ಆ್ಯಪ್ನಗರ

ಕೊಲೆ ಪ್ರಕರಣ: ಪಾಲಿಕೆ ಸದಸ್ಯ ಸೇರಿದಂತೆ 13 ಜನ ನಿರ್ದೋಶಿ

ಬೆಳಗಾವಿ :2012ರಲ್ಲಿ ನಡೆದ ಕೊಲೆ ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ನ್ಯಾಯಾಲಯ ಮಹಾನಗರ ಪಾಲಿಕೆ ಸದಸ್ಯ ಸೇರಿದಂತೆ 13 ಆರೋಪಿಗಳನ್ನು ಸೋಮವಾರ ಆರೋಪ ಮುಕ್ತಗೊಳಿಸಿ ತೀರ್ಪು ನೀಡಿದೆ.

ವಿಕ ಸುದ್ದಿಲೋಕ 1 Mar 2016, 5:43 pm
ಬೆಳಗಾವಿ :2012ರಲ್ಲಿ ನಡೆದ ಕೊಲೆ ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ನ್ಯಾಯಾಲಯ ಮಹಾನಗರ ಪಾಲಿಕೆ ಸದಸ್ಯ ಸೇರಿದಂತೆ 13 ಆರೋಪಿಗಳನ್ನು ಸೋಮವಾರ ಆರೋಪ ಮುಕ್ತಗೊಳಿಸಿ ತೀರ್ಪು ನೀಡಿದೆ.
Vijaya Karnataka Web  13
ಕೊಲೆ ಪ್ರಕರಣ: ಪಾಲಿಕೆ ಸದಸ್ಯ ಸೇರಿದಂತೆ 13 ಜನ ನಿರ್ದೋಶಿ


2012ರ ಆಗಸ್ಟ್ 27 ರಂದು ಚಲನಚಿತ್ರ ವೀಕ್ಷಿಸಿ ನಗರದ ಹಳೇ ಪಿಬಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಗಡಿಂಗ್ಲಜ್ ತಾಲೂಕಿನ ಗಿಜೋನೆ ಗ್ರಾಮದ ಡಾ.ಚೇತನ ಅಪ್ಪಾಸಾಹೇಬ ಪಾಟೀಲ ಅವರನ್ನು ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ 13 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.

ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಟಿ.ವೆಂಕಟೇಶ್ ನಾಯಿಕ್ ಸೂಕ್ತ ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪಿಗಳನ್ನು ನಿರ್ದೋಶಿ ಎಂದು ತೀರ್ಪು ನೀಡಿದ್ದಾರೆ.

ಖತಾರ ಗಲ್ಲಿ ನಿವಾಸಿ, ಪಾಲಿಕೆ ಸದಸ್ಯ ಬಾಬು ಹಸನಸಾಬ್ ಮುಜಾವಾರ, ಮಾಳಿ ಗಲ್ಲಿಯ ಸಲ್ಮಾನ್ ದಲಾಯತ್, ರಿಜ್ವಾನ ದಲಾಯತ್, ತಬರೇಜ್ ಬಾತ್ಕಾಂಡೆ, ಉಜ್ವಲ ನಗರದ ನಯಿಮ್ ಸರಕವಾಸ್, ಕಲೆಗಾರ ಗಲ್ಲಿಯ ಸಯ್ಯದಅಲಿ ಖಾದ್ರಿ, ಖತಾರ ಗಲ್ಲಿಯ ನಯೀಮ ಶಿಲೆದಾರ, ಅಬ್ದುಲ್ ಮುಜಾವರ, ಖಂಜರ ಗಲ್ಲಿಯ ಅಲ್ತಾಫ್ ಸುಬೇದಾರ, ಕಾಮತ ಗಲ್ಲಿಯ ರಹಮತ್ ಶೇಖ್, ಶಿವಾಜಿ ಗಲ್ಲಿಯ ಮಜಹರ್ ಮಕಾನದಾರ, ಅಶೋಕ ನಗರದ ನಿಖಾಬ ಫಿರಜಾದೆ, ಖಂಜರ ಗಲ್ಲಿಯ ಸಲೀಂ ಸೌದಾಗರ ಅವರು ನಿರ್ದೋಶಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ವಿಚಾರಣೆ ಸಂದರ್ಭದಲ್ಲಿ ಒಟ್ಟು 20 ಸಾಕ್ಷಿ, 19 ಪುರಾವೆ ಮತ್ತು 55 ದಾಖಲೆ ಪತ್ರಗಳನ್ನು ಹಾಜರುಪಡಿಸಲಾಗಿತ್ತು.

ಜೀವ ಬೆದರಿಕೆ:ವಕೀಲ ಜಹೀರ್ ಅಬ್ಬಾಸ್ ದೂರು

ಬೆಳಗಾವಿ: ಅಪರಿಚಿತ ವ್ಯಕ್ತಿಗಳು ತಮಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಇಲ್ಲಿನ ವಕೀಲರೊಬ್ಬರು ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಹೀರ್‌ಅಬ್ಬಾಸ್ ಹತ್ತರಗಿ ದೂರು ನೀಡಿದವರು. ಅಪರಿಚಿತ ವ್ಯಕ್ತಿಗಳು ಸೋಮವಾರ ಲ್ಯಾಂಡ್‌ಲೈನ್ ಮೂಲಕ ಕರೆ ಮಾಡಿ ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಜಹೀರ್ ಅಬ್ಬಾಸ್ ದೂರಿನಲ್ಲಿ ತಿಳಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಡೆದ ಡಾ.ಚೇತನ್ ಪಾಟೀಲ ಕೊಲೆ ಪ್ರಕರಣ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಈ ಪ್ರಕರಣದ ಆರೋಪಿಗಳ ಪರ ಇವರು ವಕಾಲತ್ತು ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ