ಬೆಳಗಾವಿ :ಗ್ರಂಥಾಲಯ ವಿದ್ಯಾಲಯದ ಹೃದಯ ಇದ್ದಂತೆ. ಆಧುನಿಕ ತಂತ್ರಜ್ಞಾನದ ಗ್ರಂಥಾಲಯ ಒಂದು ಪುಟ್ಟ ಪ್ರಪಂಚವಿದ್ದಂತೆ. ಇಂಥ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ವಿಶ್ವಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಶರಥ ಅಲಬಾಳ ಹೇಳಿದರು.
ಅವರು ರಾಜೀವ ಗಾಂಧಿ ಆರೋಗ್ಯವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಕೆಎಲ್ಇ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಯುತ್ತಿರುವ ಆರೋಗ್ಯವಿಜ್ಞಾನ ಗ್ರಂಥಾಲಯ ಸಂಘದ 7ನೇ ರಾಜ್ಯ ಸಮಾವೇಶ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಇಂದು ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿದ್ದು, ವಿದ್ಯಾಲಯದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಮಾಜದ ಎಲ್ಲ ಜನತೆಗೆ ಜ್ಞಾನ ಒದಗಿಸುವಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಗ್ರಂಥಾಲಯಗಳ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಇದನ್ನ ಸರಿಯಾಗಿ ಉಪಯೋಗಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಕೆಎಲ್ಇ ವಿಶ್ವವಿದ್ಯಾಲಯದ ಜೆ.ಎನ್. ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ. ನಿರಂಜನ ಮಹಂತಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಪುಸ್ತಕ ಓದುವ ಹವ್ಯಾಸ ಇರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇನ್ನೂ ಇದ್ದಾರೆ. ಪುಸ್ತಕ ಓದುವಾಗ ಸಿಗುವ ಅನುಭವ, ಖುಷಿ ಬೇರಡೆ ಸಿಗುವುದಿಲ್ಲ. ಗ್ರಂಥಾಲಯ ವಿದ್ಯಾಲಯದ ದೇವಾಲಯವಿದ್ದಂತೆ ಎಂದರು.
ಕರ್ನಾಟಕ ಆರೋಗ್ಯವಿಜ್ಞಾನ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಪಿ.ಎಸ್. ಮಹೇಶ ‘ಜ್ಞಾನದೀಪ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಆರೋಗ್ಯವಿಜ್ಞಾನ ವಿಶ್ವವಿದ್ಯಾಲಯದ ಗ್ರಂಥಪಾಲಕರಾಗಿ ಸ್ಮರಣೀಯ ಸೇವೆ ಸಲ್ಲಿಸಿದ್ದ ಡಾ.ಎಚ್.ಎಸ್. ಸಿದ್ದಮಲ್ಲಯ್ಯ ಹಾಗೂ ವಿ.ಎಸ್. ಶೆಟ್ಟಿ ಅವರನ್ನು ಸಂಘದ ವತಿಯಂದ ಸನ್ಮಾನಿಸಲಾಯಿತು.
ಸಮ್ಮೇಳನದ ಸಂಘಟನಾ ಕಾರ್ಯಾಧ್ಯಕ್ಷ ಡಾ.ವಿ.ಡಿ. ಪಾಟಿಲ್ ಸ್ವಾಗತಿಸಿದರು. ಯುಎಸ್ಎಂ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಚ್.ಎಸ್. ಸಿದ್ದಮಲ್ಲಯ್ಯ ಸಮ್ಮೇಳನ ಕುರಿತು ಹಾಗೂ ಮುಖ್ಯಾಂಶಗಳನ್ನು ತಿಳಿಸಿದರು.
ಕರ್ನಾಟಕ ಆರೋಗ್ಯವಿಜ್ಞಾನ ಗ್ರಂಥಾಲಯ ಸಂಘದ ಕಾರ್ಯದರ್ಶಿ ಡಾ.ವೆಂಕಟೇಶ ಸಂಘದ ವರದಿ ವಾಚಿಸಿದರು. ಸಮ್ಮೇಳನದ ಸಂಘಟನ ಕಾರ್ಯದರ್ಶಿ ರವಿ ಶಿವನಾಯ್ಕರ್, ಡಾ.ಎಚ್.ಬಿ. ರಾಜಶೇಖರ ಉಪಸ್ಥಿತರಿದ್ದರು. ಡಾ.ವಿ.ಎಂ. ಪಟ್ಟಣಶೆಟ್ಟಿ ವಂದಿಸಿದರು. ‘ವೆಬ್ ಸ್ಕೇಲ್ ಲೈಬ್ರರಿ ಮ್ಯಾನೇಜ್ಮೆಂಟ್ ಸಿಸ್ಟಮ್’ ಥೀಮ್ ಮೇಲೆ ನಡೆದ ಈ ಸಮಾವೇಶಕ್ಕೆ ಕರ್ನಾಟಕದ ಎಲ್ಲ ಮೆಡಿಕಲ್, ದಂತ, ಔಷಧ, ಶುಶ್ರುಷ, ಭೌತಿಕ ವಿಜ್ಞಾನ ಹಾಗೂ ಇತರ ಆರೋಗ್ಯವಿಜ್ಞಾನ ವಿದ್ಯಾಲಯಗಳಿಂದ 150 ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 25 ಪ್ರಬಂಧಗಳು ಸಮಾವೇಶದಲ್ಲಿ ಮಂಡನೆಯಾಗಲಿವೆ.
ಅವರು ರಾಜೀವ ಗಾಂಧಿ ಆರೋಗ್ಯವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಕೆಎಲ್ಇ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಯುತ್ತಿರುವ ಆರೋಗ್ಯವಿಜ್ಞಾನ ಗ್ರಂಥಾಲಯ ಸಂಘದ 7ನೇ ರಾಜ್ಯ ಸಮಾವೇಶ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಇಂದು ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿದ್ದು, ವಿದ್ಯಾಲಯದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಮಾಜದ ಎಲ್ಲ ಜನತೆಗೆ ಜ್ಞಾನ ಒದಗಿಸುವಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಗ್ರಂಥಾಲಯಗಳ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಇದನ್ನ ಸರಿಯಾಗಿ ಉಪಯೋಗಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಕೆಎಲ್ಇ ವಿಶ್ವವಿದ್ಯಾಲಯದ ಜೆ.ಎನ್. ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ. ನಿರಂಜನ ಮಹಂತಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಪುಸ್ತಕ ಓದುವ ಹವ್ಯಾಸ ಇರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇನ್ನೂ ಇದ್ದಾರೆ. ಪುಸ್ತಕ ಓದುವಾಗ ಸಿಗುವ ಅನುಭವ, ಖುಷಿ ಬೇರಡೆ ಸಿಗುವುದಿಲ್ಲ. ಗ್ರಂಥಾಲಯ ವಿದ್ಯಾಲಯದ ದೇವಾಲಯವಿದ್ದಂತೆ ಎಂದರು.
ಕರ್ನಾಟಕ ಆರೋಗ್ಯವಿಜ್ಞಾನ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಪಿ.ಎಸ್. ಮಹೇಶ ‘ಜ್ಞಾನದೀಪ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಆರೋಗ್ಯವಿಜ್ಞಾನ ವಿಶ್ವವಿದ್ಯಾಲಯದ ಗ್ರಂಥಪಾಲಕರಾಗಿ ಸ್ಮರಣೀಯ ಸೇವೆ ಸಲ್ಲಿಸಿದ್ದ ಡಾ.ಎಚ್.ಎಸ್. ಸಿದ್ದಮಲ್ಲಯ್ಯ ಹಾಗೂ ವಿ.ಎಸ್. ಶೆಟ್ಟಿ ಅವರನ್ನು ಸಂಘದ ವತಿಯಂದ ಸನ್ಮಾನಿಸಲಾಯಿತು.
ಸಮ್ಮೇಳನದ ಸಂಘಟನಾ ಕಾರ್ಯಾಧ್ಯಕ್ಷ ಡಾ.ವಿ.ಡಿ. ಪಾಟಿಲ್ ಸ್ವಾಗತಿಸಿದರು. ಯುಎಸ್ಎಂ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಚ್.ಎಸ್. ಸಿದ್ದಮಲ್ಲಯ್ಯ ಸಮ್ಮೇಳನ ಕುರಿತು ಹಾಗೂ ಮುಖ್ಯಾಂಶಗಳನ್ನು ತಿಳಿಸಿದರು.
ಕರ್ನಾಟಕ ಆರೋಗ್ಯವಿಜ್ಞಾನ ಗ್ರಂಥಾಲಯ ಸಂಘದ ಕಾರ್ಯದರ್ಶಿ ಡಾ.ವೆಂಕಟೇಶ ಸಂಘದ ವರದಿ ವಾಚಿಸಿದರು. ಸಮ್ಮೇಳನದ ಸಂಘಟನ ಕಾರ್ಯದರ್ಶಿ ರವಿ ಶಿವನಾಯ್ಕರ್, ಡಾ.ಎಚ್.ಬಿ. ರಾಜಶೇಖರ ಉಪಸ್ಥಿತರಿದ್ದರು. ಡಾ.ವಿ.ಎಂ. ಪಟ್ಟಣಶೆಟ್ಟಿ ವಂದಿಸಿದರು. ‘ವೆಬ್ ಸ್ಕೇಲ್ ಲೈಬ್ರರಿ ಮ್ಯಾನೇಜ್ಮೆಂಟ್ ಸಿಸ್ಟಮ್’ ಥೀಮ್ ಮೇಲೆ ನಡೆದ ಈ ಸಮಾವೇಶಕ್ಕೆ ಕರ್ನಾಟಕದ ಎಲ್ಲ ಮೆಡಿಕಲ್, ದಂತ, ಔಷಧ, ಶುಶ್ರುಷ, ಭೌತಿಕ ವಿಜ್ಞಾನ ಹಾಗೂ ಇತರ ಆರೋಗ್ಯವಿಜ್ಞಾನ ವಿದ್ಯಾಲಯಗಳಿಂದ 150 ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 25 ಪ್ರಬಂಧಗಳು ಸಮಾವೇಶದಲ್ಲಿ ಮಂಡನೆಯಾಗಲಿವೆ.