ಆ್ಯಪ್ನಗರ

ನಾಯಿಗಳ ದಾಳಿಗೆ 9 ಕುರಿಗಳ ಸಾವು

ತಾಲೂಕಿನ ಮಾರಿಹಾಳ-ತುಮ್ಮರಗುದ್ದಿ ನಡುವಿನ ಕೃಷಿ ಜಮೀನಿನಲ್ಲಿ ತಂಗಿದ್ದ ಕುರಿ ಹಿಂಡಿನ ಮೇಲೆ ಭಾನುವಾರ ರಾತ್ರಿ ಬಿಡಾಡಿ ನಾಯಿಗಳು ದಾಳಿ ನಡೆಸಿವೆ...

Vijaya Karnataka 17 Jul 2018, 5:00 am
ಬೆಳಗಾವಿ: ತಾಲೂಕಿನ ಮಾರಿಹಾಳ-ತುಮ್ಮರಗುದ್ದಿ ನಡುವಿನ ಕೃಷಿ ಜಮೀನಿನಲ್ಲಿ ತಂಗಿದ್ದ ಕುರಿ ಹಿಂಡಿನ ಮೇಲೆ ಭಾನುವಾರ ರಾತ್ರಿ ಬಿಡಾಡಿ ನಾಯಿಗಳು ದಾಳಿ ನಡೆಸಿವೆ. ಘಟನಯಲ್ಲಿ ಒಂಬತ್ತು ಕುರಿಗಳು ಮೃತಪಟ್ಟಿವೆ.
Vijaya Karnataka Web BLG-1607-2-52-16MAHESH5


ಸುಳಗಾ ಗ್ರಾಮದ ಪರಶುರಾಮ ಉಚಗಾಂವ ಮತ್ತು ಅವರ ಸಂಬಂಧಿಕರಿಗೆ ಸೇರಿದ 200ಕ್ಕೂ ಹೆಚ್ಚು ಕುರಿಗಳು ತುಮ್ಮರಗುದ್ದಿಯ ಮಾವಿನ ತೋಟದಲ್ಲಿ ಮೇಯಲು ತಂಗಿದ್ದವು. ಇದೇ ವೇಳೆ ನಾಯಿಗಳು ದಾಳಿ ನಡೆಸಿವೆ ಎಂದು ತೋಟದ ಮಾಲೀಕ ಇಸಾಕ್‌ ಜಮಾದಾರ ಮಾಹಿತಿ ನೀಡಿದ್ದಾರೆ. ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಪಶು ವೈದ್ಯಾಧಿಕಾರಿ ಡಾ. ಪ್ರಶಾಂತ ಪಾಟೀಲ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ