ಆ್ಯಪ್ನಗರ

379 ದಾವೆಗಳು ರಾಜೀ ಸಂಧಾನದ ಮೂಲಕ ಇತ್ಯರ್ಥ

ರಾಯಬಾಗ: ಪಕ್ಷ ಗಾರರು ತಮ್ಮ ವ್ಯಾಜ್ಯ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆ ಹರಿಸಿಕೊಂಡು ತಮ್ಮ ನೆರೆಹೊರೆಯವರೊಂದಿಗೆ, ಉತ್ತಮ ಸಂಬಂಧ ಹೊಂದಿ ನೆಮ್ಮದಿಯಿಂದ ...

Vijaya Karnataka 16 Jul 2019, 5:00 am
ರಾಯಬಾಗ : ಪಕ್ಷ ಗಾರರು ತಮ್ಮ ವ್ಯಾಜ್ಯ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆ ಹರಿಸಿಕೊಂಡು ತಮ್ಮ ನೆರೆಹೊರೆಯವರೊಂದಿಗೆ, ಉತ್ತಮ ಸಂಬಂಧ ಹೊಂದಿ ನೆಮ್ಮದಿಯಿಂದ ಜೀವನ ನಡೆಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಧರ್ಮಗಿರಿ ರಾಮಸ್ವಾಮಿ ಹೇಳಿದರು.
Vijaya Karnataka Web BEL-15RAIBAG2PHOTO


ಪಟ್ಟಣದ ನ್ಯಾಯಾಲಯದಲ್ಲಿ ನಡೆದ ಬೃಹತ್‌ ಲೋಕ ಅದಾಲತ್‌ ಉದ್ದೇಶಿಸಿ ಮಾತನಾಡಿ ಜಿದ್ದಾ ಜಿದ್ದಿನಿಂದ ಸಮಯ, ಹಣ, ಸಂಬಂಧಗಳು ಹಾಳಾಗುವುದರ ಜತೆಗೆ ಕಾಯಂ ಆಗಿ ವೈರತ್ವ ಬೆಳೆಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ರಾಜೀ ಸಂಧಾನದ ಮೂಲಕ ತಮ್ಮ ಕೇಸ್‌ಗಳನ್ನು ಬಗೆ ಹರಿಸಿಕೊಂಡರೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬಹುದಾಗಿದೆ ಎಂದರು.

ಲೋಕ ಅದಾಲತ್‌ನಲ್ಲಿ ರಾಜಿಯಾಗಬಲ್ಲ ಸಿವಿಲ್‌ ಮತ್ತು ಕ್ರಿಮಿನಲ್‌ ಸೇರಿ ಒಟ್ಟು 379 ದಾವೆಗಳನ್ನು ಉಭಯ ಪಕ್ಷ ಗಾರರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಲಾಯಿತು.

ಪ್ರಧಾನ ದಿವಾಣಿ ನ್ಯಾಯಾಧೀಶ ಸೋಮಾ ಎ.ಎಸ್‌., ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಜಿ.ಬಿ.ಹಳ್ಳಕಾಯಿ, ಸರಕಾರಿ ಸಹಾಯಕ ಅಭಿಯೋಜಕ ಎಂ.ಪಿ.ಗಾಂವ್ಕರ್‌, ತಹಸೀಲ್ದಾರ್‌ ಡಿ.ಎಚ್‌.ಕೋಮರ ಹಾಗೂ ನ್ಯಾಯವಾದಿಗಳು ಮತ್ತು ಪಕ್ಷ ಗಾರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ