ಆ್ಯಪ್ನಗರ

ವಿಜೃಂಭಣೆಯ ಮಹಾದೇವ ರಥೋತ್ಸವ

ನಿಪ್ಪಾಣಿ : ಮಹಾಶಿವರಾತ್ರಿ ಅಂಗವಾಗಿ ಸ್ಥಳೀಯ ಮಹಾದೇವ ಮಂದಿರದ ರಥೋತ್ಸವ ಗುರುವಾರ ಸಂಜೆ ಅಪಾರ ಭಕ್ತರ ಹರ ಹರ ಮಹಾದೇವ ...

Vijaya Karnataka 8 Mar 2019, 5:00 am
ನಿಪ್ಪಾಣಿ : ಮಹಾಶಿವರಾತ್ರಿ ಅಂಗವಾಗಿ ಸ್ಥಳೀಯ ಮಹಾದೇವ ಮಂದಿರದ ರಥೋತ್ಸವ ಗುರುವಾರ ಸಂಜೆ ಅಪಾರ ಭಕ್ತರ ಹರ ಹರ ಮಹಾದೇವ ಜಯಘೋಷದೊಂದಿಗೆ ವಿಜೃಂಭಣೆಯಿಂದ ಜರುಗಿತು.
Vijaya Karnataka Web BEL-7NPN1


ಮಂದಿರದ ಎದುರು ಭವ್ಯ ರಥಕ್ಕೆ ಶ್ರೀಮಂತ ದಾದಾರಾಜೆ ನಿಪ್ಪಾಣಿಕರ ಸರಕಾರ ಹಾಗೂ ಬಸವರಾಜ ಚಂದ್ರಕುಡೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ರಥೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು. ಬಾಳೆ, ತೆಂಗಿನ ಗರಿಗಳು, ತೆಂಗು ಮತ್ತು ಪುಷ್ಪಾಲಂಕೃತಗೊಂಡ 25 ಅಡಿ ಎತ್ತರದ ರಥ ಕಂಗೊಳಿಸುತ್ತಿತ್ತು. ಭಕ್ತ ಸಮೂಹ ಶಿವನ ನಾಮಸ್ಮರಣೆ ಮಾಡುತ್ತ ರಥ ಎಳೆದರು. ಹೂ-ಹಣ್ಣು, ಉತ್ತತ್ತಿ ಎಸೆದು ಭಕ್ತಿಭಾವ ಮೆರೆದರು. 20 ಲಕ್ಷ ರೂ. ವೆಚ್ಚದಲ್ಲಿ 42 ಕೆಜಿ ಬೆಳ್ಳಿಯಲ್ಲಿ ನಿರ್ಮಿಸಲಾದ ಪಲ್ಲಕ್ಕಿ ವಿಶೇಷ ಮೆರುಗು ತಂದಿತ್ತು.

ಮಹಾದೇವ ಮಂದಿರ, ಗಾಂಧಿ ಚೌಕ, ಕೋಠಿವಾಲೆ ಕಾರ್ನರ್‌, ದಲಾಲ ಪೇಟ, ಬಸವೇಶ್ವರ ಚೌಕ ಪೊಲೀಸ್‌ ಠಾಣೆ ಮಾರ್ಗವಾಗಿ ರಥೋತ್ಸವ ಮೆರವಣಿಗೆ ಸಾಗಿತು. ಬ್ಯಾಂಡ್‌, ಕರಡಿ ಡೋಲುಗಳು, ಆನೆ, ಕುದುರೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಜನಾಕರ್ಷಣೆ ಕೇಂದ್ರವಾಗಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ