ಆ್ಯಪ್ನಗರ

ಕೆಲಸ ಹಿಡಿಸದ ಕಾರಣ ಸ್ನೇಹಿತನನ್ನೇ ಕೊಂದ!

ಪಣಜಿ: ಸ್ನೇಹಿತನು ತನಗೆ ಕೊಡಿಸಿದ ಕೆಲಸ ಹಿಡಿಸಿಲ್ಲಎಂಬ ಕಾರಣಕ್ಕೆ ...

Vijaya Karnataka 21 Oct 2019, 5:00 am
ಪಣಜಿ: ಸ್ನೇಹಿತನು ತನಗೆ ಕೊಡಿಸಿದ ಕೆಲಸ ಹಿಡಿಸಿಲ್ಲ ಎಂಬ ಕಾರಣಕ್ಕೆ ಆ ಸ್ನೇಹಿತನನ್ನೇ ವ್ಯಕ್ತಿಯೊಬ್ಬ ಕೊಲೆಗೈದ ಘಟನೆ ಗೋವಾ ಬಿಚೋಲಿ ಸಮೀಪದ ನಾನೋಡಾದಲ್ಲಿನಡೆದಿದೆ.
Vijaya Karnataka Web a friend killed for a work which is not interesting
ಕೆಲಸ ಹಿಡಿಸದ ಕಾರಣ ಸ್ನೇಹಿತನನ್ನೇ ಕೊಂದ!


ಕರ್ನಾಟಕದ ವಿಜಯಪುರ ಜಿಲ್ಲೆಸಿಂಧಗಿ ಮೂಲದ ಶಬ್ಬೀರ್‌ ಇಮಾಮಸಾಬ್‌ ಬೈಕಟಿ ಕೊಲೆಯಾದ ವ್ಯಕ್ತಿ. ವಿಜಯಪುರ ಮೂಲದ ಈರಣ್ಣ ಗೌಡ ಆರೋಪಿ.

ಈರಣ್ಣ ನಾಲ್ಕು ದಿನಗಳ ಹಿಂದೆ ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ಶಬ್ಬೀರ್‌ನೊಂದಿಗೆ ಚರ್ಚೆ ನಡೆಸಿದ್ದ. ಶಬ್ಬೀರ್‌, ಈರಣ್ಣನನ್ನು ಕರೆಸಿಕೊಂಡು ಕೆಲಸ ಕೊಡಿಸಿದ್ದ. ಇಬ್ಬರೂ ಒಟ್ಟಿಗೆ ವಾಸ್ತವ್ಯ ಹೂಡಿದ್ದರು. ಆದರೆ ಆ ಕೆಲಸ ಈರಣ್ಣನಿಗೆ ಹಿಡಿಸಿರಲಿಲ್ಲ. ಈ ವಿಚಾರವಾಗಿ ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ ಈರಣ್ಣ, ಶಬ್ಬೀರನ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.

ಘಟನೆ ನಂತರ ಆರೋಪಿ ಈರಣ್ಣ ವಿಜಯಪುರಕ್ಕೆ ಪಲಾಯನಗೈಯಲು ತಯಾರಿ ನಡೆಸಿದ್ದ. ಅಷ್ಟರಲ್ಲೇ ಕೊಲೆಯ ಮಾಹಿತಿ ಪಡೆದ ಬಿಚೋಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ