ಆ್ಯಪ್ನಗರ

ಸಾಂಸ್ಕೃತಿಕ ರಸದೌತಣ ಉಣಬಡಿಸಿದ ಜನಪದ ಜಾತ್ರೆ

ತೆಲಸಂಗ: ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಶನಿವಾರ ...

Vijaya Karnataka 8 Sep 2019, 5:00 am
ತೆಲಸಂಗ: ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿಶನಿವಾರ ರಾತ್ರಿ ಆಯೋಜಿಸಲಾಗಿದ್ದ ಜನಪದ ಜಾತ್ರೆ ಕಾರ್ಯಕ್ರಮದಲ್ಲಿನಾನಾ ಕಲಾವಿದರು ಪ್ರೇಕ್ಷಕರಿಗೆ ಸಾಂಸ್ಕೃತಿಕ ರಸದೌತಣ ಉಣಬಡಿಸಿದರು.
Vijaya Karnataka Web a folk fair celebrated by a cultural dessert
ಸಾಂಸ್ಕೃತಿಕ ರಸದೌತಣ ಉಣಬಡಿಸಿದ ಜನಪದ ಜಾತ್ರೆ


ನಾಗರಹಾವು ಭಾಗ 2 ಖ್ಯಾತಿಯ ಜೂ. ವಿಷ್ಣುವರ್ಧನ್‌ ರವಿ ಕೋರೆಯವರ ಮಿಮಿಕ್ರಿ, ಪ್ರಶಾಂತ ಚೌದರಿಯವರ ಹಾಸ್ಯ ಚಟಾಕಿ, ಕಿರುತೆರೆ ನಟಿ ಪಲ್ಲವಿ ಬಳ್ಳಾರಿ ಅವರ ನೃತ್ಯ, ಖ್ಯಾತ ಜಾನಪದ ಗಾಯಕಿ ಜ್ಯೋತಿ ಗುಳೇದಗುಡ್ಡರ ಗಾಯನದ ಮೂಲಕ ಜನಪದ ಜಾತ್ರೆಯು ನೆರೆದ ಜನರನ್ನು ಸಾಂಸ್ಕೃತಿಕ ಲೋಕದಲ್ಲಿವಿಹಾರ ಮಾಡಿಸಿತು.

ಹಾಸ್ಯ ಮಾತುಗಾರ ಪ್ರಶಾಂತ ಚೌದರಿಯವರ ನಗಿಸಿದ ಮಾತುಗಳು ಹಳೆಯವಾಗಿದ್ದರೂ ಅಭಿನಯದ ಮೂಲಕ ಅವುಗಳಿಗೆ ಭಾವತುಂಬಿದ ರೀತಿ ಹೊಸತನ ಮೂಡಿಸಿತು. ಡಾ. ವಿಷ್ಣುವರ್ಧನ್‌ ಅವರ ಹಾವ-ಭಾವ, ಮಾತುಗಳನ್ನೇ ಅನುಕರಿಸಿ ಮಾತನಾಡಿದ ಜೂ. ವಿಷ್ಣುವರ್ಧನ್‌ ರವಿ ಕೋರೆ ಅವರು ಪ್ರೇಕ್ಷಕರಿಗೆ ವಿಷ್ಣುವರ್ಧನ್‌ ಅವರನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವಂತೆ ಮಾಡಿದರು. ಬೆಡಗು ಬಿನ್ನಾಣಗಳೊಂದಿಗೆ ವೇದಿಕೆಗೆ ಆಗಮಿಸಿದ ಕಿರುತೆರೆ ನಟಿ ಪಲ್ಲವಿ ಬಳ್ಳಾರಿ ಶಿಶುನಾಳ ಶರೀಫರ ಹಾಡೊಂದಕ್ಕೆ ಹೆಜ್ಜೆ ಹಾಕಿ ಪ್ರೇಕ್ಷಕರ ಮನಗೆಲ್ಲುವಲ್ಲಿಯಶಸ್ವಿಯಾದರು. ಕಂಚಿನ ಕಂಠದ ಜಾನಪದ ಗಾಯಕಿ ಜ್ಯೋತಿ ಗುಳೇದಗುಡ್ಡ ಅವರ ಹಾಡಿಗೆ ಪ್ರೇಕ್ಷಕರ ತಲೆದೂಗಿ ಪ್ರಶಂಸೆ ವ್ಯಕಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ