ಆ್ಯಪ್ನಗರ

ರಾಮದುರ್ಗದಲ್ಲಿ 10 ಹೊಸ ಕೊಳವೆ ಬಾವಿ

ರಾಮದುರ್ಗ : ಬಿಸಿಲ ಬೇಗೆ ಹೆಚ್ಚಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಮುನ್ಸೂಚನೆ ಇದ್ದು, ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಜನರಿಗೆ ಕುಡಿಯುವ ನೀರು ಪೂರೈಸಲು 10 ಹೊಸ ಕೊಳವೆ ಬಾವಿ ಕೊರೆಸಲಾಗುವುದು ಎಂದು ಪುರಸಭೆ ಸದಸ್ಯ ರಾಜು ಮಾನೆ ತಿಳಿಸಿದರು.

Vijaya Karnataka Web 16 Mar 2016, 3:51 am
ರಾಮದುರ್ಗ : ಬಿಸಿಲ ಬೇಗೆ ಹೆಚ್ಚಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಮುನ್ಸೂಚನೆ ಇದ್ದು, ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಜನರಿಗೆ ಕುಡಿಯುವ ನೀರು ಪೂರೈಸಲು 10 ಹೊಸ ಕೊಳವೆ ಬಾವಿ ಕೊರೆಸಲಾಗುವುದು ಎಂದು ಪುರಸಭೆ ಸದಸ್ಯ ರಾಜು ಮಾನೆ ತಿಳಿಸಿದರು.
Vijaya Karnataka Web  10
ರಾಮದುರ್ಗದಲ್ಲಿ 10 ಹೊಸ ಕೊಳವೆ ಬಾವಿ


ಪಟ್ಟಣದ ಪಡಕೋಟಗಲ್ಲಿಯ 1 ಮತ್ತು 2 ನೇ ವಾರ್ಡಿನಲ್ಲಿ ಕುಡಿಯುವ ನೀರಿಗಾಗಿ ಪುರಸಭೆಯಿಂದ ಕೊಳವೆ ಬಾವಿ ಕೊರೆಸಲು ಬೋರ್‌ವೆಲ್ ವಾಹನಕ್ಕೆ ಮಂಗಳವಾರ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕುಡಿಯುವ ನೀರು ಪೂರೈಕೆ ಅನುದಾನದಲ್ಲಿ ಪಡಕೋಟ, ನೇಕಾರಪೇಠ, ರಾಧಾಪೂರಪೇಠ, ವಿಠ್ಠಲಪೇಠ, ಲಕ್ಷ್ಮೀನಗರ, ಸರಸ್ವತಿ ನಗರ, ಆಶ್ರಯ ಬಡಾವಣೆ ಸೇರಿದಂತೆ ಇನ್ನಿತರ ವಾರ್ಡ್‌ಗಳಲ್ಲಿ ಕೊಳವೆ ಬಾವಿ ಕೊರೆಸಲಾಗುತ್ತಿದೆ. ಅಲ್ಲದೇ ಈಗಾಗಲೇ ಪಟ್ಟಣದಲ್ಲಿ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿಶ್ವನಾಥ ಸೊಗಲದ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಹುಸೇನಭಾಷಾ ಮೊರಬ, ಅಶೋಕ ಸೂಳಿಬಾವಿ, ಅಭಿಯಂತರ ಬಿ.ಎಸ್.ನದಾಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ