ಆ್ಯಪ್ನಗರ

ಬೈಲಹೊಂಗಲದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 739 ಚೀಲ ಪಡಿತರ ಅಕ್ಕಿ ವಶ

ಬೈಲಹೊಂಗಲ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ...

Vijaya Karnataka 16 Sep 2020, 5:00 am
ಬೈಲಹೊಂಗಲ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು 7.39 ಲಕ್ಷ ರೂ. ಮೌಲ್ಯದ ಅಕ್ಕಿ ಚೀಲ ಹಾಗೂ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶಪಡಿಸಿಕೊಂಡಿದ್ದಾರೆ.
Vijaya Karnataka Web 15HTP6_53
ಅಕ್ರಮವಾಗಿ ಪಡಿತರ ಅಕ್ಕಿ ಚೀಲ ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಬೈಲಹೊಂಗಲ ಠಾಣೆ ಪೊಲೀಸರು.


ಹುಬ್ಬಳ್ಳಿಯ ಪತೇಶಾ ನಗರದ ಜಮಾಲಖಾನ ಸತ್ತಾರಖಾನ ಪಠಾಣ, ದಿಲಾವರಖಾನ ಸತ್ತಾರಖಾನ ಪಠಾಣ, ಮಂಜುನಾಥ ವಿರೂಪಾಕ್ಷಪ್ಪ ಹರ್ಲಾಪೂರ ಬಂಧಿತರು.

ಗದ್ದಿಕರವಿನಕೊಪ್ಪ ಕ್ರಾಸ್‌ ಹತ್ತಿರ ಲಾರಿ ತಡೆದ ಪೊಲೀಸರು ಲಾರಿಯಲ್ಲಿದ್ದ 5 ಲಕ್ಷ ರೂ.ಮೌಲ್ಯದ 500 ಅಕ್ಕಿ ಚೀಲ ಹಾಗೂ ಹಳೇ ಹುಬ್ಬಳ್ಳಿ ಬಂಕಾಪೂರ ಚೌಕ್‌ದ ಗೋದಾಮಿನಲ್ಲಿಇದ್ದ 2.39 ಲಕ್ಷ ರೂ. ಮೌಲ್ಯದ 239 ಪಡಿತರ ಅಕ್ಕಿ ಚೀಲ ವಶ ಪಡಿಸಿಕೊಂಡಿದ್ದಾರೆ.

ಸಿಪಿಐ ಉಳವಪ್ಪ ಸಾತೇನಹಳ್ಳಿ, ಪಿಎಸ್‌ಐ ಈರಪ್ಪ ರಿತ್ತಿ, ಆಹಾರ ನಿರೀಕ್ಷಕ ವೀರಭದ್ರ ಸೇಬನ್ನವರ ನೇತೃತ್ವದಲ್ಲಿಸಿಬ್ಬಂದಿ ಡಿ.ವೈ.ನಾಯ್ಕರ, ಯು.ಎಚ್‌.ಪೂಜೇರ, ಎಲ್‌.ಬಿ.ಹಮಾಣಿ, ಎಸ್‌.ವೈ.ವರಣ್ಣವರ ದಾಳಿ ನಡೆಸಿದ್ದರು. ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ