ಚಿಕ್ಕೋಡಿ: ತಾಲೂಕಿನ ಕೇರೂರ ಗ್ರಾಮದಲ್ಲಿಆಸ್ತಿ ವಿವಾದ ಹಾಗೂ ಹಣ ನೀಡದ ಕಾರಣಕ್ಕೆ ಬೇಸತ್ತು ತಂದೆಯೇ ಶನಿವಾರ ಮಗನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಗ್ರಾಮದ ಯಮನಪ್ಪ ಸಿದ್ಧಪ್ಪ ನಿಡಗುಂದಿ (39) ಮೃತ ಪುತ್ರ. ಈತನ ತಂದೆ ಸಿದ್ಧಪ್ಪ ನಿಡಗುಂದಿ ಕಬ್ಬು ಕಟಾವು ಮಾಡುವ ಆಯುಧದಿಂದ ಮಗನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಆಸ್ತಿಗಾಗಿ ಗಲಾಟೆ ಹಾಗೂ ಹಣದ ವಿಚಾರವಾಗಿ ಇಬ್ಬರಲ್ಲೂವೈಮನಸ್ಸಿತ್ತು. ಈ ಕಾರಣಕ್ಕೆ ಜಗಳ ನಡೆದಿತ್ತು. ಇದರಿಂದ ಬೇಸತ್ತ ತಂದೆ ಸಿದ್ಧಪ್ಪ ರಾತ್ರಿ ಮಲಗಿದ್ದ ಮಗನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಸ್ಥಳ ಪರಿಶೀಲನೆ ನಡೆಸಿರುವ ಅಂಕಲಿ ಪೊಲೀಸರು ತಿಳಿಸಿದ್ದಾರೆ.
ಅಂಕಲಿ ಪೋಲಿಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಗ್ರಾಮದ ಯಮನಪ್ಪ ಸಿದ್ಧಪ್ಪ ನಿಡಗುಂದಿ (39) ಮೃತ ಪುತ್ರ. ಈತನ ತಂದೆ ಸಿದ್ಧಪ್ಪ ನಿಡಗುಂದಿ ಕಬ್ಬು ಕಟಾವು ಮಾಡುವ ಆಯುಧದಿಂದ ಮಗನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಆಸ್ತಿಗಾಗಿ ಗಲಾಟೆ ಹಾಗೂ ಹಣದ ವಿಚಾರವಾಗಿ ಇಬ್ಬರಲ್ಲೂವೈಮನಸ್ಸಿತ್ತು. ಈ ಕಾರಣಕ್ಕೆ ಜಗಳ ನಡೆದಿತ್ತು. ಇದರಿಂದ ಬೇಸತ್ತ ತಂದೆ ಸಿದ್ಧಪ್ಪ ರಾತ್ರಿ ಮಲಗಿದ್ದ ಮಗನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಸ್ಥಳ ಪರಿಶೀಲನೆ ನಡೆಸಿರುವ ಅಂಕಲಿ ಪೊಲೀಸರು ತಿಳಿಸಿದ್ದಾರೆ.
ಅಂಕಲಿ ಪೋಲಿಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.