ಆ್ಯಪ್ನಗರ

ಮುರಾರ್ಜಿ ಶಾಲೆಯಲ್ಲಿ ಊಟದ ನಂತರ 29 ವಿದ್ಯಾರ್ಥಿಗಳು ಅಸ್ವಸ್ಥ

ರಾಮದುರ್ಗ (ಬೆಳಗಾವಿ): ತಾಲೂಕಿನ ಸಾಲಹಳ್ಳಿ ಗ್ರಾಮದ ಮುರಾರ್ಜಿ ...

Vijaya Karnataka 10 Jan 2019, 5:00 am
ರಾಮದುರ್ಗ (ಬೆಳಗಾವಿ) : ತಾಲೂಕಿನ ಸಾಲಹಳ್ಳಿ ಗ್ರಾಮದ ಮುರಾರ್ಜಿ ದೇಸಾಯಿ ಅಲ್ಪ ಸಂಖ್ಯಾತರ ಇಲಾಖೆಯ ವಸತಿ ಶಾಲೆಯ ಮಂಗಳವಾರ ರಾತ್ರಿ ಊಟದಲ್ಲಿ ವ್ಯತ್ಯಾಸವಾಗಿ 29 ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ 23 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 6 ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.
Vijaya Karnataka Web BEL-09RD1


ವಸತಿ ನಿಲಯದಲ್ಲಿ ಒಟ್ಟು 89 ವಿದ್ಯಾರ್ಥಿಗಳಿದ್ದು, ಮಂಗಳವಾರ ರಾತ್ರಿ ಚಪಾತಿ, ತೊಗರಿಬೇಳೆ ಪಲ್ಲೆ, ಅನ್ನ ಸಾಂಬಾರು ಊಟ ಮಾಡಿದ ನಂತರ ಮೊದಲಿಗೆ ನಾಲ್ಕಾರು ವಿದ್ಯಾರ್ಥಿಗಳಿಗೆ ವಾಂತಿ ಶುರುವಾಗಿದೆ. ತಕ್ಷ ಣ ಅಡುಗೆ ಸಿಬ್ಬಂದಿ ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬುಧವಾರ ಬೆಳಗ್ಗೆ ಮತ್ತೆ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ ಪ್ರಾರಂಭವಾಗಿದ್ದರಿಂದ ತಕ್ಷ ಣ ಅವರೆಲ್ಲರನ್ನೂ ಪಟ್ಟಣದ ಸರಕಾರಿ ಆಸ್ಪತ್ರೆಗೆ ಹಾಗೂ ವಾಸವಿ ಚಿಕ್ಕಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವುದೇ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ.

ಜಿಪಂ ಸಿಇಒ ಆರ್‌.ರಾಮಚಂದ್ರನ್‌, ಅಲ್ಪ ಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಪುಂಡಲೀಕ ಅನವಾಲ, ತಾಪಂ ಇಒ ಎಸ್‌.ಬಿ.ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಸ್‌.ಕರ್ಕಿ, ಬಿಇಒ ಅಲಾಸಿ, ಮಲ್ಲಣ್ಣ ಯಾದವಾಡ, ಜಿ.ಬಿ. ರಂಗನಗೌಡ್ರ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿದರು.

ಪೂರ್ಣ ಪ್ರಮಾಣದ ವಾರ್ಡನ್‌ ಇಲ್ಲ :
ವಸತಿ ನಿಲಯದಲ್ಲಿ ಪೂರ್ಣ ಪ್ರಮಾಣದ ವಾರ್ಡನ್‌ಗಳಿಲ್ಲ. ಒಬ್ಬನೇ ವಾರ್ಡನ್‌ ಕಿತ್ತೂರ, ಹೂಲಿಕಟ್ಟಿ ಮತ್ತು ಸಾಲಹಳ್ಳಿಯ ವಸತಿ ನಿಲಯಗಳನ್ನು ನೋಡಬೇಕಿದೆ. ಪ್ರಾಚಾರ್ಯರೂ ಮೂರು ಕಡೆಗಳನ್ನು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿರುವ ಮಕ್ಕಳನ್ನು ಡಿ.ದರ್ಜೆಯ ನೌಕರರೇ ನೋಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಹೀಗಾದರೆ ಅಲ್ಲಿರುವ ಮಕ್ಕಳ ಬಗ್ಗೆ ಗಮನ ಹರಿಸುವರಾರ‍ಯರು ಎಂದು ಮಕ್ಕಳ ಪಾಲಕರು ಪ್ರಶ್ನಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ