ಆ್ಯಪ್ನಗರ

ಆಗಸದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ಸಿಡಿಮದ್ದು ಪ್ರದರ್ಶನ

ಬೆಳಗಾವಿ: ಶಾಸಕ ಅಭಯ ಪಾಟೀಲ ಆಯೋಜಿಸಿದ್ದ 9ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಕೊನೆಯ ದಿನವಾದ ಶುಕ್ರವಾರ ...

Vijaya Karnataka 26 Jan 2019, 5:00 am
ಬೆಳಗಾವಿ : ಶಾಸಕ ಅಭಯ ಪಾಟೀಲ ಆಯೋಜಿಸಿದ್ದ 9ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಕೊನೆಯ ದಿನವಾದ ಶುಕ್ರವಾರ ರಾತ್ರಿ ಇಲ್ಲಿನ ಮಾಲಿನಿ ಸಿಟಿ ಮೈದಾನದಲ್ಲಿ ನಡೆದ ಅಬ್ಬರದ ಸಿಡಿಮದ್ದಿನ ಪ್ರದರ್ಶನ ವಿಸ್ಮಯ ಲೋಕದ ನಿರ್ಮಾಣ ಮಾಡಿತ್ತು.
Vijaya Karnataka Web a fireworks display with colored lace in the sky
ಆಗಸದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ಸಿಡಿಮದ್ದು ಪ್ರದರ್ಶನ


ಆಕಾಶಕ್ಕೆ ಹಾರಿ ವರ್ಣಮಯವಾಗಿ ಸಿಡಿದ ಎಲ್ಲ ಸಿಡಿಮದ್ದುಗಳು ಒಂದೊಂದು ಅದ್ಭುತದ ದರ್ಶನ ಮಾಡಿದವು. ಮೋರ್‌ ಸಿಡಿಮದ್ದು ನವಿಲಿನ ಆಕೃತಿ ಸೃಷ್ಟಿಸಿದರೆ, ಸುದರ್ಶನ ಚಕ್ರ ಯುದ್ದೋತ್ಸಾಹ ತೋರಿತು. ರೈಜಿಂಗ್‌ ಸನ್‌ ರಾತ್ರಿಯಲ್ಲಿ ಸೂರ್ಯೋದಯ ನೆನಪಿಸಿತು. ಸ್ಟಾರ್‌ವ್ಹೀಲ್‌ ನಕ್ಷತ್ರ ಲೋಕದ ನಿರ್ಮಾಣ ಮಾಡಿತ್ತು. ಕಲರ್‌ಪಂಚಮುಖಿ, ನಮಾಮಿಚಕ್ರ ಸೇರಿದಂತೆ ಇತರೆ ಸಿಡಿಮದ್ದು, ಪಟಾಕಿಗಳು ಕಿವಿಗಡಚಿಕ್ಕುವ ಸದ್ದು ಮಾಡಿದರೂ, ನೋಡುಗರ ಮನಸ್ಸಿಗೆ ಮುದ ನೀಡಿದವು. 30 ನಿಮಿಷಕ್ಕೂ ಹೆಚ್ಚು ಕಾಲ ಈ ಕಾರ್ಯಕ್ರಮ ಜರುಗಿತು. ಅಶೋಕ ನಾಯಿಕ ಈ ಸಿಡಿಮದ್ದಿನ ನಿರ್ವಹಣೆ ಮಾಡಿದರು.

ಇದಕ್ಕೂ ಮೊದಲು ಯುವತಿಯರ ಆಕರ್ಷಕ ಫ್ಯಾಶನ್‌ ಶೋ ಹಾಗೂ ಅಭಯ ಪಾಟೀಲರು ನಡೆಸಿದ್ದ ಡ್ರಾಯಿಂಗ್‌ ಸೇರಿದಂತೆ ನಾನಾ ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ವಿಜೇತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು, ಸ್ಮರಣಿಕೆ ಹಾಗೂ ಇತರೆ ಸಾಧನ ಸಲಕರಣೆಗಳನ್ನು ಬಹುಮಾನವಾಗಿ ನೀಡಿ ಸತ್ಕರಿಸಲಾಯಿತು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕ ಅನಿಲ ಬೆನಕೆ, ಉದ್ಯಮಿ ಶಿವಕಾಂತ ಸಿದ್ನಾಳ, ರಾಜಶ್ರೀ ದೇಸಾಯಿ, ಡಾ. ದಿಪ್ತಿ ಶೆಟ್ಟಿ, ಡಾ. ಸುಷ್ಮಾ ಪಾಟನೇಕರ್‌ ಹಾಗೂ ಇತರೆ ಗಣ್ಯರು ಇದಕ್ಕೆ ಸಾಕ್ಷಿಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ