ಆ್ಯಪ್ನಗರ

ಸೇತುವೆ ನಿರ್ಮಾಣಕ್ಕೆ 10 ಕೋಟಿ ರೂ. ಪ್ರಸ್ತಾವ

ಬೈಲಹೊಂಗಲ: ಆರು ಕೋಟಿ ರೂ ವೆಚ್ಚದಲ್ಲಿ ಹೊಸೂರ ಗ್ರಾಮದ ಅಭಿವೃದ್ಧಿ ಕಾಮಗಾರಿಗಳು ಚಾಲನೆಯಲ್ಲಿದ್ದು, 40 ಕೋಟಿ ರೂ...

Vijaya Karnataka 19 Jun 2019, 5:00 am
ಬೈಲಹೊಂಗಲ: ಆರು ಕೋಟಿ ರೂ. ವೆಚ್ಚದಲ್ಲಿ ಹೊಸೂರ ಗ್ರಾಮದ ಅಭಿವೃದ್ಧಿ ಕಾಮಗಾರಿಗಳು ಚಾಲನೆಯಲ್ಲಿದ್ದು, 40 ಕೋಟಿ ರೂ. ವೆಚ್ಚದ ಬೈಲಹೊಂಗಲ ಬಡ್ಲಿ ರಸ್ತೆ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
Vijaya Karnataka Web BEL-18HTP1


ಅವರು ಸಮೀಪದ ಹೊಸೂರ ಗ್ರಾಮದಲ್ಲಿ ಕಾರ ಹುಣ್ಣಿಮೆ ನಿಮಿತ್ತ ನಡೆದ ಗ್ರಾಮದೇವತೆಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.

10 ಕೋಟಿ ರೂ. ವೆಚ್ಚದ ದೊಡ್ಡ ಹಳ್ಳದ ಸೇತುವೆ ನಿರ್ಮಾಣ ಕಾಮಗಾರಿಗೆ ಸರಕಾರದ ಅನುಮೋದನೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಆರಾಧ್ಯ ಯೋಜನೆಯಡಿ ಗ್ರಾಮದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 1 ಲಕ್ಷ ರೂ. ಅನುದಾನ ಮೂರು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ಜಾತ್ರಾ ಸಮಿತಿ ಸದಸ್ಯ ಮಲ್ಲಿಕಾರ್ಜುನ ಹುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ , ಹಾಲಿ ನಿರ್ದೇಶಕ ಬಸವರಾಜ ಬಾಳೇಕುಂದರಗಿ, ಅಧ್ಯಕ್ಷ ಗುರುಪುತ್ರಪ್ಪಾ ಹೊಸಮನಿ, ಬೆಳಗಾವಿ ಸಹಕಾರಿ ಯೂನಿಯನ್‌ ನಿರ್ದೇಶಕ ಈಶ್ವರಚಂದ್ರ ಇಂಗಳಗಿ, ನ್ಯಾಯವಾದಿ ಮಹಾಂತೇಶ ಮತ್ತಿಕೊಪ್ಪ, ಪ್ರಕಾಶ ಬಾಳೇಕುಂದರಗಿ (ಮೂಗಬಸವ), ಬಸವರಾಜ ಮೋದಗಿ, ಮೋಹನ ಅಂಗಡಿ, ಎಪಿಎಂಸಿ ಸದಸ್ಯ ಎಫ್‌.ಎಸ್‌. ಸಿದ್ದನಗೌಡರ, ತಾಪಂ ಸದಸ್ಯ ಜಗದೀಶ ಬೂದಿಹಾಳ, ಪಿಕೆಪಿಎಸ್‌ ಅಧ್ಯಕ್ಷ ಸೋಮಲಿಂಗ ಚಳಕೊಪ್ಪ, ಗ್ರಾಪಂ ಅಧ್ಯಕ್ಷೆ ಪಾರ್ವತಿ ಮೂಗಬಸವ ಸೇರಿದಂತೆ ಇತರ ಗಣ್ಯರನ್ನು ಸತ್ಕರಿಸಲಾಯಿತು.

ಸಮಿತಿಯ ಮುಖಂಡರಾದ ಗುರುಲಿಂಗಪ್ಪ ಇಂಗಳಗಿ, ಚನ್ನಪ್ಪ ಬಾಳೇಕುಂದರಗಿ, ಈರಪ್ಪ ಮೆಳ್ಳಿಕೇರಿ, ಶಿವಪ್ಪ ಚಿಗರಿ, ಶಶಿಧರ ಪಾಟೀಲ, ಶಿವಪ್ಪಾ ಅರೇರ, ಮಹಾಂತೇಶ ಮುನೇಶ್ವರಮಠ, ಬಸಪ್ಪ ಸಂಪಗಾಂವ, ಧರೆಪ್ಪ ಜೋತಗನ್ನವರ, ಮುನೀರ ಶೇಖ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಸೋಮಲಿಂಗ ಮೆಳ್ಳಿಕೇರಿ ಸ್ವಾಗತಿಸಿದರು. ಬಸಪ್ಪ ಬಾಳೇಕುಂದರಗಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ