ಮಹೇಶ್ ವಿಜಾಪುರ ಬೆಳಗಾವಿ
ಹೆತ್ತವರೇ ಶಿಶು ಬಿಟ್ಟು ಹೋಗುವ ಸಂಕೀರ್ಣ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿಒಂದು ವರ್ಷದಲ್ಲಿಇಂಥ 15 ಪ್ರಕರಣಗಳು ದಾಖಲಾಗಿವೆ.
ಬೈಲಹೊಂಗಲ ತಾಲೂಕಿನಲ್ಲಿಅತಿ ಹೆಚ್ಚು ಪ್ರಕರಣ ದಾಖಲಾಗಿದ್ದು, ರಾಮದುರ್ಗ, ಸವದತ್ತಿ, ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲೂಈ ಪ್ರಕರಣ ಕಂಡು ಬಂದಿದೆ. ಒಟ್ಟಾರೆ ಸ್ವಯಂ ಪ್ರೇರಣೆಯಿಂದ ಇಲಾಖೆ ಸುಪರ್ದಿಗೆ ವಹಿಸಿರುವುದು, ಸಾರ್ವಜನಿಕ ಸ್ಥಳಗಳಲ್ಲಿಯಾರಿಗೂ ಗೊತ್ತಾಗದಂತೆ ಬಿಟ್ಟು ಹೋಗಿರುವ ಒಟ್ಟು 15 ಮಕ್ಕಳು ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲಿದ್ದಾರೆ.
ಹೀಗೆ ಜಿಲ್ಲೆಯಲ್ಲಿದಾಖಲಾದ ಬಹುತೇಕ ಪ್ರಕರಣಗಳಲ್ಲಿಮಕ್ಕಳು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜಿಲ್ಲಾಸ್ಪತ್ರೆಯಲ್ಲಿಪತ್ತೆಯಾದವರು. ನವೆಂಬರ್ ಒಂದೇ ತಿಂಗಳಲ್ಲಿಇಂಥ ಆರು ಮಕ್ಕಳ ರಕ್ಷಣೆ ಮಾಡಲಾಗಿದೆ. 8 ಪ್ರಕರಣಗಳಲ್ಲಿನೇರವಾಗಿ ಹೆತ್ತ ತಾಯಂದಿರೇ ಶಿಶುವನ್ನು ಇಲಾಖೆಯ ರಕ್ಷಣೆಗೆ ನೀಡಿದ್ದಾರೆ. ಇನ್ನುಳಿದ ಪ್ರಕರಣಗಳಲ್ಲಿಮಕ್ಕಳು ಸಾರ್ವಜನಿಕ ಪ್ರದೇಶಗಳಲ್ಲಿಅನಾಥ ಸ್ಥಿತಿಯಲ್ಲಿಪತ್ತೆಯಾಗಿದ್ದಾರೆ. ಕೆಲ ತಿಂಗಳ ಹಿಂದೆ 7 ತಿಂಗಳ ಮಗುವೊಂದು ಲೋಂಡಾ ಅರಣ್ಯ ಪ್ರದೇಶದ ರೈಲ್ವೆ ಹಳಿಯ ಪಕ್ಕ ಪತ್ತೆಯಾಗಿತ್ತು. ರಕ್ಷಣೆಯಾದ ಮಕ್ಕಳ ಪೈಕಿ 8 ಗಂಡು ಮತ್ತು 7 ಹೆಣ್ಣು ಮಕ್ಕಳಿದ್ದಾರೆ.
''ಶೇ.70ರಷ್ಟು ಪ್ರಕರಣಗಳಲ್ಲಿಅನೈತಿಕ ಸಂಬಂಧ ಕಾರಣದಿಂದಲೆ ಮಕ್ಕಳು ಹುಟ್ಟಿದ್ದರೆ, ಮಹಿಳೆ ಮತ್ತು ಅಪ್ರಾಪ್ತರ ಮೇಲೆ ಅತ್ಯಾಚಾರ ಕಾರಣದಿಂದಲೂ ಹುಟ್ಟಿದ ಮಗುವನ್ನು ತ್ಯಜಿಸುವ ಅನಿವಾರ್ಯತೆ ಎದುರಾಗುತ್ತಿದೆ. ಕಾನೂನು ಜಾಗೃತಿಯಿಂದ ಮಕ್ಕಳ ರಕ್ಷಣೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾದರೂ ಅಕ್ರಮ ಸಂಬಂಧಗಳಿಂದ ಮಕ್ಕಳು ಪರಿತ್ಯಕ್ತರಾಗುತ್ತಿರುವುದು ಅಪಾಯದ ಸೂಚನೆ'' ಎನ್ನುತ್ತಾರೆ ಅಧಿಕಾರಿಗಳು.
ವಿಚಿತ್ರ ಪ್ರಕರಣ: ಪ್ರೀತಿ, ಪ್ರೇಮದ ಹೆಸರಿನಲ್ಲಾಗುತ್ತಿರುವ ದೈಹಿಕ ಸಂಪರ್ಕ ಬಹಳಷ್ಟು ಯುವತಿಯರ ಕನಸನ್ನು ನುಚ್ಚು ನೂರು ಮಾಡುತ್ತಿದೆ. ವರ್ಷದ ಹಿಂದೆ ಎಂಜಿನಿಯರಿಂಗ್ ಅಧ್ಯಯನಕ್ಕೆ ಬೆಳಗಾವಿಗೆ ಬಂದ ಯುವತಿಯೋರ್ವಳು ಗರ್ಭಿಣಿಯಾಗಿದ್ದಳು. ಹುಟ್ಟಿದ ಮಗುವನ್ನು ಯುವತಿ ರಕ್ಷಣಾ ಘಟಕ್ಕೆ ಒಪ್ಪಿಸಿದ್ದಾಳೆ. 50 ವರ್ಷದ ವಿಧವೆಯೋರ್ವಳು ಮೋಹದ ಬಲೆಗೆ ಬಿದ್ದು ಗರ್ಭ ಧರಿಸಿದ್ದರು. ಒಂಭತ್ತು ತಿಂಗಳು ತಾನು ವಾಸಿಸುವ ಪರಿಸರದಿಂದ ದೂರವಾಗಿ ಹೆರಿಗೆಯಾದ ಬಳಿಕ ಮಗುವನ್ನು ಇಲಾಖೆಗೆ ಒಪ್ಪಿಸಿ ಹೋಗಿದ್ದಾರೆ. ಮಕ್ಕಳು ಹುಟ್ಟಿದ ತಕ್ಷಣ ಸಂಭ್ರಮಾಚರಣೆ ಮಾಡುವ ಬದಲು ಹಸುಗೂಸುಗಳನ್ನು ತರಕಾರಿ ಚೀಲದಲ್ಲಿತುಂಬಿ ಸಾರ್ವಜನಿಕ ಸ್ಥಳಗಳಲ್ಲಿಇಟ್ಟು ಹೋಗುತ್ತಿರುವ ವಿಚಿತ್ರ ಸನ್ನಿವೇಶ ನಿರ್ಮಾಣವಾಗುತ್ತಿದೆ.
ಶಿಶು ಹಾಕಲು ತೊಟ್ಟಿಲು:
ಕಾನೂನು ಜಾಗೃತಿ ಮತ್ತು ಕಠಿಣ ಕ್ರಮಗಳಿಂದ ಪರಿತ್ಯಕ್ತ ಮತ್ತು ಬಿಟ್ಟುಹೋಗುವ ಮಕ್ಕಳ ಪ್ರಕರಣ ಅಲ್ಪ ಪ್ರಮಾಣದಲ್ಲಿಬೆಳಕಿಗೆ ಬರುತ್ತಿವೆ. ಯಾರಿಗೂ ಗೊತ್ತಾಗದಂತೆ ಮಕ್ಕಳನ್ನು ಹೆತ್ತು ಮಾರಾಟ ಮಾಡುವ ಸಂದರ್ಭಗಳೂ ಸಾಕಷ್ಟಿವೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಮಕ್ಕಳ ರಕ್ಷಣಾ ಘಟಕ ಎಲ್ಲಸರಕಾರಿ ಆಸ್ಪತ್ರೆಗಳಲ್ಲಿ'ತೊಟ್ಟಿಲು ಕಟ್ಟುವ' ಯೋಜನೆ ರೂಪಿಸಿದೆ. ಈಗಾಗಲೇ ಸಾರ್ವಜನಿಕರಿಂದ ಪಡೆದ 40 ಕ್ಕೂ ಅಧಿಕ ತೊಟ್ಟಿಲುಗಳಿಗೆ ಬಣ್ಣ ಬಳಿದು ಸಿದ್ಧಗೊಳಿಸಲಾಗಿದೆ. ''ಅನಿವಾರ್ಯ ಮತ್ತು ನಾನಾ ಕಾರಣಗಳಿಂದ ಹುಟ್ಟಿದ ಮಕ್ಕಳು ಬೇಡವಾದವರು ಈ ತೊಟ್ಟಿಲಿಗೆ ಹಾಕಿದರೆ ಮಕ್ಕಳಿಗೆ ಇಲಾಖೆ ರಕ್ಷಣೆ ನೀಡಲಿದೆ'', ಎಂದು ಮಕ್ಕಳ ರಕ್ಷಣಾಧಿಕಾರಿ ಲೋಕೇಶ ಜಗಳೂರ ತಿಳಿಸಿದ್ದಾರೆ.
ಮಕ್ಕಳ ರಕ್ಷಣಾ ಸಮಿತಿ ನಿರ್ಣಯದ ಪ್ರಕಾರ 10 ಮಕ್ಕಳು ದತ್ತು ಪ್ರಕ್ರಿಯೆ ಚಾಲನೆಯಲ್ಲಿದೆ. ಇನ್ನುಳಿದ 5 ಮಕ್ಕಳ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಮಕ್ಕಳ ರಕ್ಷಣೆಗಿರುವ ಕಾನೂನು ಬಳಕೆಗೆ ಮುಂದಾಗಬೇಕೆ ಹೊರತು ಮಕ್ಕಳ ಸಾವಿಗೆ ಅಥವಾ ಮಾರಾಟಕ್ಕೆ ಕಾರಣವಾಗಿ ಶಿಕ್ಷೆಗೆ ಗುರಿಯಾಗಬಾರದು.
-ಎಫ್.ಬಿ. ನದಾಫ್. ಜಿಲ್ಲಾಮಕ್ಕಳ ರಕ್ಷಣಾಧಿಕಾರಿ
ಕ್ಷಣಿಕ ಆಸೆಗಾಗಿ ಮಾಡುವ ತಪ್ಪುಗಳು ಕೌಟುಂಬಿಕ ಸಂಬಂಧಗಳನ್ನೇ ನಾಶ ಪಡಿಸುತ್ತವೆ. ತಪ್ಪು ಮಾಡುವ ಮೊದಲು ಪ್ರತಿಯೊಬ್ಬರೂ ಮಾನವೀಯತೆ, ಸಂಬಂಧಗಳನ್ನು ಕಣ್ಮುಂದೆ ತರುವ ಪ್ರಯತ್ನ ಮಾಡಿದರೆ ತಪ್ಪಿನಿಂದ ಪಾರಾಗುವ ದಾರಿ ಸಿಗುತ್ತದೆ.
- ಡಾ.ಸರಸ್ವತಿ ತೆನಗಿ. ಮನೋರೋಗ ತಜ್ಞೆ, ಬಿಮ್ಸ್
ಹೆತ್ತವರೇ ಶಿಶು ಬಿಟ್ಟು ಹೋಗುವ ಸಂಕೀರ್ಣ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿಒಂದು ವರ್ಷದಲ್ಲಿಇಂಥ 15 ಪ್ರಕರಣಗಳು ದಾಖಲಾಗಿವೆ.
ಬೈಲಹೊಂಗಲ ತಾಲೂಕಿನಲ್ಲಿಅತಿ ಹೆಚ್ಚು ಪ್ರಕರಣ ದಾಖಲಾಗಿದ್ದು, ರಾಮದುರ್ಗ, ಸವದತ್ತಿ, ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲೂಈ ಪ್ರಕರಣ ಕಂಡು ಬಂದಿದೆ. ಒಟ್ಟಾರೆ ಸ್ವಯಂ ಪ್ರೇರಣೆಯಿಂದ ಇಲಾಖೆ ಸುಪರ್ದಿಗೆ ವಹಿಸಿರುವುದು, ಸಾರ್ವಜನಿಕ ಸ್ಥಳಗಳಲ್ಲಿಯಾರಿಗೂ ಗೊತ್ತಾಗದಂತೆ ಬಿಟ್ಟು ಹೋಗಿರುವ ಒಟ್ಟು 15 ಮಕ್ಕಳು ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲಿದ್ದಾರೆ.
ಹೀಗೆ ಜಿಲ್ಲೆಯಲ್ಲಿದಾಖಲಾದ ಬಹುತೇಕ ಪ್ರಕರಣಗಳಲ್ಲಿಮಕ್ಕಳು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜಿಲ್ಲಾಸ್ಪತ್ರೆಯಲ್ಲಿಪತ್ತೆಯಾದವರು. ನವೆಂಬರ್ ಒಂದೇ ತಿಂಗಳಲ್ಲಿಇಂಥ ಆರು ಮಕ್ಕಳ ರಕ್ಷಣೆ ಮಾಡಲಾಗಿದೆ. 8 ಪ್ರಕರಣಗಳಲ್ಲಿನೇರವಾಗಿ ಹೆತ್ತ ತಾಯಂದಿರೇ ಶಿಶುವನ್ನು ಇಲಾಖೆಯ ರಕ್ಷಣೆಗೆ ನೀಡಿದ್ದಾರೆ. ಇನ್ನುಳಿದ ಪ್ರಕರಣಗಳಲ್ಲಿಮಕ್ಕಳು ಸಾರ್ವಜನಿಕ ಪ್ರದೇಶಗಳಲ್ಲಿಅನಾಥ ಸ್ಥಿತಿಯಲ್ಲಿಪತ್ತೆಯಾಗಿದ್ದಾರೆ. ಕೆಲ ತಿಂಗಳ ಹಿಂದೆ 7 ತಿಂಗಳ ಮಗುವೊಂದು ಲೋಂಡಾ ಅರಣ್ಯ ಪ್ರದೇಶದ ರೈಲ್ವೆ ಹಳಿಯ ಪಕ್ಕ ಪತ್ತೆಯಾಗಿತ್ತು. ರಕ್ಷಣೆಯಾದ ಮಕ್ಕಳ ಪೈಕಿ 8 ಗಂಡು ಮತ್ತು 7 ಹೆಣ್ಣು ಮಕ್ಕಳಿದ್ದಾರೆ.
''ಶೇ.70ರಷ್ಟು ಪ್ರಕರಣಗಳಲ್ಲಿಅನೈತಿಕ ಸಂಬಂಧ ಕಾರಣದಿಂದಲೆ ಮಕ್ಕಳು ಹುಟ್ಟಿದ್ದರೆ, ಮಹಿಳೆ ಮತ್ತು ಅಪ್ರಾಪ್ತರ ಮೇಲೆ ಅತ್ಯಾಚಾರ ಕಾರಣದಿಂದಲೂ ಹುಟ್ಟಿದ ಮಗುವನ್ನು ತ್ಯಜಿಸುವ ಅನಿವಾರ್ಯತೆ ಎದುರಾಗುತ್ತಿದೆ. ಕಾನೂನು ಜಾಗೃತಿಯಿಂದ ಮಕ್ಕಳ ರಕ್ಷಣೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾದರೂ ಅಕ್ರಮ ಸಂಬಂಧಗಳಿಂದ ಮಕ್ಕಳು ಪರಿತ್ಯಕ್ತರಾಗುತ್ತಿರುವುದು ಅಪಾಯದ ಸೂಚನೆ'' ಎನ್ನುತ್ತಾರೆ ಅಧಿಕಾರಿಗಳು.
ವಿಚಿತ್ರ ಪ್ರಕರಣ: ಪ್ರೀತಿ, ಪ್ರೇಮದ ಹೆಸರಿನಲ್ಲಾಗುತ್ತಿರುವ ದೈಹಿಕ ಸಂಪರ್ಕ ಬಹಳಷ್ಟು ಯುವತಿಯರ ಕನಸನ್ನು ನುಚ್ಚು ನೂರು ಮಾಡುತ್ತಿದೆ. ವರ್ಷದ ಹಿಂದೆ ಎಂಜಿನಿಯರಿಂಗ್ ಅಧ್ಯಯನಕ್ಕೆ ಬೆಳಗಾವಿಗೆ ಬಂದ ಯುವತಿಯೋರ್ವಳು ಗರ್ಭಿಣಿಯಾಗಿದ್ದಳು. ಹುಟ್ಟಿದ ಮಗುವನ್ನು ಯುವತಿ ರಕ್ಷಣಾ ಘಟಕ್ಕೆ ಒಪ್ಪಿಸಿದ್ದಾಳೆ. 50 ವರ್ಷದ ವಿಧವೆಯೋರ್ವಳು ಮೋಹದ ಬಲೆಗೆ ಬಿದ್ದು ಗರ್ಭ ಧರಿಸಿದ್ದರು. ಒಂಭತ್ತು ತಿಂಗಳು ತಾನು ವಾಸಿಸುವ ಪರಿಸರದಿಂದ ದೂರವಾಗಿ ಹೆರಿಗೆಯಾದ ಬಳಿಕ ಮಗುವನ್ನು ಇಲಾಖೆಗೆ ಒಪ್ಪಿಸಿ ಹೋಗಿದ್ದಾರೆ. ಮಕ್ಕಳು ಹುಟ್ಟಿದ ತಕ್ಷಣ ಸಂಭ್ರಮಾಚರಣೆ ಮಾಡುವ ಬದಲು ಹಸುಗೂಸುಗಳನ್ನು ತರಕಾರಿ ಚೀಲದಲ್ಲಿತುಂಬಿ ಸಾರ್ವಜನಿಕ ಸ್ಥಳಗಳಲ್ಲಿಇಟ್ಟು ಹೋಗುತ್ತಿರುವ ವಿಚಿತ್ರ ಸನ್ನಿವೇಶ ನಿರ್ಮಾಣವಾಗುತ್ತಿದೆ.
ಶಿಶು ಹಾಕಲು ತೊಟ್ಟಿಲು:
ಕಾನೂನು ಜಾಗೃತಿ ಮತ್ತು ಕಠಿಣ ಕ್ರಮಗಳಿಂದ ಪರಿತ್ಯಕ್ತ ಮತ್ತು ಬಿಟ್ಟುಹೋಗುವ ಮಕ್ಕಳ ಪ್ರಕರಣ ಅಲ್ಪ ಪ್ರಮಾಣದಲ್ಲಿಬೆಳಕಿಗೆ ಬರುತ್ತಿವೆ. ಯಾರಿಗೂ ಗೊತ್ತಾಗದಂತೆ ಮಕ್ಕಳನ್ನು ಹೆತ್ತು ಮಾರಾಟ ಮಾಡುವ ಸಂದರ್ಭಗಳೂ ಸಾಕಷ್ಟಿವೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಮಕ್ಕಳ ರಕ್ಷಣಾ ಘಟಕ ಎಲ್ಲಸರಕಾರಿ ಆಸ್ಪತ್ರೆಗಳಲ್ಲಿ'ತೊಟ್ಟಿಲು ಕಟ್ಟುವ' ಯೋಜನೆ ರೂಪಿಸಿದೆ. ಈಗಾಗಲೇ ಸಾರ್ವಜನಿಕರಿಂದ ಪಡೆದ 40 ಕ್ಕೂ ಅಧಿಕ ತೊಟ್ಟಿಲುಗಳಿಗೆ ಬಣ್ಣ ಬಳಿದು ಸಿದ್ಧಗೊಳಿಸಲಾಗಿದೆ. ''ಅನಿವಾರ್ಯ ಮತ್ತು ನಾನಾ ಕಾರಣಗಳಿಂದ ಹುಟ್ಟಿದ ಮಕ್ಕಳು ಬೇಡವಾದವರು ಈ ತೊಟ್ಟಿಲಿಗೆ ಹಾಕಿದರೆ ಮಕ್ಕಳಿಗೆ ಇಲಾಖೆ ರಕ್ಷಣೆ ನೀಡಲಿದೆ'', ಎಂದು ಮಕ್ಕಳ ರಕ್ಷಣಾಧಿಕಾರಿ ಲೋಕೇಶ ಜಗಳೂರ ತಿಳಿಸಿದ್ದಾರೆ.
ಮಕ್ಕಳ ರಕ್ಷಣಾ ಸಮಿತಿ ನಿರ್ಣಯದ ಪ್ರಕಾರ 10 ಮಕ್ಕಳು ದತ್ತು ಪ್ರಕ್ರಿಯೆ ಚಾಲನೆಯಲ್ಲಿದೆ. ಇನ್ನುಳಿದ 5 ಮಕ್ಕಳ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಮಕ್ಕಳ ರಕ್ಷಣೆಗಿರುವ ಕಾನೂನು ಬಳಕೆಗೆ ಮುಂದಾಗಬೇಕೆ ಹೊರತು ಮಕ್ಕಳ ಸಾವಿಗೆ ಅಥವಾ ಮಾರಾಟಕ್ಕೆ ಕಾರಣವಾಗಿ ಶಿಕ್ಷೆಗೆ ಗುರಿಯಾಗಬಾರದು.
-ಎಫ್.ಬಿ. ನದಾಫ್. ಜಿಲ್ಲಾಮಕ್ಕಳ ರಕ್ಷಣಾಧಿಕಾರಿ
ಕ್ಷಣಿಕ ಆಸೆಗಾಗಿ ಮಾಡುವ ತಪ್ಪುಗಳು ಕೌಟುಂಬಿಕ ಸಂಬಂಧಗಳನ್ನೇ ನಾಶ ಪಡಿಸುತ್ತವೆ. ತಪ್ಪು ಮಾಡುವ ಮೊದಲು ಪ್ರತಿಯೊಬ್ಬರೂ ಮಾನವೀಯತೆ, ಸಂಬಂಧಗಳನ್ನು ಕಣ್ಮುಂದೆ ತರುವ ಪ್ರಯತ್ನ ಮಾಡಿದರೆ ತಪ್ಪಿನಿಂದ ಪಾರಾಗುವ ದಾರಿ ಸಿಗುತ್ತದೆ.
- ಡಾ.ಸರಸ್ವತಿ ತೆನಗಿ. ಮನೋರೋಗ ತಜ್ಞೆ, ಬಿಮ್ಸ್