ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಮಲಪ್ರಭಾ ನದಿ ಮಧ್ಯ ನೀರಿನಲ್ಲಿ ಭಾನುವಾರ ಸಂಜೆ ಬೈಕ್ ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 4ರ ಹಳೇ ಸೇತುವೆಯ ನೀರು ತಡೆ ಗೇಟ್ ಹತ್ತಿರ ನದಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ಸಾರ್ವಜನಿಕರಿಗೆ ಹೀರೋ ಸ್ಲೆಂಡರ್ ಪ್ಲಸ್ ಬೈಕ್ ಕಾಣಿಸಿಕೊಂಡಿದೆ. ಸೋಮವಾರ ಬೆಳಗ್ಗೆ ಹಿರೇಬಾಗೇವಾಡಿ ರಾಷ್ಟ್ರೀಯ ಹೆದ್ದಾರಿ 4ರ ಸಿಬ್ಬಂದಿ ರಮೇಶ ಗುರವ, ಶಿವಾನಂದ ನಾವಲಗಿ, ಭೀಮಾ ಪಾರಿಶ್ವಾಡ, ರಾಜೇಂದ್ರ, ವಿಜಯ ಅವರು ಕ್ರೇನ್ ಮೂಲಕ ನದಿಯಲ್ಲಿನ ಬೈಕ್ ಮೇಲೆತ್ತಿದ್ದರು. ಈ ವೇಳೆ ಪಟ್ಟಣದ ಉಪಠಾಣೆ ಎಎಸ್ಐ ಡಿ.ಬಿ. ಈಟಿ, ಎಸ್.ಎಸ್. ಕಾಜಗಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತನಿಖೆ ಮುಂದುವರಿಸಿದ್ದಾರೆ.
ಮಲಪ್ರಭಾ ನದಿಯಲ್ಲಿ ಬೈಕ್ ಪತ್ತೆ
ಪಟ್ಟಣದ ಮಲಪ್ರಭಾ ನದಿ ಮಧ್ಯ ನೀರಿನಲ್ಲಿ ಭಾನುವಾರ ಸಂಜೆ ಬೈಕ್ ಪತ್ತೆಯಾಗಿದೆ...
Vijaya Karnataka 12 Feb 2019, 5:00 am