ಆ್ಯಪ್ನಗರ

ಲಖನ್‌ಗೆ 300 ಕೆಜಿ ತೂಕದ ಸೇಬಿನ ಹಾರ

ಗೋಕಾಕ: ಹೈವೋಲ್ಟೇಜ್‌ ಕ್ಷೇತ್ರ ಗೋಕಾಕದಲ್ಲಿಕಾಂಗ್ರೆಸ್‌ ಅಭ್ಯರ್ಥಿ ...

Vijaya Karnataka 19 Nov 2019, 5:00 am
ಗೋಕಾಕ: ಹೈವೋಲ್ಟೇಜ್‌ ಕ್ಷೇತ್ರ ಗೋಕಾಕದಲ್ಲಿಕಾಂಗ್ರೆಸ್‌ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಸಹಸ್ರಾರು ಬಂಬಲಿಗರೊಂದಿಗೆ ಮೆರವಣಿಗೆ ನಡೆಸಿ ಬಳಿಕ ನಾಮಪತ್ರ ಸಲ್ಲಿಸಿದರು.
Vijaya Karnataka Web 18GOK2B_53
ಕಾಂಗ್ರೆಸ್‌ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಅವರಿಗೆ ಬೆಂಬಲಿಗರು 300 ಕೆಜಿ ತೂಕದ ಸೇಬಿನ ಹಾರ ಹಾಕಿ ಸನ್ಮಾನಿಸಿದರು.


ಬೃಹತ್‌ ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿಗೆ ಆಗಮಿಸಿದ ಲಖನ್‌ ಜಾರಕಿಹೊಳಿ ಅವರಿಗೆ ಬೆಂಬಲಿಗರು 300 ಕೆಜಿ ತೂಕದ ಸೇಬಿನ ಹಾರ ಹಾಕಿ ಸನ್ಮಾನಿಸಿದರು.

ಉಪಚುನಾವಣೆಯಲ್ಲಿಸಹೋದರ ರಮೇಶ್‌ ವಿರುದ್ಧವೇ ಲಖನ್‌ ಸ್ಪರ್ಧಿಸಿದ್ದರಿಂದ ಪೊಲೀಸರು ಬಿಗಿ ಬಂದೋಬಸ್‌್ತ ಏರ್ಪಡಿಸಿದ್ದರು. ನಗರದ ಬಸವೇಶ್ವರ ವೃತ್ತದಲ್ಲೇ ಬ್ಯಾರಿಕೇಡ್‌ ಹಾಕಿ ಸಾರ್ವಜನಿಕರನ್ನು ತಡೆದರು. ತಹಸೀಲ್ದಾರ ಕಚೇರಿಯಲ್ಲಿಕೂಡ ಮೂವರೂ ಅಭ್ಯರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿಕೂಡಿಸಿ ಸಮಯಾನುಸಾರ ನಾಮಪತ್ರ ಸ್ವೀಕರಿಸಿ, ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ನೋಡಿಕೊಂಡರು.

ಲಖನ್‌ ಅವರೊಂದಿಗೆ ಯಮಕನಮರಡಿ ಶಾಸಕ ಸತೀಶ್‌ ಜಾರಕಿಹೊಳಿ ಕೂಡ ನಾಮಪತ್ರ ಸಲ್ಲಿಸಿ ಗಮನ ಸೆಳೆದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್‌, ಇಷ್ಟು ದಿನ ಗೋಕಾಕದ ಜನರನ್ನು ರಮೇಶ್‌ ಬೆಂಬಲಿಗರು ಭಯದಲ್ಲೇ ಇಟ್ಟಿದ್ದರು. ಈಗ ನಾವು ಮುಂದೆ ಬಂದಿದ್ದೇವೆ. ಜನ ಭಯ ತೊರೆದು ಹೊರಗೆ ಬಂದಿದ್ದಾರೆ. ಪಕ್ಷಕ್ಕೆ ದ್ರೋಹ ಬಗೆದು, ಸ್ಥಳೀಯ ಜನರನ್ನು ಲೆಕ್ಕಿಸದೆ ಸ್ವಾರ್ಥಕ್ಕಾಗಿ ಉಪಚುನಾವಣೆಗೆ ಕಾರಣರಾಗಿರುವ ಅವರಿಗೆ ಈ ಬಾರಿ ಜನ ಬುದ್ಧಿ ಕಲಿಸಲಿದ್ದಾರೆ ಎಂದರು.

ಅಳಿಯಂದಿರ ದರ್ಬಾರ್‌: ಲಖನ್‌ ಜಾರಕಿಹೊಳಿ ಮಾತನಾಡಿ, ಕಳೆದ ಐದು ಚುನಾವಣೆಗಳಲ್ಲಿಅಣ್ಣ ರಮೇಶ್‌ ಪರ ಪ್ರಚಾರ ಮಾಡಿದ್ದೇನೆ. ಇತ್ತೀಚೆಗೆ ಅವರ ಅಳಿಯಂದಿರ ಭ್ರಷ್ಟಾಚಾರ, ದರ್ಬಾರ್‌ ಜಾಸ್ತಿಯಾಗಿತ್ತು. ಮತದಾರರು ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ದ್ರೋಹಮಾಡಿ ಬಿಜೆಪಿ ಸೇರಿದ್ದಾರೆ. ಆದರೆ, ಮತದಾರರು ನಮ್ಮ ಜತೆಯಲ್ಲೇ ಇದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡದೇ ನಮ್ಮದೇ ಲೆಕ್ಕಾಚಾರದ ಮೂಲಕ ಚುನಾವಣೆಯಲ್ಲಿಗೆದ್ದು ತೋರಿಸುತ್ತೇವೆ ಎಂದರು.

ನಗರದ ಕೊಳವಿ ಹಣಮಂತ ದೇವರ ಗುಡಿಯಿಂದ ಹೊರಟ ಮೆರವಣಿಗೆಯಲ್ಲಿಶಾಸಕಿ ಅಂಜಲಿ ನಿಂಬಾಳ್ಕರ್‌, ಮಾಜಿ ಶಾಸಕ ಶ್ಯಾಮ್‌ ಘಾಟಗೆ ಮೊದಲಾದವರು ಪಾಲ್ಗೊಂಡಿದ್ದರು.

ಹುಲಿ ವಿರುದ್ಧ ಹುಲಿಯನ್ನೇ ಬಿಟ್ಟಿದ್ದೇನೆ
ಇದು ನಿಜವಾಗಿಯೂ ಜಂಗೀ ಕುಸ್ತಿ.ಇಷ್ಟು ದಿನ ಸಹೋದರ ರಮೇಶ್‌, ನಾನು ಒಂದೇ ಪಕ್ಷದಲ್ಲಿಇದ್ದುದರಿಂದ ಆರೋಪ ಮಾಡಲಿಲ್ಲ. ಕಳೆದ 20 ವರ್ಷದಿಂದಲೂ ಭ್ರಷ್ಟಾಚಾರ ಇದೆ. ನಾನು ಬಾಯಿ ಮುಚ್ಚಿಕೊಂಡಿರಬೇಕಾಗಿತ್ತು. ಈಗ ಮೈದಾನ ಖುಲ್ಲಾಆಗಿದೆ. ಹುಲಿಯ ವಿರುದ್ಧ ಸೆಣಸಾಡಲು ಹುಲಿಯನ್ನೇ ಬಿಟ್ಟಿದ್ದೇನೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ