ಆ್ಯಪ್ನಗರ

35 ಕೆಜಿ ನಿಷೇಧಿತ ಪ್ಲಾಸ್ಟಿಕ್‌ ಸಾಮಗ್ರಿ ವಶ

ರಾಯಬಾಗ: ತಾಲೂಕಿನ ಕಂಕಣವಾಡಿಯಲ್ಲಿಪಟ್ಟಣ ಪಂಚಾಯಿತಿ ...

Vijaya Karnataka 28 Sep 2019, 5:00 am
ರಾಯಬಾಗ: ತಾಲೂಕಿನ ಕಂಕಣವಾಡಿಯಲ್ಲಿಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 35 ಕೆಜಿಯಷ್ಟು ನಿಷೇಧಿತ ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವ ಜತೆಗೆ ಒಟ್ಟು 2700 ರೂ. ದಂಡ ವಸೂಲಿ ಮಾಡಿದ್ದಾರೆ.
Vijaya Karnataka Web 27RAIBAG3PHOTO_53


ಪಪಂ ಮುಖ್ಯಾಧಿಕಾರಿ ಕೆ.ಎಂ. ಖಿಲಾರೆ ಅವರ ಮಾರ್ಗದರ್ಶನದಲ್ಲಿಕಾರ್ಯಾಚರಣೆ ನಡೆಸಿದ ಪಪಂ ಸಿಬ್ಬಂದಿ, ಅಂಗಡಿಕಾರರು ಇನ್ನೊಮ್ಮೆ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡಿರುವುದು ಕಂಡು ಬಂದರೆ ಅಂಥ ಅಂಗಡಿಗಳ ವ್ಯಾಪಾರ ಪರವಾನಗಿ ರದ್ದುಪಡಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಹಾಲಸಿದ್ದ ಸುಳ್ಳನ್ನವರ, ಮಹೇಂದ್ರ ಶೆಟ್ಟಿ, ಸಿದ್ರಾಮ ಕುಶಮುಂಡಿ, ಮಾರುತಿ ಜಾಧವ, ಮಹಾದೇವ ಸಾತಪ್ಪಗೋಳ, ಬಸವರಾಜ ಮಡಿವಾಳ, ಸಾಗರ ಬಡಿಗೇರ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ