ಆ್ಯಪ್ನಗರ

9 ಶಾಸಕರಿಗೆ ಸೋಲು, 6 ಹೊಸಮುಖ ಪ್ರವೇಶ

ಬೆಳಗಾವಿ ಈ ಬಾರಿಯ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಮೂವರು ಮಾಜಿ ಸಚಿವರು ಸೋಲುಂಡಿದ್ದರೆ, 9 ಹಾಲಿ ಶಾಸಕರು ಪರಾಭವಗೊಂಡಿದ್ದಾರೆ...

Vijaya Karnataka 16 May 2018, 5:00 am
ಬೆಳಗಾವಿ: ಈ ಬಾರಿಯ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಮೂವರು ಮಾಜಿ ಸಚಿವರು ಸೋಲುಂಡಿದ್ದರೆ, 9 ಹಾಲಿ ಶಾಸಕರು ಪರಾಭವಗೊಂಡಿದ್ದಾರೆ.
Vijaya Karnataka Web 9 mlas are difited 6 new faces entered
9 ಶಾಸಕರಿಗೆ ಸೋಲು, 6 ಹೊಸಮುಖ ಪ್ರವೇಶ


ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಗೆಲುವು ಸಾಧಿಸಿದ್ದು, ಮಾಜಿ ಸಚಿವರಾದ ಸತೀಶ್‌ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಉಮೇಶ ಕತ್ತಿ ಗೆಲುವು ಸಾಧಿಸಿದ್ದಾರೆ. ಆದರೆ ಮಾಜಿ ಸಚಿವರಾದ ಎ.ಬಿ.ಪಾಟೀಲ, ಲಕ್ಷ ್ಮಣ ಸವದಿ ಹಾಗೂ ಡಿ.ಬಿ.ಇನಾಮದಾರ ಸೋಲನುಭವಿಸಿದ್ದಾರೆ.

ಜತೆಗೆ ಹಾಲಿ ಶಾಸಕರಾದ ಡಾ. ವಿಶ್ವನಾಥ ಪಾಟೀಲ, ರಾಜು ಕಾಗೆ, ಸಂಜಯ ಪಾಟೀಲ, ಅರವಿಂದ ಪಾಟೀಲ, ಸಂಭಾಜಿ ಪಾಟೀಲ, ಅಶೋಕ ಪಟ್ಟಣ, ಫಿರೋಜ್‌ ಸೇಠ್‌ ಸಹ ಪರಾಭವಗೊಂಡಿದ್ದಾರೆ.

ಎ.ಬಿ.ಪಾಟೀಲ ಬಲಾಢ್ಯ ಕತ್ತಿ ಎದುರು ಪರಾಭವಗೊಂಡರೆ, ಟಿಕೆಟ್‌ ಪಡೆಯುವಲ್ಲೇ ಹರಸಾಹಸ ಮಾಡಿದ್ದ ಇನಾಮದಾರ ಅಳಿಯನ ಬಂಡಾಯಕ್ಕೆ ಬಲಿಯಾಗಿದ್ದಾರೆ. ಆದರೆ ಕಿತ್ತೂರು ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಬಲ ಬಂಡಾಯವಿದ್ದರೂ ಅದರ ಬಿಸಿ ಪಕ್ಷ ಕ್ಕೆ ತಟ್ಟಲಿಲ್ಲ.

ಲಕ್ಷ ್ಮಣ ಸವದಿ, ರಾಜು ಕಾಗೆ ಮತ್ತು ವಿಶ್ವನಾಥ ಪಾಟೀಲ ಅತಿಯಾದ ಆತ್ಮವಿಶ್ವಾಸದಿಂದ ಸೋತಿದ್ದಾರೆ. ಸಂಜಯ ಪಾಟೀಲ ಕಾಂಗ್ರೆಸ್‌ ಭಿನ್ನಮತವೇ ತಮ್ಮನ್ನು ಗೆಲ್ಲಿಸುತ್ತದೆ ಎಂದು ನಂಬಿಕೊಂಡಿದ್ದರಿಂದ ಹೀನಾಯ ಸೋಲನುಭವಿಸಬೇಕಾಯಿತು.

ಅರವಿಂದ ಪಾಟೀಲ ಅವರಿಗೆ ಎಂಇಎಸ್‌ನ ಅಧಿಕೃತ ಟಿಕೆಟ್‌ ಸಿಕ್ಕಿರಲಿಲ್ಲ. ಅಲ್ಲದೆ ಎಂಇಎಸ್‌ನೊಳಗಿನ ಭಿನ್ನಾಭಿಪ್ರಾಯವೂ ಅವರನ್ನು ಮುಳುಗಿಸಿತು. ಸಂಭಾಜಿ ಪಾಟೀಲ ಚುನಾವಣೆಗೆ ಮುನ್ನವೇ ನಿವೃತ್ತಿ ಘೋಷಿಸಿದ್ದರು.

ಹೊಸಮುಖಗಳು: ಈ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 6 ಜನ ಹೊಸಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮಿ ಹೆಬ್ಬಾಳಕರ್‌, ಖಾನಾಪುರದಿಂದ ಅಂಜಲಿ ನಿಂಬಾಳಕರ್‌, ಕಿತ್ತೂರಿನಿಂದ ಮಹಾಂತೇಶ ದೊಡ್ಡಗೌಡರ್‌, ಅಥಣಿಯಿಂದ ಮಹೇಶ ಕುಮಠಳ್ಳಿ, ಕಾಗವಾಡದಿಂದ ಶ್ರೀಮಂತ ಪಾಟೀಲ, ಬೆಳಗಾವಿ ಉತ್ತರದಿಂದ ಅನಿಲ ಬೆನಕೆ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ