ಆ್ಯಪ್ನಗರ

ಇಟ್ಟಿಗೆ ಭಟ್ಟಿಗಳಲ್ಲಿ ದುಡಿಯುತ್ತಿದ್ದ 6 ಮಕ್ಕಳ ರಕ್ಷ ಣೆ

ಖಾನಾಪುರ: ತಾಲೂಕಿನ ಇದ್ದಲಹೊಂಡ ಗ್ರಾಮದ ಹೊರವಲಯದ ಇಟ್ಟಿಗೆ ಭಟ್ಟಿಗಳ ಮೇಲೆ ಗುರುವಾರ ದಾಳಿ ನಡೆಸಿದ ಕಾರ್ಮಿಕ ಮತ್ತು ಶಿಕ್ಷ ಣ ಇಲಾಖೆ ಅಧಿಕಾರಿಗಳು ಅಲ್ಲಿ ...

Vijaya Karnataka 11 Jan 2019, 5:00 am
ಖಾನಾಪುರ : ತಾಲೂಕಿನ ಇದ್ದಲಹೊಂಡ ಗ್ರಾಮದ ಹೊರವಲಯದ ಇಟ್ಟಿಗೆ ಭಟ್ಟಿಗಳ ಮೇಲೆ ಗುರುವಾರ ದಾಳಿ ನಡೆಸಿದ ಕಾರ್ಮಿಕ ಮತ್ತು ಶಿಕ್ಷ ಣ ಇಲಾಖೆ ಅಧಿಕಾರಿಗಳು ಅಲ್ಲಿ ದುಡಿಯುತ್ತಿದ್ದ 6 ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ.
Vijaya Karnataka Web BEL-10KHANAPUR2


ಬೆಳಗಾವಿಯ ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ ಮತ್ತು ಬಿಇಒ ಉಮಾ ಬರಗೇರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಭಟ್ಟಿಯಲ್ಲಿ ಕಾರ್ಮಿಕರ ಜತೆ ಅವರ ಮಕ್ಕಳೂ ದುಡಿಯುತ್ತಿದ್ದರು. ಅಂಥ ಮಕ್ಕಳನ್ನು ರಕ್ಷಿಸಿ ಬೆಳಗಾವಿಯ ಅನಾಥ ಮಕ್ಕಳ ಆಶ್ರಮದ ವಶಕ್ಕೆ ಒಪ್ಪಿಸಲಾಗಿದೆ.

''ಈ ಮಕ್ಕಳು ವಿವಿಧ ಶಾಲೆಗಳ ವಿದ್ಯಾರ್ಥಿಗಳಾಗಿದ್ದು, ಗುರುವಾರ ಶಾಲೆಗೆ ತೆರಳಿರಲಿಲ್ಲ.ಅವರನ್ನೆಲ್ಲ ವಸತಿ ಶಾಲೆಗೆ ದಾಖಲಿಸಿ ಅವರು ಶಿಕ್ಷ ಣ ಮುಂದುವರಿಸಲು ಕ್ರಮ ಜರುಗಿಸಲಾಗುವುದು. ಈ ಕುರಿತು ಇಟ್ಟಿಗೆ ಭಟ್ಟಿಗಳ ಮಾಲೀಕರ ವಿರುದ್ಧ ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು'', ಎಂದು ಬಿಇಒ ಉಮಾ ಬರಗೇರ ಮಾಹಿತಿ ನೀಡಿದ್ದಾರೆ.

ಕಾರ್ಮಿಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಜೋಗೂರು, ಶ್ರೀಕಾಂತ ಪಾಟೀಲ, ಬೀರೇಶ ಮಾರ್ಕರ್‌, ಸಿಆರ್‌ಪಿ ಗೋವಿಂದ ಪಾಟೀಲ ಸೇರಿದಂತೆ ಕಾರ್ಮಿಕ ಮತ್ತು ಶಿಕ್ಷ ಣ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ