ಆ್ಯಪ್ನಗರ

ಪತ್ನಿಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಪತಿ

ಘಟಪ್ರಭಾ: ಹುಣಶ್ಯಾಳ ಪಿಜಿ ಗ್ರಾಮದಲ್ಲಿವ್ಯಕ್ತಿಯೊಬ್ಬ ಶನಿವಾರ ಸಂಜೆ ...

Vijaya Karnataka 8 Sep 2019, 5:00 am
ಘಟಪ್ರಭಾ: ಹುಣಶ್ಯಾಳ ಪಿಜಿ ಗ್ರಾಮದಲ್ಲಿವ್ಯಕ್ತಿಯೊಬ್ಬ ಶನಿವಾರ ಸಂಜೆ ತನ್ನ ಪತ್ನಿಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಬಳಿಕ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿದ್ದಾನೆ. ಶ್ರೀಕಾಂತ ಕಟಕಟ್ಟಿ ಕೊಲೆ ಮಾಡಿ ಆರೋಪಿ. ಐಲಕ್ಕಾ ಶ್ರೀಕಾಂತ ಕಟಕಟ್ಟಿ (35) ಕೊಲೆಯಾದ ಮಹಿಳೆ.
Vijaya Karnataka Web a husband who murdered his wife and surrendered to police
ಪತ್ನಿಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಪತಿ


ಆರೋಪಿ, ಪತಿ ಶ್ರೀಕಾಂತನ ಜತೆ ಹೊಲದಲ್ಲಿಕೆಲಸ ಮಾಡುತ್ತಿದ್ದಾಗ ಮನೆಯಲ್ಲಿನ ಕ್ಷುಲ್ಲಕ ಕಾರಣಕ್ಕೆ ಪತ್ನಿ ಐಲಕ್ಕಾ ಜತೆ ಜಗಳ ನಡೆದಿದೆ. ಈ ವೇಳೆ ಆರೋಪಿಯು ಕಲ್ಲಿನಿಂದ ತನ್ನ ಪತ್ನಿಯ ತಲೆಗೆ ಹೊಡೆದಿದ್ದರಿಂದ ಐಲಕ್ಕಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ಘಟಪ್ರಭಾ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬಡಗಿವಾಡ ಗಲಭೆ: ಮತ್ತೆ 9 ಜನರ ಬಂಧನ
ಘಟಪ್ರಭಾ: ಗೋಕಾಕ ತಾಲೂಕಿನ ಬಡಗಿವಾಡ ಗ್ರಾಮದಲ್ಲಿಮಂಗಳವಾರ ಶ್ರೀ ಲಕ್ಷಿತ್ರ್ಮದೇವಿಯ ಹಸರಹಬ್ಬ ಜಾತ್ರಾ ಮಹೋತ್ಸವದಲ್ಲಿನಡೆದ ಗುಂಪು ಗಲಭೆ ಹಾಗೂ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟಪ್ರಭಾ ಪೊಲೀಸರು ಶನಿವಾರ ಮತ್ತೆ 9 ಜನರನ್ನು ಬಂಧಿಸಿ ಬೆಳಗಾವಿಯ ಹಿಂಡಲಗಾ ಕಾರಗೃಹಕ್ಕೆ ಕಳುಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬಂಧಿತರಾದವರ ಸಂಖ್ಯೆ ಈಗ 21ಕ್ಕೇರಿದ್ದು, ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ