Please enable javascript.ಮದ್ಯಪಾನದಿಂದ ಹೆಂಡತಿ ಮಕ್ಕಳು ದೂರ - ಮದ್ಯಪಾನದಿಂದ ಹೆಂಡತಿ ಮಕ್ಕಳು ದೂರ - Vijay Karnataka

ಮದ್ಯಪಾನದಿಂದ ಹೆಂಡತಿ ಮಕ್ಕಳು ದೂರ

ವಿಕ ಸುದ್ದಿಲೋಕ 11 Jun 2014, 4:55 am
Subscribe

ಮೂಡಲಗಿ :ಬೆಂಕಿ ದೇಹವನ್ನು ಸುಟ್ಟರೆ, ಮದ್ಯ ಆತ್ಮವನ್ನು ಸುಡುತ್ತದೆ. ಮದ್ಯಪಾನದಿಂದ ಹೆಂಡತಿ ಮಕ್ಕಳು, ಆಸ್ತಿ, ಆರೋಗ್ಯ ಎಲ್ಲವನ್ನು ಕಳೆದುಕೊಳ್ಳುತ್ತೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಧಾರವಾಡದ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮಾ ಹೇಳಿದರು.

ಮದ್ಯಪಾನದಿಂದ ಹೆಂಡತಿ ಮಕ್ಕಳು ದೂರ
ಮೂಡಲಗಿ :ಬೆಂಕಿ ದೇಹವನ್ನು ಸುಟ್ಟರೆ, ಮದ್ಯ ಆತ್ಮವನ್ನು ಸುಡುತ್ತದೆ. ಮದ್ಯಪಾನದಿಂದ ಹೆಂಡತಿ ಮಕ್ಕಳು, ಆಸ್ತಿ, ಆರೋಗ್ಯ ಎಲ್ಲವನ್ನು ಕಳೆದುಕೊಳ್ಳುತ್ತೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಧಾರವಾಡದ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮಾ ಹೇಳಿದರು.

ಅವರು ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರದಲ್ಲಿ ಮಂಗಳವಾರ ಮಾತನಾಡಿ, ಜೀವನದಲ್ಲಿ ನಿಮಗೆ ಮದ್ಯವನ್ನು ಬಿಡುವಂತಹ ಅವಕಾಶವನ್ನು ಶ್ರೀ ಮಂಜುನಾಥ ಸ್ವಾಮಿಯು ಡಾ. ವಿರೇಂದ್ರ ಹೆಗ್ಗಡೆಯವರ ಮೂಲಕ ನಿಮಗೆಲ್ಲ ಹೊಸ ಜೀವನವನ್ನು ಮಾಡಲು ಅವಕಾಶ ಮಾಡಿ ಕೊಟ್ಟಿದ್ದು ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮದ್ಯ ಮುಕ್ತರಾಗಬೇಕೆಂದು ಹೇಳಿದರು. ಮದ್ಯವರ್ಜನ ಶಿಬಿರದಲ್ಲಿ 65 ಶಿಬಿರಾರ್ಥಿಗಳು ಭಾಗವಹಿಸಿದ್ದು ಅವರೆಲ್ಲ ಮದ್ಯ ಮುಕ್ತರಾಗುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆಂದು ಬೆಳಗಾವಿ ಜಿಲ್ಲಾ ನಿರ್ದೇಶಕ ಆನಂದ ಸುವರ್ಣ ಹೇಳಿದರು. ವಲಯ ಮೇಲ್ವಿಚಾರಕರಾದ ರಮೇಶ ಪಾಟೀಲ, ಮಹೇಂದ್ರ ಕುಮಾರ, ದೇಮಣ್ಣ ಉಪಸ್ಥಿತರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ