ಆ್ಯಪ್ನಗರ

ಕೊಲ್ಲಾಪುರ: 32 ಸೇತುವೆಗಳು ಜಲಾವೃತ

ಇಚಲಕರಂಜಿ: ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಲ್ಲಾಪುರದಲ್ಲಿ ಪಂಚಗಂಗಾ ನದಿ ನೀರಿನ ಮಟ್ಟ 32 ಅಡಿಗೇರಿದೆ...

Vijaya Karnataka 13 Jul 2018, 5:00 am
ಇಚಲಕರಂಜಿ: ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಲ್ಲಾಪುರದಲ್ಲಿ ಪಂಚಗಂಗಾ ನದಿ ನೀರಿನ ಮಟ್ಟ 32 ಅಡಿಗೇರಿದೆ. ಜಿಲ್ಲೆಯಲ್ಲಿಯ 32 ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿದ್ದು ಶ್ರೀಕ್ಷೇತ್ರ ನರಸಿಂಹವಾಡಿ ದೇವಸ್ಥಾನಕ್ಕೂ ನೀರು ನುಗ್ಗಿ ಇಂದು ದಕ್ಷಿಣದ್ವಾರ ಪೂಜೆ ನಡೆಯಿತು.
Vijaya Karnataka Web BEL-12ICH8


ನಗರದ ಸಿಪಿಆರ್‌ ವೃತ್ತ, ಪಾರೀಖ ಸೇತುವೆ, ರಾಜಾರಾಮಪುರಿ, ಜನತಾ ಬಜಾರ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸುತ್ತಲೂ ನೀರು ನುಗ್ಗಿದ್ದರಿಂದ ಗುರುವಾರ ಮಧ್ಯಾಹ್ನ 2 ಗಂಟೆಯಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಇಚಲಕರಂಜಿಯ ಪಂಚಗಂಗಾ ನದಿಯ ಕೆಳ ಸೇತುವೆ ಮೇಲಿಂದ ನೀರು ಹರಿಯುತ್ತಿದ್ದುದರಿಂದ ನದಿಯಾಚೆಯ ಮಾಣಕಾಪುರ, ಕಸನಾಳ, ಕಾರದಗಾ, ಹುಪರಿ, ರೇಂದಾಳ, ಯಳಗೂಡ ಸೇರಿದಂತೆ 11 ಹಳ್ಳಿಗಳ ಸಂಚಾರ ಸ್ಥಗಿತಗೊಂಡಿದೆ. ನದಿದಡದಲ್ಲಿರುವ ಮಾಣಕಾಪುರ, ಶಿರದವಾಡ, ಅಬ್ದುಲಾಟ, ಟಾಕವಡೆ, ಚಂದೂರ, ರುಯಿ ಗ್ರಾಮಗಳಲ್ಲಿಯ ನೂರಾರು ಎಕರೆ ಪ್ರದೇಶದ ಹೊಲ, ಗದ್ದೆಗಳ ಕಬ್ಬಿನ ಬೆಳೆ ನೀರಿನಲ್ಲಿ ನಿಂತಿದೆ. ನದಿ ದಡದಲ್ಲಿ ಮುಂಜಾಗ್ರತಾ ಕ್ರಮವಾಗಿ ಸುರಕ್ಷಾದಳ, ಅಗ್ನಿಶಾಮಕದಳಗಳು ಸಜ್ಜಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ