ಆ್ಯಪ್ನಗರ

ಮಹಾ ಮಳೆಗೆ 3 ಸೇತುವೆ ಜಲಾವೃತ

ಚಿಕ್ಕೋಡಿ/ಉಗಾರ: ಕಳೆದ ಸುಮಾರು ಎರಡು-ಮೂರು ದಿನಗಳಿಂದ ನೆರೆಯ ...

Vijaya Karnataka 2 Jul 2019, 5:00 am
ಚಿಕ್ಕೋಡಿ/ಉಗಾರ : ಕಳೆದ ಸುಮಾರು ಎರಡು-ಮೂರು ದಿನಗಳಿಂದ ನೆರೆಯ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ಮತ್ತು ಉಪ ನದಿಗಳ ನೀರಿನ ಮಟ್ಟ ಹೆಚ್ಚಳವಾಗುತ್ತಿದ್ದು, ಕೆಳ ಹಂತದ 3 ಸೇತುವೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.
Vijaya Karnataka Web BEL-01 UGAR 1 NEWS PHOTO


ಚಿಕ್ಕೋಡಿ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಆದರೆ ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವುದರಿಂದ ನದಿಗಳ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಮಲಿಕವಾಡ-ದತ್ತವಾಡ, ಕಾರದಗಾ-ಭೋಜ, ಭೋಜವಾಡಿ-ಕುನ್ನೂರ ಸೇರಿದಂತೆ ಕೆಳ ಹಂತದ ಮೂರು ಸೇತುವೆಗಳು ಮುಳುಗಡೆಯಾಗಿವೆ. ಇದೇ ರೀತಿ ಮಳೆ ಮುಂದುವರಿದರೆ ಮಂಗಳವಾರ ಮಧ್ಯಾಹ್ನದವರೆಗೆ ಕಲ್ಲೋಳ-ಯಡೂರ ಸೇತುವೆ ಕೂಡ ಮುಳುಗಡೆಯಾಗುವ ಸಾಧ್ಯತೆ ಇದೆ.

ತಹಸೀಲ್ದಾರ್‌ ಭೇಟಿ: ಕೃಷ್ಣಾ ನದಿ ತೀರದ ಕಲ್ಲೋಳ, ಯಡೂರ, ಮಲಿಕವಾಡ-ದತ್ತವಾಡ ಮೊದಲಾದ ಗ್ರಾಮಗಳಿಗೆ ತಹಸೀಲ್ದಾರ್‌ ಡಾ. ಸಂತೋಷ್‌ಕುಮಾರ ಬಿರಾದಾರ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬ್ಯಾರೇಜ್‌ ಮುಳುಗಡೆ: ಮೂರು ತಿಂಗಳ ಕಾಲ ಬತ್ತಿಹೋಗಿದ್ದ ಕೃಷ್ಣಾ ನದಿಗೆ ಈಗ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಕಾಗವಾಡ ತಾಲೂಕಿನ ಉಗಾರ ಬ್ಯಾರೇಜ್‌ ಮುಳುಗಡೆಯಾಗಿದೆ. ಬ್ಯಾರೇಜ್‌ ಮೇಲೆ ಸುಮಾರು ಆರು ಅಡಿಗಳಷ್ಟು ಎತ್ತರದಲ್ಲಿ ನೀರು ಹರಿದುಹೋಗುತ್ತಿದೆ.

ಚಿಕ್ಕೋಡಿ ತಾಲೂಕಿನಲ್ಲಿ ಸೋಮವಾರ ಮಳೆಯಾಗಿಲ್ಲ. ಮಹಾರಾಷ್ಟ್ರದಲ್ಲೂ ಮಳೆ ಪ್ರಮಾಣ ಕಡಿಮೆಯಾಗಿದೆ. ನದಿ ತೀರದ ಜನರು ಭಯ ಪಡುವ ಅಗತ್ಯವಿಲ್ಲ.
- ಡಾ. ಸಂತೋಷ್‌ಕುಮಾರ ಬಿರಾದಾರ, ತಹಸೀಲ್ದಾರ

ಮಳೆಗೆ ಬಿಡುವು :
ಬೆಳಗಾವಿ ನಗರ ಸೇರಿದಂತೆ ಹಲವೆಡೆ ಎರಡು ದಿನಗಳ ಕಾಲ ಅಬ್ಬರಿಸಿದ್ದ ಮಳೆ ಸೋಮವಾರ ಬಿಡುವು ನೀಡಿತ್ತು. ಇಡೀ ದಿನ ಆಗಾಗ ಜಿಟಿ ಜಿಟಿ ಮಳೆ, ಬಿಸಿಲಿನ ವಾತಾವರಣ ಇತ್ತು. ಎರಡು ದಿನಗಳ ಭಾರೀ ಮಳೆಗೆ ನಗರದ ಹೊರವಲಯದ ಹೊಲಗಳಲ್ಲಿ ನೀರು ತುಂಬಿದ್ದು ಕೃಷಿಕರು ಖುಷಿಯಾಗಿದ್ದಾರೆ. ನದಿಗಳಲ್ಲೂ ನೀರಿನ ಹರಿವು ಹೆಚ್ಚಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ