಲುಕಿ ಕೂಲಿಕಾರ ಮಹಿಳೆಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ...

Vijaya Karnataka 19 Jan 2019, 5:00 am
ಬೋರಗಾಂವ: ಗಳತಗಾ-ಭೀಮಾಪುರವಾಡಿ ರಸ್ತೆಯ ಗಳತಗಾ ಬಳಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ ಟ್ರಾಲಿ ಹಿಂಬದಿ ಚಕ್ರಕ್ಕೆ ಸಿಲುಕಿ ಕೂಲಿಕಾರ ಮಹಿಳೆಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಅನಿತಾ ಗೋವರ್ಧನ ಮಗರ ಮೃತ ಮಹಿಳೆ. ಶಿರೋಳ ತಾಲೂಕಿನ ಟಾಕಳಿಯ ಗುರುದತ್ತ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡಲು ಆಗಮಿಸಿದ್ದ ಮಗರ ಕುಟುಂಬ ಕಲ್ಲೋಳ ಗ್ರಾಮದಲ್ಲಿ ಕಬ್ಬು ಕಟಾವು ಮಾಡುತ್ತಿತ್ತು. ಈ ಕುಟುಂಬದ ಅನಿತಾ ಹಾಗೂ ಪತಿ ಗೋವರ್ಧನ ಮಗರ ಸಂಬಂಧಿಕರ ಭೇಟಿಗಾಗಿ ಬೈಕ್‌ ಮೇಲೆ ಸಾಗುತ್ತಿದ್ದಾಗ ಗಳತಗಾ ಸಮೀಪ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ ಓವರ್‌ಟೇಕ್‌ ಮಾಡಲು ಹೋಗಿ ಬೈಕ್‌ ಹಿಂಬದಿ ಟ್ರಾಲಿಗೆ ಬಡಿದಿದೆ. ಈ ವೇಳೆ ಹಿಂಬದಿ ಕುಳಿತಿದ್ದ ಅನಿತಾ ಟ್ರಾಲಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್‌ ಚಾಲಕ ಪರಾರಿಯಾಗಿದ್ದು, ಸದಲಗಾ ಪಿಎಸ್‌ಐ ಸಂಗಮೇಶ ದಿಡಿಗನಾಳ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ