ಆ್ಯಪ್ನಗರ

332 ಮಿಲಿಯನ್‌ಗೂ ಅಧಿಕ ಜನರಲ್ಲಿ ಮಾನಸಿಕ ರೋಗ

ವಿಕ ಸುದ್ದಿಲೋಕ 8 Apr 2017, 2:00 am

ಬೆಳಗಾವಿ: ವಿಶ್ವದಲ್ಲಿ 332 ಮಿಲಿಯನ್‌ಗೂ ಅಧಿಕ ಜನ ಮಾನಸಿಕ ರೋಗಗಳಿಗೆ ತುತ್ತಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಜಿಲ್ಲಾಧಿಕಾರಿ ಎನ್‌. ಜಯರಾಂ ಹೇಳಿದರು.

ಅವರು ಯಳ್ಳೂರು ರಸ್ತೆಯಲ್ಲಿರುವ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್‌ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2017 ಅಂಗವಾಗಿ ಆಯೋಜಿಸಿದ್ದ 'ಖಿನ್ನತೆ-ಬನ್ನಿ ಮಾತನಾಡೋಣ' ಎಂಬ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಕ್ತದೊತ್ತಡ, ಮಧುಮೇಹ, ಹೃದಯ ರೋಗಗಳ ಬಗ್ಗೆ ಇರುವ ಕಾಳಜಿ ಮತ್ತು ತಿಳಿವಳಿಕೆ ಮನೋರೋಗಗಳ ಬಗ್ಗೆ ಇಲ್ಲದಿರುವುದು ವಿಪರ್ಯಾಸ. ಈ ಸಂಕೋಚ ಬದಿಗಿರಿಸಿ ಚಿಕಿತ್ಸೆಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.

Vijaya Karnataka Web 332
332 ಮಿಲಿಯನ್‌ಗೂ ಅಧಿಕ ಜನರಲ್ಲಿ ಮಾನಸಿಕ ರೋಗ

ವಿಶ್ವದಲ್ಲಿ ಪ್ರತಿದಿನ 3 ಸಾವಿರ ಜನ ಆತ್ಮಹತ್ಯೆಗೆ ಶರಣಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅದರಲ್ಲೂ ಮಹಿಳೆಯರಲ್ಲಿ ಖಿನ್ನತೆ ಹಾಗೂ ಆತಂಕ ಸಂಬಂಧಿ ರೋಗಗಳ ಪ್ರಮಾಣ ಅಧಿಕಗೊಳ್ಳುತ್ತಿರುವುದು ಇನ್ನೂ ಹೆಚ್ಚು ಕಳವಳ ಸೃಷ್ಟಿಸಿದೆ ಎಂದು ಜಿಲ್ಲಾಧಿಕಾರಿ ಎನ್‌. ಜಯರಾಂ ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಆರ್‌. ರಾಮಚಂದ್ರನ್‌, ಮನೋರೋಗಗಳನ್ನು ಸಂಪೂರ್ಣ ಹತೋಟಿಗೆ ತರಲು ಸಕಾಲಕ್ಕೆ ತಕ್ಕ ಸಮಾಲೋಚನೆ ಹಾಗೂ ವೈದ್ಯಕೀಯ ಚಿಕಿತ್ಸೆ ಲಭ್ಯವಿದ್ದು, ಇಂತಹ ತೊಂದರೆಗಳಿಗೆ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಚಿಕಿತ್ಸೆ ಹೊಂದಲು ಕರೆ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ‍್ಯಕ್ರಮಾಧಿಕಾರಿ ಡಾ.ಚಾಂದನಿ ಜಿ.ದೇವಡಿ, ಅಧ್ಯಕ್ಷ ತೆ ವಹಿಸಿದ್ದ ಡಾ.ಎಚ್‌.ಬಿ.ರಾಜಶೇಖರ ಮಾತನಾಡಿದರು. ಡಾ.ಸುಜಾತಾ ಜಾಲಿ, ಡಾ.ಸತೀಶ ಧಾಮಣಕರ, ಡಾ.ಎಚ್‌.ಬಿ.ರಾಜಶೇಖರ, ಡಾ.ಎಸ್‌.ಸಿ.ಧಾರವಾಡ, ಡಾ.ನದಾಫ್‌ ಶೇಖ್‌, ಡಾ.ಕೊಂಕಣಿ ಭರತೇಶ, ಮೋನಿಕಾ ಸಾವಂತ ಅವರನ್ನು ಕಾರ‍್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಪ್ಪಾಸಾಹೇಬ್‌ ನರಟ್ಟಿ ಸ್ವಾಗತಿಸಿ ಪರಿಚಯಿಸಿದರು. ಯುಎಸ್‌ಎಂ ಕೆಎಲ್‌ಇ ಮನೋರೋಗÜ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ.ಸುಚೇತಾ ವಾಘಮಾರೆ, ಕೆಎಲ್‌ ಇ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ