ಆ್ಯಪ್ನಗರ

130 ಕೋಟಿ ಜನ ಸೈನಿಕರ ಬೆನ್ನಿಗಿದ್ದೇವೆ: ಸಂಸದ ಅಂಗಡಿ

ದೇಶದ 130 ಕೋಟಿ ಜನ ಸೈನಿಕರು ಹಾಗೂ ಅವರ ಕುಟುಂಬಸ್ಥರ ಹಿಂದಿದ್ದೇವೆ ಬರುವ ದಿನಗಳಲ್ಲಿ ಉಗ್ರರ ಹೇಯ ಕೃತ್ಯಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಸಂಸದ ಸುರೇಶ ಅಂಗಡಿ ಹೇಳಿದರು...

Vijaya Karnataka 17 Feb 2019, 5:00 am
ಬೈಲಹೊಂಗಲ: ದೇಶದ 130 ಕೋಟಿ ಜನ ಸೈನಿಕರು ಹಾಗೂ ಅವರ ಕುಟುಂಬಸ್ಥರ ಹಿಂದಿದ್ದೇವೆ. ಬರುವ ದಿನಗಳಲ್ಲಿ ಉಗ್ರರ ಹೇಯ ಕೃತ್ಯಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
Vijaya Karnataka Web BEL-16HTP11


ಅವರು ಪಟ್ಟಣದ ಚನ್ನಮ್ಮ ಮೂರ್ತಿಯ ಎದುರು ಸಾರ್ವಜನಿಕರು ಆಯೋಜಿಸಿದ್ದ ಹುತಾತ್ಮ ಯೋಧರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮೊಂಬತ್ತಿ ಬೆಳಗಿಸಿ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮಾತನಾಡಿದರು.

ಆತಂಕವಾದಿಗಳ ದುಷ್ಕೃತ್ಯ ಅಕ್ಷಮ್ಯ. ಸೈನಿಕರ ಕುಟುಂಬಗಳಿಗೆ ಭಗವಂತ ದುಃಖ ಸಹಿಸುವ ಶಕ್ತಿ ನೀಡಲಿ ಎಂದರು.

ಪುರಸಭೆ ಸದಸ್ಯರಾದ ಗುರು ಮೆಟಗುಡ್ಡ, ಶಿವಾನಂದ ಕೋಲಕಾರ ಮಾತನಾಡಿದರು. ವಿನಯ ಬೋಳನ್ನವರ, ರಫೀಕ ಬಡೇಘರ, ವಿಠ್ಠಲ ಕಡಕೋಳ, ಅಭಿಷೇಕ ಬೊಳನ್ನವರ, ಆನಂದ ತುರಮರಿ, ಸೋಮು ತೋಟಗಿ, ಫಕ್ರುಸಾಬ ಕುಸಲಾಪೂರ, ಸಂಜು ಭರಮನ್ನವರ, ಪ್ರಭು ಶಿರವಂತಿ, ಮಂಜು ಪಾಟೀಲ ಹಾಗೂ ನೂರಾರು ಯುವಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ