ಆ್ಯಪ್ನಗರ

ಶ್ರೀಶೈಲದಿಂದ ಮರಳಿದ ಪಾದಯಾತ್ರಿಗಳಿಗೆ ಅದ್ಧೂರಿ ಸ್ವಾಗತ

ತೆಲಸಂಗ: ಗ್ರಾಮದಿಂದ ಪಾದಯಾತ್ರೆ ಮೂಲಕ ಮಲ್ಲಿಕಾರ್ಜುನ ದೇವರ ಕಂಬಿ ಹೊತ್ತು ಆಂಧ್ರದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳಿದ್ದ ಭಕ್ತಾದಿಗಳು ಸೋಮವಾರ ...

Vijaya Karnataka 23 Apr 2019, 5:00 am
ತೆಲಸಂಗ : ಗ್ರಾಮದಿಂದ ಪಾದಯಾತ್ರೆ ಮೂಲಕ ಮಲ್ಲಿಕಾರ್ಜುನ ದೇವರ ಕಂಬಿ ಹೊತ್ತು ಆಂಧ್ರದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳಿದ್ದ ಭಕ್ತಾದಿಗಳು ಸೋಮವಾರ ಮರಳಿ ಗ್ರಾಮ ಪ್ರವೇಶಿಸುತ್ತಿದ್ದಂತೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.
Vijaya Karnataka Web BEL-22TELSANG1


ಭಾನುವಾರ ರಾತ್ರಿಯೇ ಗ್ರಾಮದ ಹೊರವಲಯದಲ್ಲಿರುವ ಬನದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ತಂಗಿದ್ದ ಯಾತ್ರಾರ್ಥಿಗಳು ಬೆಳಗ್ಗೆ ಮೆರವಣಿಗೆ ಮೂಲಕ ಗ್ರಾಮ ಪ್ರವೇಶಿಸಿದರು.

ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಗ್ರಾಮದ ಶರಣರಬಾವಿ ಹಿರೇಮಠದ ತೋಟದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಉರಿ ಬಿಸಿಲನ್ನು ಲೆಕ್ಕಿಸದೆ ಗ್ರಾಮದ ಭಕ್ತರು ತಂಡೋಪತಂಡವಾಗಿ ಆಗಮಿಸಿ ಕಂಬಿ ಮಲ್ಲಯ್ಯನ ದರ್ಶನ ಪಡೆದರು.

ಸಂಜೆ ಶರಣಬಾವಿ ತೋಟದಿಂದ ಗ್ರಾಮದಲ್ಲಿನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಲಾಯಿತು. ಈ ವೇಳೆ ದಿವಿಟಗಿ ಸೇವೆ ಮಾಡಿದ ವಿಜಯ ಪತ್ತಾರ, ಮಲ್ಲಯ್ಯಾ ಮಠಪತಿ, ಶ್ರೀಶೈಲ ಮಠಪತಿ, ರವಿ ಮಠಪತಿ, ರವಿ ರೋಡಗಿ, ಶೇಖರ ರೋಡಗಿ, ಗಂಗಪ್ಪ ಪತ್ತಾರ, ಮಲ್ಲಪ್ಪ ಅರ್ಜುನಗಿ, ಸುಭಾಷ ಖೊಬ್ರಿ, ಮಾಲಪ್ಪ ಟೋಪಾನಗೋಳ, ಸಂಜಯ ಹುಜರೆ, ಕಾಸಪ್ಪ ಹಳ್ಳದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ