ಆ್ಯಪ್ನಗರ

ಹೆಂಡತಿಯರ ಅಧಿಕಾರ ಗಂಡಂದಿರಿಂದ ಚಲಾವಣೆ!

ಬೆಳಗಾವಿ/ಅಥಣಿ: ಇಲ್ಲಿನ ತಾಲೂಕು ಪಂಚಾಯಿತಿ ಸಭೆಯಲ್ಲಿಜಿಲ್ಲಾಪಂಚಾಯಿತಿ ...

Vijaya Karnataka 18 Oct 2019, 5:00 am
ಬೆಳಗಾವಿ/ಅಥಣಿ: ಇಲ್ಲಿನ ತಾಲೂಕು ಪಂಚಾಯಿತಿ ಸಭೆಯಲ್ಲಿಜಿಲ್ಲಾಪಂಚಾಯಿತಿ ಚುನಾಯಿತ ಸದಸ್ಯೆಯರ ಪತಿಯಂದಿರು ವೇದಿಕೆ ಮೇಲೆ ಕುಳಿತು ಅಧಿಕಾರ ಚಲಾಯಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web 17 ATHANI-04_53


ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆಯವರ ಅಧ್ಯಕ್ಷತೆಯಲ್ಲಿತಾಪಂ ಸಭಾಭವನದಲ್ಲಿಅಧಿಕಾರಿಗಳ ಸಭೆ ನಡೆದಿತ್ತು. ಅಲ್ಲಿಮೋಳೆ ಕ್ಷೇತ್ರದ ಜಿಪಂ ಸದಸ್ಯೆ ಪುಟ್ಟರಾಜಮ್ಮ ತುಗಶೆಟ್ಟಿ ಅವರ ಬದಲಾಗಿ ಅವರ ಪತಿ ಶ್ರೀಶೈಲ ತುಗಶೆಟ್ಟಿ ಸಭೆಗೆ ಹಾಜರಾಗಿ ಪತ್ನಿ ಪರ ಅಧಿಕಾರ ಚಲಾಯಿಸಿದರು. ಅಥಣಿ ಗ್ರಾಮೀಣ ಜಿಪಂ ಸದಸ್ಯೆ ಶಕುಂತಲಾ ದಿವಾನಮಳ ಪರವಾಗಿ ಅವರ ಪತಿ ಶಿವಾನಂದ ದಿವಾನಮಳ ಜಿಪಂ ಅಧ್ಯಕ್ಷೆ ಪಕ್ಕದಲ್ಲೇ ವೇದಿಕೆಯಲ್ಲಿಕುಳಿತು ಅಧಿಕಾರ ಚಲಾಯಿಸಿದರು. ಇದರಿಂದ ಅಧಿಕಾರಿಗಳೂ ಮುಜುಗರಕ್ಕೆ ಒಳಗಾದರು.

ಸರಕಾರಿ ಸಭೆಯಲ್ಲಿಚುನಾಯಿತರಲ್ಲದ ಯಾವುದೇ ವ್ಯಕ್ತಿಗೆ ವೇದಿಕೆ ಬಳಸಿಕೊಳ್ಳಲು ಅವಕಾಶ ಇಲ್ಲ. ಇದನ್ನು ತಡೆಯುವುದು ಆಯಾ ಕಚೇರಿ ಮುಖ್ಯಸ್ಥರ ಜವಾಬ್ದಾರಿ. ಹಾಗಿದ್ದರೂ, ಸಭೆಗೆ ಬಂದ ಚುನಾಯಿತ ಸದಸ್ಯೆಯರ ಮಹಿಳೆಯರ ಪತಿ ಬಗ್ಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನವರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಲ್ಲದೆ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಸಹ ಈ ಬಗ್ಗೆ ಆಕ್ಷೇಪ ಎತ್ತದೆ ಇರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಸಭೆ ಅನೌಪಚಾರಿಕವಾಗಿತ್ತು. ಆಕಸ್ಮಿಕವಾಗಿ ಅಥಣಿ ಕಡೆ ಹೋಗಿದ್ದಾಗ ತಾಲೂಕು ಪಂಚಾಯಿತಿ ಸಭಾಭವನದಲ್ಲಿಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ನಡೆಸಿದ್ದರು. ಆ ವೇಳೆ ಜಿಪಂ ಸದಸ್ಯೆಯರ ಪತಿಯರು ಸಹ ಸಭೆಯಲ್ಲಿಪಾಲ್ಗೊಂಡಿದ್ದು ನಿಜ.
- ಆಶಾ ಐಹೊಳೆ, ಜಿಪಂ ಅಧ್ಯಕ್ಷೆ.

ಸರಕಾರಿ ಕಚೇರಿಯ ಯಾವುದೇ ಸಭೆಯಲ್ಲಿಚುನಾಯಿತರಲ್ಲದವರು ವೇದಿಕೆ ಅಲಂಕರಿಸುವುದು ತಪ್ಪು. ಅಥಣಿಯಲ್ಲಿಇಂಥ ಘಟನೆ ನಡೆದಿದ್ದರೆ ಅದಕ್ಕೆ ಅಲ್ಲಿನ ತಾಪಂ ಇಒ ಅವರೇ ಹೊಣೆಗಾರರು. ಈ ಬಗ್ಗೆ ಅವರಿಂದ ವಿವರಣೆ ಕೇಳುತ್ತೇವೆ.
- ಕೆ.ವಿ. ರಾಜೇಂದ್ರ, ಜಿಪಂ ಸಿಇಒ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ