ಆ್ಯಪ್ನಗರ

ಮಲಗಿದ್ದ ಮಗನ ಕತ್ತು ಕೊಯ್ದು ಕೊಂದ ತಂದೆ!

ಚಿಕ್ಕೋಡಿ: ತಾಲೂಕಿನ ಕೇರೂರ ಗ್ರಾಮದಲ್ಲಿ ಆಸ್ತಿ ವಿವಾದ ...

Vijaya Karnataka 16 Feb 2020, 5:00 am
ಚಿಕ್ಕೋಡಿ: ತಾಲೂಕಿನ ಕೇರೂರ ಗ್ರಾಮದಲ್ಲಿಆಸ್ತಿ ವಿವಾದ ಹಾಗೂ ಹಣ ನೀಡದ ಕಾರಣಕ್ಕೆ ಬೇಸತ್ತು ತಂದೆಯೇ ಶನಿವಾರ ಮಗನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
Vijaya Karnataka Web 15CKD3_53
ಸಿದ್ಧಪ್ಪ ನಿಡಗುಂದಿ


ಗ್ರಾಮದ ಯಮನಪ್ಪ ಸಿದ್ಧಪ್ಪ ನಿಡಗುಂದಿ (39) ಮೃತ ಪುತ್ರ. ಈತನ ತಂದೆ ಸಿದ್ಧಪ್ಪ ನಿಡಗುಂದಿ ಕಬ್ಬು ಕಟಾವು ಮಾಡುವ ಆಯುಧದಿಂದ ಮಗನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಆಸ್ತಿಗಾಗಿ ಗಲಾಟೆ ಹಾಗೂ ಹಣದ ವಿಚಾರವಾಗಿ ಇಬ್ಬರಲ್ಲೂವೈಮನಸ್ಸಿತ್ತು. ಈ ಕಾರಣಕ್ಕೆ ಜಗಳ ನಡೆದಿತ್ತು. ಇದರಿಂದ ಬೇಸತ್ತ ತಂದೆ ಸಿದ್ಧಪ್ಪ ರಾತ್ರಿ ಮಲಗಿದ್ದ ಮಗನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಸ್ಥಳ ಪರಿಶೀಲನೆ ನಡೆಸಿರುವ ಅಂಕಲಿ ಪೊಲೀಸರು ತಿಳಿಸಿದ್ದಾರೆ.

ಅಂಕಲಿ ಪೋಲಿಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ