ಆ್ಯಪ್ನಗರ

25 ಲಕ್ಷ ಮೌಲ್ಯದ ಮದ್ಯ, ವಾಹನ ವಶ

ಬೆಳಗಾವಿ ಮೂಲಕ ಗೋವಾದಿಂದ ಮುಂಬೈಗೆ ಅಕ್ರಮ ಮದ್ಯ ಸಾಗಿಸುತ್ತಿದ್ದ ವಾಹನಗಳ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸಿ 25 ಲಕ್ಷ ರೂ.ಮೌಲ್ಯದ ಮದ್ಯ ಮತ್ತು ವಾಹನಗಳನ್ನು ಜಪ್ತಿ ಮಾಡಿದ್ದಾರೆ.

Vijaya Karnataka 8 Dec 2018, 5:00 am
ಬೆಳಗಾವಿ: ಬೆಳಗಾವಿ ಮೂಲಕ ಗೋವಾದಿಂದ ಮುಂಬೈಗೆ ಅಕ್ರಮ ಮದ್ಯ ಸಾಗಿಸುತ್ತಿದ್ದ ವಾಹನಗಳ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸಿ 25 ಲಕ್ಷ ರೂ.ಮೌಲ್ಯದ ಮದ್ಯ ಮತ್ತು ವಾಹನಗಳನ್ನು ಜಪ್ತಿ ಮಾಡಿದ್ದಾರೆ.
Vijaya Karnataka Web BLG-0712-2-52-7MAHESH7


ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಬೆಳಗ್ಗೆ ಸಮೀಪದ ಪೀರನವಾಡಿ ಗ್ರಾಮದ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ ಬಳಿ ಸಾಗಿ ಬರುತ್ತಿದ್ದ ವಾಹನಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಂದರ ಹಿಂದೆ ಒಂದು ಬಂದ ಕಾರು ಮತ್ತು ಲಾರಿ ತಡೆದು ಪರಿಶೀಲನೆ ನಡೆಸಿದಾಗ 750 ಎಂಎಲ್‌ನ 350 ಬಾಕ್ಸ್‌ ಗೋವಾ ಮದ್ಯ ಸಾಗಿಸಲಾಗುತ್ತಿತ್ತು. ರೆಫ್ರಿಜರೇಟರ್‌ ಮಾದರಿಯಲ್ಲಿ ಬಾಕ್ಸ್‌ ತಯಾರಿಸಿದ್ದ ಆರೋಪಿಗಳು ಅದರಲ್ಲಿ ಮದ್ಯದ ಬಾಕ್ಸ್‌ ಇಟ್ಟು ಸಾಗಿಸುತ್ತಿದ್ದರು.

ಮಹಾರಾಷ್ಟ್ರದ ಸಿಂಧದುರ್ಗದ ಪ್ರದೀಪ ಪಾಟೀಲ, ಮಿಥಿಲೇಶ್‌ ಸುಕಿ, ಶುಭಂ ಸಿತೋಲೆ ಮತ್ತು ಬೆಳಗಾವಿ ನಗರದ ಯಲ್ಲಪ್ಪ ಪಾಟೀಲ ಅವರನ್ನು ಬಂಧಿಸಲಾಗಿದ್ದು, 10 ಲಕ್ಷ ರೂ.ಮೌಲ್ಯದ ಅಕ್ರಮ ಮದ್ಯ, 15 ಲಕ್ಷ ರೂ.ಮೌಲ್ಯದ ಲಾರಿ ಮತ್ತು ಕಾರು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಇಲಾಖೆ ಜಂಟಿ ಆಯುಕ್ತ ಡಾ.ವೈ.ಮಂಜುನಾಥ ಮತ್ತು ಉಪ ಆಯುಕ್ತ ಕೆ.ಅರುಣಕುಮಾರ ಮಾರ್ಗದರ್ಶನದಲ್ಲಿ ಡಿಎಸ್ಪಿ ವಿಜಯ ಹಿರೇಮಠ, ಇನ್‌ಸ್ಪೆಕ್ಟರ್‌ ರವೀಂದ್ರ ಹೊಸಳ್ಳಿ, ಕೆ.ಲಿಂಗರಾಜು, ವಿಶ್ವನಾಥ ಗಾಣಿಗೇರ, ಎನ್‌.ನಿಲಜಕರ, ಕೆ.ಡಿ.ಕುರಟಿ ದಾಳಿ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ