ಆ್ಯಪ್ನಗರ

ಮಲ್ಲಿಕಾರ್ಜುನ ದೇವರಿಗೆ 35 ಕೆಜಿ ಕಂಚಿನ ಮೂರ್ತಿ ದಾನ

ಸಮೀಪದ ಕಪ್ಪಲಗುದ್ದಿ ಗ್ರಾಮದ ಮಲ್ಲಿಕಾರ್ಜುನ ದೇವರ ಕರ್ತೃಗದ್ದುಗೆಗೆ ಸುಲ್ತಾನಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿಪಿ...

Vijaya Karnataka 17 Aug 2018, 5:00 am
ಪಾಲಬಾವಿ: ಸಮೀಪದ ಕಪ್ಪಲಗುದ್ದಿ ಗ್ರಾಮದ ಮಲ್ಲಿಕಾರ್ಜುನ ದೇವರ ಕರ್ತೃಗದ್ದುಗೆಗೆ ಸುಲ್ತಾನಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿ.ಪಿ. ಹಿರೇಮಠ ದಂಪತಿ ದಾನವಾಗಿ ನೀಡಿದ 35 ಕೆಜಿ ತೂಕದ ಶಿವನ ಮುಖದ ಕಂಚಿನ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
Vijaya Karnataka Web BEL-16PALABAVI1(A) PHOTO


ಗುರುವಾರ ಬೆಳಗ್ಗೆ ಗ್ರಾಮದ ಬೀರದೇವರ ದೇವಸ್ಥಾನದಲ್ಲಿ ಇರಿಸಿದ್ದ ಮೂರ್ತಿಗೆ ಪಂಚಾಕ್ಷ ರಿ ಹಿರೇಮಠ ಹಾಗೂ ಶಿವಯ್ಯ ಹಿರೇಮಠ ಸ್ವಾಮೀಜಿ ಪೂಜೆ ಸಲ್ಲಿಸಿದರು. ಬೀರದೇವರ ದೇವಸ್ಥಾನದಿಂದ ತಳಿರು ತೋರಣಗಳಿಂದ ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರ ಕುಂಭ, ಆರತಿ ಮೆರವಣಿಗೆ ಜರುಗಿತು. ಮಧ್ಯಾಹ್ನ 12 ಗಂಟೆಗೆ ಮಲ್ಲಿಕಾರ್ಜುನ ದೇವರ ಕರ್ತೃಗದ್ದುಗೆಗೆ ಭವ್ಯ ಕಂಚಿನ ಮೂರ್ತಿ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಗ್ರಾಪಂ ಉಪಾಧ್ಯಕ್ಷ ಭರಮಪ್ಪ ಬಾಗೋಜಿ, ಲಕ್ಷ ್ಮಣ ಕುಡಲಗಿ, ಮುತ್ತಪ್ಪ ಬದ್ರಶೆಟ್ಟಿ, ಈರಪ್ಪ ಭಂಗಿ, ಸಿದ್ದಪ್ಪ ಬದ್ರಶೆಟ್ಟಿ, ಗುರು ಅಂಗಡಿ, ಶೇಖರ ಸಂಕಾನಟ್ಟಿ, ಗಿರಿಮಲ್ಲ ಕಲ್ಲಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ