ಬೆಳಗಾವಿ: ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಇಬ್ಬರು ಸೇರಿ ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ 11 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ರಾಯಬಾಗ ಕುಡಚಿಯ 70 ವರ್ಷದ ವೃದ್ಧ ಮತ್ತು ಬೆಳಗಾವಿ ವೀರಭದ್ರ ನಗರದ 48 ವರ್ಷದ ವ್ಯಕ್ತಿ ಶನಿವಾರ ಮೃತಪಟ್ಟಿದ್ದರು. ಇಬ್ಬರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರು ಸೇರಿದಂತೆ ಭಾನುವಾರ ಬೆಳಗಾವಿಯಲ್ಲಿ4, ಅಥಣಿಯಲ್ಲಿ5, ರಾಯಬಾಗ ಮತ್ತು ಸವದತ್ತಿಯಲ್ಲಿತಲಾ ಒಂದು ಕೊರೊನಾ ಹೊಸ ಪ್ರಕರಣ ದಾಖಲಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿಕೊರೊನಾ ಸೋಂಕಿಗೆ ಒಳಗಾದವರ ಸಂಖ್ಯೆ 388ಕ್ಕೆ ಏರಿದೆ. ಅದರಲ್ಲಿ308 ಜನರು ಈಗಾಗಲೇ ಗುಣಮುಖರಾಗಿದ್ದು, 74 ಸಕ್ರಿಯ ಪ್ರಕರಣಗಳು ಉಳಿದುಕೊಂಡಿವೆ. ಈವರೆಗೆ ಜಿಲ್ಲೆಯಲ್ಲಿಒಟ್ಟು ಆರು ಜನ ಕೊರೊನಾದಿಂದ ಮೃತಪಟ್ಟಿದ್ದಾರೆ.
5 ದಿನಗಳಲ್ಲಿ 50 ಹೊಸ ಪ್ರಕರಣ
ಜಿಲ್ಲೆಯಲ್ಲಿಕೊರೊನಾ ಪ್ರಕರಣಗಳ ಸಂಖ್ಯೆ ಅಪಾಯಕಾರಿಯಾಗಿ ಬೆಳೆಯುತ್ತಿದೆ. ವಾರದ ಹಿಂದೆ 24 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಆರೇ ದಿನಗಳಲ್ಲಿ74ಕ್ಕೆ ಏರಿದೆ. ಕೇವಲ ಐದು ದಿನಗಳಲ್ಲಿಯೇ ಸುಮಾರು 50 ಹೊಸ ಪ್ರಕರಣಗಳು ಜಿಲ್ಲೆಯಲ್ಲಿದಾಖಲಾಗಿವೆ. ಐವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟಿರುವವರ ಪ್ರಯಾಣ ಹಿನ್ನೆಲೆಯೂ ಸ್ಪಷ್ಟವಾಗಿಲ್ಲ. ಪ್ರಾಥಮಿಕ ಸಂಪರ್ಕದ ಮೂಲವೂ ಸ್ಪಷ್ಟವಾಗಿಲ್ಲ. ಇಷ್ಟು ದಿನ ಮಹಾರಾಷ್ಟ್ರದ ಕೊರೊನಾ ರಾಜ್ಯವನ್ನು ಕಾಡಿತ್ತು. ಈಗ ಬೆಂಗಳೂರು ಪ್ರಯಾಣ ಮಾಡಿದವರಲ್ಲಿಕೊರೊನಾ ಕಾಣಿಸಿಕೊಂಡ ಕಾರಣಕ್ಕೆ ಅನೇಕ ಜಿಲ್ಲೆಗಳು ಬೆಂಗಳೂರು ಪ್ರಯಾಣಿಕರ ಮೇಲೆ ನಿಗಾ ಇಡುತ್ತಿದೆ. ಜಿಲ್ಲೆಯಲ್ಲಿಅಂಥ ಕ್ರಮ ಕೈಗೊಂಡಿರುವ ಬಗ್ಗೆ ಜಿಲ್ಲಾಡಳಿತ ಸ್ಪಷ್ಟವಾಗಿ ಹೇಳಿಲ್ಲ. ಜಿಲ್ಲೆಯಲ್ಲಿಮೃತಪಟ್ಟಿರುವ ಐವರು ಕೊನೆ ಕ್ಷಣದಲ್ಲಿಜಿಲ್ಲಾಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದಾರೆ.
ಕೊರೊನಾ ಸೋಂಕಿನ ಲಕ್ಷಣ ಇರುವವರು ಸ್ವಯಂ ಔಷಧ ಮಾಡಿಕೊಳ್ಳದೆ, ಲಕ್ಷಣ ಕಂಡ ತಕ್ಷಣ ಆಸ್ಪತ್ರೆಗೆ ಬರಬೇಕು ಎಂದು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ…) ನಿರ್ದೇಶಕ ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.
ರಾಜ್ಯ ಸರಕಾರದ ಮಾನದಂಡದ ಪ್ರಕಾರ ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಬಂದವರನ್ನು ಮಾತ್ರ ಕ್ವಾರಂಟೈನ್ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಬಂದವರನ್ನು ಪರಿಶೀಲಿಸುವ ನಿಯಮ ಇಲ್ಲ. ಜಿಲ್ಲೆಯಲ್ಲಿಸೋಂಕಿತರ ಮರಣ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಕೊರೊನಾ ವಿಷಯದಲ್ಲಿಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ.
- ಎಂ.ಜಿ. ಹಿರೇಮಠ, ಬೆಳಗಾವಿ ಜಿಲ್ಲಾಧಿಕಾರಿ
ರಾಯಬಾಗ ಕುಡಚಿಯ 70 ವರ್ಷದ ವೃದ್ಧ ಮತ್ತು ಬೆಳಗಾವಿ ವೀರಭದ್ರ ನಗರದ 48 ವರ್ಷದ ವ್ಯಕ್ತಿ ಶನಿವಾರ ಮೃತಪಟ್ಟಿದ್ದರು. ಇಬ್ಬರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರು ಸೇರಿದಂತೆ ಭಾನುವಾರ ಬೆಳಗಾವಿಯಲ್ಲಿ4, ಅಥಣಿಯಲ್ಲಿ5, ರಾಯಬಾಗ ಮತ್ತು ಸವದತ್ತಿಯಲ್ಲಿತಲಾ ಒಂದು ಕೊರೊನಾ ಹೊಸ ಪ್ರಕರಣ ದಾಖಲಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿಕೊರೊನಾ ಸೋಂಕಿಗೆ ಒಳಗಾದವರ ಸಂಖ್ಯೆ 388ಕ್ಕೆ ಏರಿದೆ. ಅದರಲ್ಲಿ308 ಜನರು ಈಗಾಗಲೇ ಗುಣಮುಖರಾಗಿದ್ದು, 74 ಸಕ್ರಿಯ ಪ್ರಕರಣಗಳು ಉಳಿದುಕೊಂಡಿವೆ. ಈವರೆಗೆ ಜಿಲ್ಲೆಯಲ್ಲಿಒಟ್ಟು ಆರು ಜನ ಕೊರೊನಾದಿಂದ ಮೃತಪಟ್ಟಿದ್ದಾರೆ.
5 ದಿನಗಳಲ್ಲಿ 50 ಹೊಸ ಪ್ರಕರಣ
ಜಿಲ್ಲೆಯಲ್ಲಿಕೊರೊನಾ ಪ್ರಕರಣಗಳ ಸಂಖ್ಯೆ ಅಪಾಯಕಾರಿಯಾಗಿ ಬೆಳೆಯುತ್ತಿದೆ. ವಾರದ ಹಿಂದೆ 24 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಆರೇ ದಿನಗಳಲ್ಲಿ74ಕ್ಕೆ ಏರಿದೆ. ಕೇವಲ ಐದು ದಿನಗಳಲ್ಲಿಯೇ ಸುಮಾರು 50 ಹೊಸ ಪ್ರಕರಣಗಳು ಜಿಲ್ಲೆಯಲ್ಲಿದಾಖಲಾಗಿವೆ. ಐವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟಿರುವವರ ಪ್ರಯಾಣ ಹಿನ್ನೆಲೆಯೂ ಸ್ಪಷ್ಟವಾಗಿಲ್ಲ. ಪ್ರಾಥಮಿಕ ಸಂಪರ್ಕದ ಮೂಲವೂ ಸ್ಪಷ್ಟವಾಗಿಲ್ಲ. ಇಷ್ಟು ದಿನ ಮಹಾರಾಷ್ಟ್ರದ ಕೊರೊನಾ ರಾಜ್ಯವನ್ನು ಕಾಡಿತ್ತು. ಈಗ ಬೆಂಗಳೂರು ಪ್ರಯಾಣ ಮಾಡಿದವರಲ್ಲಿಕೊರೊನಾ ಕಾಣಿಸಿಕೊಂಡ ಕಾರಣಕ್ಕೆ ಅನೇಕ ಜಿಲ್ಲೆಗಳು ಬೆಂಗಳೂರು ಪ್ರಯಾಣಿಕರ ಮೇಲೆ ನಿಗಾ ಇಡುತ್ತಿದೆ. ಜಿಲ್ಲೆಯಲ್ಲಿಅಂಥ ಕ್ರಮ ಕೈಗೊಂಡಿರುವ ಬಗ್ಗೆ ಜಿಲ್ಲಾಡಳಿತ ಸ್ಪಷ್ಟವಾಗಿ ಹೇಳಿಲ್ಲ. ಜಿಲ್ಲೆಯಲ್ಲಿಮೃತಪಟ್ಟಿರುವ ಐವರು ಕೊನೆ ಕ್ಷಣದಲ್ಲಿಜಿಲ್ಲಾಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದಾರೆ.
ಕೊರೊನಾ ಸೋಂಕಿನ ಲಕ್ಷಣ ಇರುವವರು ಸ್ವಯಂ ಔಷಧ ಮಾಡಿಕೊಳ್ಳದೆ, ಲಕ್ಷಣ ಕಂಡ ತಕ್ಷಣ ಆಸ್ಪತ್ರೆಗೆ ಬರಬೇಕು ಎಂದು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ…) ನಿರ್ದೇಶಕ ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.
ರಾಜ್ಯ ಸರಕಾರದ ಮಾನದಂಡದ ಪ್ರಕಾರ ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಬಂದವರನ್ನು ಮಾತ್ರ ಕ್ವಾರಂಟೈನ್ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಬಂದವರನ್ನು ಪರಿಶೀಲಿಸುವ ನಿಯಮ ಇಲ್ಲ. ಜಿಲ್ಲೆಯಲ್ಲಿಸೋಂಕಿತರ ಮರಣ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಕೊರೊನಾ ವಿಷಯದಲ್ಲಿಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ.
- ಎಂ.ಜಿ. ಹಿರೇಮಠ, ಬೆಳಗಾವಿ ಜಿಲ್ಲಾಧಿಕಾರಿ