ಇಚಲಕರಂಜಿ (ಮಹಾರಾಷ್ಟ್ರ): ಕೊಲ್ಲಾಪುರ ಜಿಲ್ಲೆ ಶಿರೋಳ ತಾಲೂಕಿನ ಸಂಬಾಜಿಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಸ್ವಾಭಿಮಾನಿ ರೈತ ಸಂಘಟನೆ ಕಾರ್ಯಕರ್ತ ಬರಕತ್ ಗವಂಡಿ ಹಾಗೂ ಆತನ ಸಹೋದರ ಗಣಿ ಗವಂಡಿಗೆ ಸೇರಿದ ಅಂಗಡಿ ಹಾಗೂ ಗೋದಾಮಿನ ಮೇಲೆ ದಾಳಿ ನಡೆಸಿದ ಚುನಾವಣೆ ಆಯೋಗ ಹಾಗೂ ಐಟಿ ತಂಡ ದಾಖಲೆ ಇಲ್ಲದೆ ಸಂಗ್ರಹಿಸಿಟ್ಟಿದ್ದ 75 ಲಕ್ಷ ರೂ. ನಗದು ವಶ ಪಡಿಸಿಕೊಂಡಿದೆ. ಜೈಸಿಂಗಪುರ ಪಟ್ಟಣದ 12ನೇ ಓಣಿಯಲ್ಲಿರುವ ಗವಂಡಿ ಟೊಬಾಕೋ ಅಂಗಡಿ ಹಾಗೂ ಸಂಭಾಜಿಪುರದಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಲಾಗಿದೆ.
ಗ್ರಾಪಂ ಉಪಾಧ್ಯಕ್ಷ ನ ಅಂಗಡಿಯಿಂದ 75 ಲಕ್ಷ ರೂ. ವಶ
ಕೊಲ್ಲಾಪುರ ಜಿಲ್ಲೆ ಶಿರೋಳ ತಾಲೂಕಿನ ಸಂಬಾಜಿಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಸ್ವಾಭಿಮಾನಿ ರೈತ ಸಂಘಟನೆ ಕಾರ್ಯಕರ್ತ ಬರಕತ್ ಗವಂಡಿ ಹಾಗೂ ಆತನ ಸಹೋದರ ಗಣಿ ಗವಂಡಿಗೆ ...
Vijaya Karnataka 19 Apr 2019, 5:00 am