ಆ್ಯಪ್ನಗರ

ಪ್ರವಾಹ ಸಂತ್ರಸ್ತರಿಗೆ ಸಹಕಾರಿ ಬ್ಯಾಂಕ್‌ನಿಂದ 10 ಲಕ್ಷ ಸಹಾಯಧನ

ಚಿಕ್ಕೋಡಿ: ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದಿಂದ ನಿರೀಕ್ಷೆ ...

Vijaya Karnataka 25 Aug 2019, 5:00 am
ಚಿಕ್ಕೋಡಿ: ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದಿಂದ ನಿರೀಕ್ಷೆ ಮೀರಿದ ಹಾನಿಯಾಗಿರುವುದರಿಂದ ಬ್ಯಾಂಕ್‌ನಿಂದ ನೆರೆ ಸಂತ್ರಸ್ತರಿಗೆ 10ಲಕ್ಷ ರೂ. ಸಹಾಯಧನ ನೀಡಲಾಗುವುದು ಎಂದು ಡಿ.ಟಿ. ಪಾಟೀಲ ಕೋ-ಆಪ್‌ ಬ್ಯಾಂಕ್‌ ಅಧ್ಯಕ್ಷ ಡಿ.ಟಿ. ಪಾಟೀಲ ಹೇಳಿದರು.
Vijaya Karnataka Web BEL-24CKD1


ಪಟ್ಟಣದ ಬ್ಯಾಂಕ್‌ ಸಭಾಭವನದಲ್ಲಿ ಶನಿವಾರ ನಡೆದ 39ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

ನೆರೆಯಲ್ಲಿ ಸಿಲುಕಿ ಮನೆ-ಮಠ ಕಳೆದುಕೊಂಡು ಅನೇಕರ ಬದುಕು ಬೀದಿಗೆ ಬಂದಿದೆ. ಅವರ ಬದುಕು ರೂಪಿಸುವಲ್ಲಿ ಬ್ಯಾಂಕ್‌ನಿಂದ ಅಗತ್ಯ ಸಹಾಯ ಸಹಕಾರ ನೀಡಲಾಗುವುದು. ಸರಕಾರ ಪಕ್ಷ ಪಾತ ಮಾಡದೆ ಪ್ರತಿಯೊಬ್ಬರಿಗೂ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದರು.

ಬ್ಯಾಂಕ್‌ 2018-19 ನೇ ಸಾಲಿನಲ್ಲಿ 1.31 ಕೋಟಿ ರೂ.ಶೇರು ಬಂಡವಾಳ ಹೊಂದಿದೆ. 41.79 ಕೋಟಿ ರೂ. ಠೇವಣಿ ಇದೆ. 9.44 ಕೋಟಿ ರೂ.ನಿಧಿಗಳು, 53.68 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 29.25 ಕೋಟಿ ರೂ. ಸಾಲ ವಿತರಿಸಿದ್ದು, 51.17 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದರು.

ಬ್ಯಾಂಕ್‌ ಉಪಾಧ್ಯಕ್ಷ ಎಂ.ಎಸ್‌.ಕಲಾದಗಿಮಠ, ನಿರ್ದೇಶಕ ಆರ್‌.ಬಿ.ಡಂಬಳ, ರಮೇಶ ಐ.ದೊಡಮನಿ, ಸಿ.ಎಸ್‌. ಪಾಟೀಲ, ಆರ್‌.ಡಿ.ಪಾಟೀಲ, ಎಸ್‌.ಬಿ. ಕುಂಬಾರ, ಡಿ.ಎಲ್‌. ಹಾಲಪ್ಪಗೋಳ, ಎಸ್‌.ಎಂ. ಯಾದಗೂಡೆ ಸೇರಿದಂತೆ ಬ್ಯಾಂಕ್‌ನ ಸರ್ವಸದಸ್ಯರು ಉಪಸ್ಥಿತರಿದ್ದರು.

ನಿರ್ದೇಶಕ ಎಸ್‌.ಈ. ಪಾಟೀಲ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಎ.ಎಸ್‌. ಮಾಸ್ತಿ ವಾರ್ಷಿಕ ವರದಿ ವಾಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ