ಆ್ಯಪ್ನಗರ

64 ಸಾವಿರ ರೂ. ಮೌಲ್ಯದ ಅಕ್ರಮ ಮದ್ಯ ವಶ

ಬೈಲಹೊಂಗಲ: ಪಟ್ಟಣದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಅಕ್ರಮವಾಗಿ ...

Vijaya Karnataka 1 Jan 2020, 5:00 am
ಬೈಲಹೊಂಗಲ: ಪಟ್ಟಣದ ಕೇಂದ್ರ ಬಸ್‌ ನಿಲ್ದಾಣದಲ್ಲಿಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 64 ಸಾವಿರ ರೂ.ಮೌಲ್ಯದ 22 ಬಾಕ್ಸ್‌ ಮದ್ಯ, 10 ಸಾವಿರ ರೂ. ನಗದು ಮತ್ತು ಸಾಗಾಟ ಮಾಡುತ್ತಿದ್ದ ಕಾರ್‌ ಅನ್ನು ಸ್ಥಳೀಯ ಪೊಲೀಸ್‌ರು ವಶಪಡಿಸಿಕೊಂಡಿದ್ದಾರೆ.
Vijaya Karnataka Web 64 thousand rs value of illicit liquor
64 ಸಾವಿರ ರೂ. ಮೌಲ್ಯದ ಅಕ್ರಮ ಮದ್ಯ ವಶ


ಚಿವಟಗುಂಡಿ ಗ್ರಾಮದ ನಾಗಪ್ಪ ಗಂಗಪ್ಪ ಗೊರಕೊಳ್ಳಿ (34) ಬಂಧಿತ ಆರೋಪಿ. ಹೊಸ ವರ್ಷದ ನಿಮಿತ್ತ ಅನಧಿಕೃತವಾಗಿ ಮದ್ಯ ಸಾಗಿಸುತ್ತಿದ್ದಾಗ ಎಎಸ್‌ಪಿ ಪ್ರದೀಪ ಗುಂಟಿ ನೇತೃತ್ವದಲ್ಲಿಸಿಪಿಐ ಮಂಜುನಾಥ ಕುಸಗುಲ್‌, ಪಿಎಸ್‌ಐ ಎಂ.ಎಸ್‌.ಹೂಗಾರ ಹಾಗೂ ಸಿಬ್ಬಂದಿ ಜಾಲಬೀಸಿ ಆರೋಪಿಯನ್ನು ಬಂಧಿಸಿದರು. ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಸಾಲಬಾಧೆ; ರೈತ ಆತ್ಮಹತ್ಯೆ :
ತಾಲೂಕಿನ ಆನಿಗೋಳ ಗ್ರಾಮದ ಯುವ ರೈತರೊಬ್ಬರು ಸಾಲಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಾಂತೇಶ ಸೋಮಪ್ಪ ಉಪ್ಪಾರ (39) ಮೃತ ರೈತ. ಪಿಕೆಪಿಎಸ್‌ನಲ್ಲಿ1 ಲಕ್ಷ ರೂ., ಖಾಸಗಿ ಸೊಸೈಟಿಗಳಲ್ಲಿ60 ಸಾವಿರ ರೂ. ಸಾಲ ಮಾಡಿದ್ದರು. 6 ಎಕರೆ ಜಮೀನು ಹೊಂದಿದ್ದ ರೈತ ಮುಂಗಾರು-ಹಿಂಗಾರು ಬೆಳೆಯ ವೈಫಲ್ಯದಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ನದಿಯಲ್ಲಿಜಿಗಿದು ಆತ್ಮಹತ್ಯೆ :
ತಾಲೂಕಿನ ಕುರುಗುಂದ ಗ್ರಾಮದ ಯುವಕನೊಬ್ಬ ಮಾನಸಿಕ ಖಿನ್ನತೆಯಿಂದಾಗಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಚಿನ್‌ ಶಂಕ್ರಯ್ಯಾ ಹಿರೇಮಠ (24) ಮೃತ ಯುವಕ. ಈತ ಎನ್‌ಟಿಟಿಎಫ್‌ ಓದಿದ್ದ. ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ