ಎಂ.ಕೆ.ಹುಬ್ಬಳ್ಳಿ: ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವೊಂದನ್ನು ಪಟ್ಟಣದ ಪಾರಿಶ್ವಾಡ ಕ್ರಾಸ್ ಬಳಿ ತಡೆದಿರುವ ಬೈಲಹೊಂಗಲ ಆಹಾರ ನಿರೀಕ್ಷ ಕರು ಹಾಗೂ ಪಟ್ಟಣದ ಉಪ ಠಾಣೆ ಅಧಿಕಾರಿಗಳು 50 ಕೆಜಿ ತೂಕದ 65 ಚೀಲ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷ ಕ ಬಸವರಾಜ ವಡರಟ್ಟಿ, ಸ್ಥಳೀಯ ಉಪ ಠಾಣೆ ಎಎಸ್ಐ ಡಿ.ಬಿ.ಈಟಿ ಹಾಗೂ ಪೇದೆ ಎಸ್.ಎಸ್. ಕಾಜಗಾರ ದಾಳಿ ನಡೆಸಿದ್ದಾರೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
65 ಚೀಲ ಅಕ್ರಮ ಅಕ್ಕಿ ವಶ
ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವೊಂದನ್ನು ಪಟ್ಟಣದ ಪಾರಿಶ್ವಾಡ ಕ್ರಾಸ್ ಬಳಿ ತಡೆದಿರುವ ಬೈಲಹೊಂಗಲ ಆಹಾರ ನಿರೀಕ್ಷ ಕರು ಹಾಗೂ ...
Vijaya Karnataka 17 Mar 2019, 5:00 am