ಆ್ಯಪ್ನಗರ

ಅಮಟೂರಿನ ರೈತ ಆತ್ಮಹತ್ಯೆ

ತಾಲೂಕಿನ ಅಮಟೂರ ಗ್ರಾಮದ ರೈತರೊಬ್ಬರು ಸೋಮವಾರ ನೇಣು ಹಾಕಿಕೊಂಡು ...

Vijaya Karnataka 24 Sep 2019, 5:00 am
ಬೈಲಹೊಂಗಲ: ತಾಲೂಕಿನ ಅಮಟೂರ ಗ್ರಾಮದ ರೈತರೊಬ್ಬರು ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web 23HTP8   MAHANTESH SANGAPPANAVR 1_53


ಮಹಾಂತೇಶ ಶಂಕರೆಪ್ಪ ಸಂಗಪ್ಪನವರ (41) ಆತ್ಮಹತ್ಯೆ ಮಾಡಿಕೊಂಡ ರೈತ. ಹತ್ತು ಎಕರೆ ಜಮೀನು ಹೊಂದಿರುವ ಮಹಾಂತೇಶ ಸೋಯಾಬೀನ್‌, ಹೆಸರು ಬಿತ್ತನೆ ಮಾಡಿದ್ದರು. ಅತಿಯಾದ ಮಳೆಯಿಂದ ಬೆಳೆ ಹಾನಿಯಾಗಿತ್ತು. ಇದರಿಂದ ಅವರು ನೊಂದಿದ್ದರು ಎನ್ನಲಾಗಿದೆ. ಸಾಲಮನ್ನಾ ಹಣ ಬಾರದ್ದರಿಂದ, ಕಳೆದ ವರ್ಷ 9 ಲಕ್ಷ ರೂ. ಸಾಲ ತೀರಿಸಲು ಎರಡು ಎಕರೆ ಹೊಲ ಮಾರಾಟ ಮಾಡಿದ್ದರು. ಅಮಟೂರ ಪಿಕೆಪಿಎಸ್‌ನಲ್ಲಿ2 ಲಕ್ಷ ರೂ. ಸೇರಿದಂತೆ ಒಟ್ಟು 2.50 ಲಕ್ಷ ರೂ. ಸಾಲ ಮಾಡಿದ್ದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ