ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿಜೂಜಾಟ ಆಡುತ್ತಿದ್ದ ಅಡ್ಡೆಯ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿದ ನಗರ ಪೊಲೀಸರು 9 ಜನರನ್ನು ಬಂಧಿಸಿ ಅವರಿಂದ 6,210 ರೂ.ನಗದು ಸೇರಿದಂತೆ ಇನ್ನಿತರ ಸಾಮಗ್ರಿಗಳ ವಶಪಡಿಸಿಕೊಂಡಿದ್ದಾರೆ. ವಡಗಾವಿ ಲಕ್ಷ್ಮಿ ನಗರದ ಅನಿಲ ಶಾಂತಾರಾಮ ವರುಡೆ (34), ವಿಜಯ ಗೋಪಾಲ ತಾವರಿ (45), ಆನಂದ ಸದಾನಂದ ಚಿಲ್ಲಾಳ (33), ಮಯೂರ ನಾರಾಯಣ ಕಾಮಕರ (43), ವಿಜಯ ನಾಗಪ್ಪ ಕಾರಗಿ (45), ಅಶೋಕ ಸಹದೇವ ಬಾಬರಿ(36) ಆನಂದ ನಗರದ ರಾಘವೇಂದ್ರ ಗಜಾನನ ಢವಳಿ (39), ಶಹಪುರದ ರಾಹುಲ ನಾರಾಯಣ ಕಾಮಕರ (44) ಹಾಗೂ ಖಾನಾಪುರ ತಾಲೂಕಿನ ಹಿರೇಮುನವಳ್ಳಿ ಗ್ರಾಮದ ವಿಠಲ ರುದ್ರಪ್ಪ ಮಕಾಟಿ (34) ಬಂಧಿತರು. ಹಲಗಾ ಗ್ರಾಮ ವ್ಯಾಪ್ತಿಯ ಕಲ್ಲಿನ ಕ್ವಾರಿ ಹತ್ತಿರದ ಜಾಲಿ ಗಿಡದ ಮರೆಯಲ್ಲಿಆರೋಪಿತರು ಜೂಜಾಟ ಆಡುತ್ತಿದ್ದರು. ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.
ಜೂಜಾಟದಲ್ಲಿತೊಗಡಿದ್ದ 9 ಜನರ ಬಂಧನ
ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿಜೂಜಾಟ ಆಡುತ್ತಿದ್ದ ...
Vijaya Karnataka 26 Nov 2019, 5:00 am