ಬೆಳಗಾವಿ: ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದರೂ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಆರೈಕೆ ಮುಂದುವರಿದಿದೆ. ಹೀಗಾಗಿ, ಕಾಳಜಿ ಕೇಂದ್ರ ಹೊಂದಿರುವ ಎಲ್ಲ ಶಾಲೆಗಳಿಗೆ ಆ.13 ಮತ್ತು 14ರ ವರೆಗೆ ರಜೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೋಮವಾರ ಆದೇಶ ಹೊರಡಿಸಿದ್ದಾರೆ. ''ಜಿಲ್ಲೆಯ 260ಕ್ಕೂ ಹೆಚ್ಚು ಕಾಳಜಿ ಕೇಂದ್ರಗಳು ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರವಾಹ ಪೀಡಿತ ಮತ್ತು ಜಲಾವೃತ ಗ್ರಾಮಗಳಲ್ಲಿ ಮಳೆ ನೀರು ಇನ್ನೂ ತೆರವಾಗದ ಹಿನ್ನೆಲೆಯಲ್ಲಿ ಶಾಲಾ ಕಟ್ಟಡಗಳಲ್ಲಿ ಕಾಳಜಿ ಕೇಂದ್ರ ಮುಂದುವರಿಸುವುದು ಅನಿವಾರ್ಯ. ಆದ್ದರಿಂದ, ಈ ಕ್ರಮ ಕೈಗೊಳ್ಳಲಾಗಿದೆ. ರಜೆ ದಿನದ ಪಠ್ಯಕ್ರಮವನ್ನು ಭಾನುವಾರ ತರಗತಿ ನಡೆಸುವ ಮೂಲಕ ಸರಿದೂಗಿಸಬೇಕು'', ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಾಳಜಿ ಕೇಂದ್ರಗಳ ಶಾಲೆಗಳಿಗೆ 2 ದಿನ ರಜೆ ವಿಸ್ತರಣೆ
ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದರೂ ಕಾಳಜಿ ಕೇಂದ್ರದಲ್ಲಿ ...
Vijaya Karnataka 13 Aug 2019, 5:00 am