ಗೋಕಾಕ: ನಿನ್ನೆವರೆಗೂ ಅಶೋಕ್ ಪೂಜಾರಿಯ ಮನವೊಲಿಕೆ ಕಸರತ್ತು ನಡೆಸಿದ್ದ ರಮೇಶ್ ಜಾರಕಿಹೊಳಿ ಈಗ ಅವರ ವಿರುದ್ಧ ಹರಿಹಾಯ್ದಿದ್ದಾರೆ. ''ಜೆಡಿಎಸ್ನಿಂದ ಸ್ಪರ್ಧಿಸಿರುವ ಅವರು 10 ಸಾವಿರ ಮತ ಪಡೆಯಲಿ ನೋಡೋಣ'', ಎಂದು ಸವಾಲು ಹಾಕಿ ರಮೇಶ್, ''ಬಿಜೆಪಿಯಲ್ಲಿದ್ದ ಅವರು ಸಿಎಂ ಯಡಿಯೂರಪ್ಪ ಅವರಿಗೆ ಕೈಕೊಟ್ಟು ಸುಳ್ಳು ಪ್ರಚಾರ ಮಾಡಿ ರಾಜಕೀಯ ಮಾಡುತ್ತಿದ್ದಾರೆ. 2008ರ ಚುನಾವಣೆಯಲ್ಲೂಇದೇ ಪರಿಸ್ಥಿತಿ ಇತ್ತು. ಆಗ ಜನ ತಕ್ಕ ಪಾಠ ಕಲಿಸಿದ್ದಾರೆ. ಮಂಡ್ಯ ಲೋಕಸಭೆ ಚುನಾವಣೆಯಲ್ಲಿಸಾವಿರಾರು ಕೋಟಿ ರೂ. ಖರ್ಚು ಮಾಡಿದ ಕುಮಾರಸ್ವಾಮಿ ಅವರಿಗೆ ಜನ ಉತ್ತರ ಕೊಟ್ಟಿದ್ದಾರೆ'', ಎಂದರು.
ಪೂಜಾರಿ ವಿರುದ್ಧ ಹರಿಹಾಯ್ದ ರಮೇಶ್
ನಿನ್ನೆವರೆಗೂ ಅಶೋಕ್ ಪೂಜಾರಿಯ ಮನವೊಲಿಕೆ ಕಸರತ್ತು ನಡೆಸಿದ್ದ ರಮೇಶ್ ಜಾರಕಿಹೊಳಿ ಈಗ ಅವರ ವಿರುದ್ಧ ಹರಿಹಾಯ್ದಿದ್ದಾರೆ...
Vijaya Karnataka 19 Nov 2019, 5:00 am