ಬೆಳಗಾವಿ: ಕೇಂದ್ರದ ಮಧ್ಯಂತರ ಬಜೆಟ್ಗೆ ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಡಳಿತ ಪಕ್ಷದವರು ಸ್ವತಂತ್ರ ಭಾರತದಲ್ಲೇ ಇಂಥ ಬಜೆಟ್ ಮಂಡನೆಯಾಗಿಲ್ಲ ಎಂದು ಎದೆಯುಬ್ಬಿಸಿಕೊಂಡು ಹೇಳಿದರೆ, ವಿರೋಧಿಗಳು ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮೂಗಿಗೆ ತುಪ್ಪ ಹಚ್ಚಿರುವ ಆಯವ್ಯಯ ಎಂದು ಜರೆದಿದ್ದಾರೆ. ಇದರ ನಡುವೆಯೂ ಹೂಡಿಕೆ ಕ್ಷೇತ್ರಗಳಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತ, ಕಾರ್ಮಿಕ, ನೌಕರ ವರ್ಗದವರ ಹಿತರಕ್ಷಣೆಯತ್ತ ಕೇಂದ್ರ ಒಲವು ತೋರಿಸಿರುವುದೂ ಶ್ಲಾಘನೆಗೆ ಒಳಗಾಗಿದೆ. ಒಟ್ಟಾರೆ, ಜಿಲ್ಲೆಯ ಗಣ್ಯರು ಹಾಗೂ ಜನಸಾಮಾನ್ಯರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಇಲ್ಲಿ ಕೊಡಲಾಗಿದೆ.
2022ಕ್ಕೆ ಎಲ್ಲರಿಗೂ ಮನೆ ನೀಡುವುದು, ರಿಯಲ್ ಎಸ್ಟೇಟ್ ಉತ್ತೇಜಿಸಿರುವುದು, ಎರಡನೇ ಮನೆ ಬಾಡಿಗೆ ಮತ್ತು ಹೂಡಿಕೆ ಮೇಲೆ ತೆರಿಗೆ ರಿಯಾಯಿತಿ ತೋರಿರುವುದು, ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂ.ಗಳವರೆಗೆ ವಿಸ್ತರಿಸಿರುವುದು ಖುಷಿ ತರುವ ಸಂಗತಿ. ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
- ಕ್ವೈಸ್ ನೂರಾನಿ, ಕ್ರೆಡಾಯ್ ಅಧ್ಯಕ್ಷ.
ಆದಾಯ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಿ ಮಧ್ಯಮ ವರ್ಗಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇದರಿಂದ ಇವರ ಖರೀದಿ ಶಕ್ತಿ ಹೆಚ್ಚಾಗುವುದರಿಂದ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ದ್ವಿಚಕ್ರ ವಾಹನ, ಟಿ.ವಿ. ಫ್ರಿಜ್ ಮತ್ತು ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಮಾರುಕಟ್ಟೆ ಸಿಗುತ್ತದೆ.
-ಮಲ್ಲಿಕಾರ್ಜುನ ಜಗಜಂಪಿ, ಉದ್ಯಮಿ
ಈ ಬಜೆಟ್ ರಿಯಲ್ ಎಸ್ಟೇಟ್ಗೆ ಉತ್ತೇಜಕ. ಎರಡನೇ ಮನೆ ಮೇಲೆ ಹೂಡಿಕೆ ಹಾಗೂ ಬಾಡಿಗೆ ವಿಚಾರವಾಗಿ ತೆರಿಗೆ ವಿನಾಯಿತಿ ನೀಡಿರುವುದು, ಸಣ್ಣ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ., ಆದಾಯ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಿರುವುದು ಸ್ವಾಗತಾರ್ಹ. ಕೈಗಾರಿಕೆಗಳಿಗೂ ಆದ್ಯತೆ ಸಿಗಬೇಕಿತ್ತು.
-ಚೈತನ್ಯ ಕುಲಕರ್ಣಿ, ಕ್ರೆಡಾಯ್ ರಾಜ್ಯ ಉಪಾಧ್ಯಕ್ಷ.
ದೇಶದ ಎಲ್ಲ ವರ್ಗದ ಜನರ ಯೋಗಕ್ಷೇಮ ಗಮನದಲ್ಲಿಟ್ಟುಕೊಂಡು ಹಣಕಾಸು ಸಚಿವ ಪಿಯೂಷ್ ಗೋಯಲ್ ಬಜೆಟ್ ಮಂಡಿಸಿದ್ದಾರೆ. ಇದು ಕಳೆದ ಐದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಜನೋಪಯೋಗಿ ಹಾಗೂ ಆರ್ಥಿಕಾಭಿವೃದ್ಧಿಯ ಕಾರ್ಯಗಳ ಮೇಲೆ ಕಳಶ ಇಟ್ಟಿದೆ.
-ಬಾಲಚಂದ್ರ ಜಾರಕಿಹೊಳಿ, ಶಾಸಕ.
ಇದೊಂದು ಐತಿಹಾಸಿಕ ಬಜೆಟ್. ಮಧ್ಯಮ ವರ್ಗ, ಕಾರ್ಮಿಕ, ರೈತ, ಯುವಕ, ಮಹಿಳೆ, ಲಘು ಉದ್ಯೋಗದಾರರು ಮತ್ತು ವ್ಯಾಪಾರಸ್ಥರಿಗೆ ಶಕ್ತಿ ತುಂಬಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರಿಗೆ ಅಭಿನಂದನೆ.
- ಅಭಯ ಪಾಟೀಲ, ಶಾಸಕ.
ಚುನಾವಣೆಯಲ್ಲಿ ಮತ ಸೆಳೆಯಲು ಈ ಬಜೆಟ್ ಮಂಡಣೆ ಮಾಡಿದಂತಿದೆ. ಉದ್ಯೋಗ ಸೃಷ್ಟಿಯ ಲಕ್ಷಣಗಳು ಇಲ್ಲ. ಸ್ವಾಮಿನಾಥನ್ ಆಯೋಗದ ಪ್ರಕಾರ ಕೃಷಿಕರ ಹಿತರಕ್ಷಣೆ, ಭೂಮಿ, ನೀರು ಪರಿಸರದ ಕಡೆಗೆ ಗಮನ ನೀಡಿಲ್ಲ.
- ಮಲ್ಲಿಕಾರ್ಜುನ ಜಕಾತಿ, ಕರ್ನಾಟಕ ಕೃಷಿಕ ಸಂಘದ ರಾಜಾಧ್ಯಕ್ಷ.
ಚುನಾವಣೆ ಹೊಸ್ತಿಲಲ್ಲಿ ಇದು ಕಣ್ಣೊರೆಸುವ ತಂತ್ರ. ಮಹಿಳಾ ಕಲ್ಯಾಣಕ್ಕೆ ವಿಶೇಷ ಸೌಲತ್ತು ಸಿಕ್ಕಿಲ್ಲ. ಹಿರಿಯರು, ರೈತರಿಗೆ ಘೋಷಣೆ ಮಾಡಿರುವ ನೆರವು ಅರೆಕಾಸಿನ ಮಜ್ಜಿಗೆಯಾಗಿದೆ. ಬಜೆಟ್ನಲ್ಲಿ ಹೊಸತನವಿಲ್ಲ, ನೀರಸವಾಗಿದೆ.
- ಮಂಜುಳಾ ಮುಕುಂದ, ರಾಜ್ಯ ಮಹಿಳಾ ಕಾಂಗ್ರೆಸ್ ಮುಖಂಡರು.
ಬಜೆಟ್ ಅನ್ನದಾತನಿಗೆ ಅಭಯ, ಮಧ್ಯಮ ವರ್ಗಕ್ಕೆ ನಿರಾಳ, ಅಸಂಘಟಿತ ಕಾರ್ಮಿಕರ ಮೊಗದಲ್ಲಿ ಸಂತಸ ತಂದಿದೆ. ಡಿಜಿಟಲ್ ಗ್ರಾಮ ಯೋಜನೆ ಇಡೀ ವಿಶ್ವವನ್ನು ಅಂಗೈಯಲ್ಲಿ ತರುವ ಪ್ರಯತ್ನವಾಗಿದ್ದು, ತೃಪ್ತಿ ತಂದಿದೆ.
-ಸುನಂದಾ ಭರಮನಾಯ್ಕರ, ಸಾಹಿತಿ, ನಾಗನೂರು (ಬೈಲಹೊಂಗಲ).
ಬಜೆಟ್ ಎಲ್ಲ ಸಮುದಾಯಗಳನ್ನು ಆರ್ಥಿಕತೆಯಿಂದ ಮೇಲೆಬ್ಬಿಸುವ ಕಾರ್ಯಸೂಚಿಗಳನ್ನು ಒಳಗೊಂಡಿದ್ದರೂ, ಘೋಷಣೆಯಾದ ಎಲ್ಲ ಯೋಜನೆಗಳು ಜಾರಿಯಾಗಬೆಕು. ಚುನಾವಣೆಗೆ ಸೀಮಿತವಾಗಿ ಉಳಿದುಕೊಳ್ಳಬಾರದು.
- ಶಿವಾನಂದ ಕಲ್ಲೂರ, ಅರ್ಥಶಾಸ್ತ್ರ ಉಪನ್ಯಾಸಕರು.
ಇದು ಚುನಾವಣೆ ವರ್ಷದ ಮುಂಗಡ ಪತ್ರವಾದರೂ ಮಧ್ಯಮ ವರ್ಗ, ರೈತ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಸ್ವಾಗತಾರ್ಹವಾಗಿದೆ. ಆದಾಯ ಮಿತಿ ಹೆಚ್ಚಳ, ಸಣ್ಣ ರೈತರಿಗೆ ವಾರ್ಷಿಕ 6 ಸಾವಿರ ರೂ., ನಿವೃತ್ತಿ ಕಾರ್ಮಿಕರಿಗೆ 3 ಸಾವಿರ ರೂ. ಪಿಂಚಣಿ, ಸಣ್ಣ ಉದ್ದಿಮೆದಾರರ ಸಾಲದ ಮೇಲಿನ ಬಡ್ಡಿಯಲ್ಲಿ ಶೇ. 2 ರಷ್ಟು ರಿಯಾಯಿತಿ ಉತ್ತೇಜಕ ಸಂಗತಿಗಳಾಗಿವೆ.
- ಅಶೋಕ ಚಂದರಗಿ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ.
ಆದಾಯ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಿರುವುದು ಸ್ವಾಗತಾರ್ಹ. ಇದರಿಂದ ಮಧ್ಯಮ ವರ್ಗದ ದೀರ್ಘ ಕಾಲದ ಬೇಡಿಕೆ ಈಡೇರಿದೆ.
- ಬಸವರಾಜ ಸುಣಗಾರ, ಬೆಳಗಾವಿ ತಾಲೂಕು ಪ್ರಾಥಮಿಕ ಶಾಲಾ ಮುಖ್ಯೊಪಾಧ್ಯಾಯರ ಸಂಘದ ಅಧ್ಯಕ್ಷ .
ಇದು ರೈತಪರ ಬಜೆಟ್. ಇಲ್ಲಿಯವರೆಗೆ ಯಾರೂ ಮಾಡದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ.
- ಡಿ.ಎಂ. ಐಹೊಳೆ, ಶಾಸಕ.
ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಅಂಸಘಟಿತ ಕಾರ್ಮಿಕರು, ರೈತರು, ಹಿರಿಯ ನಾಗರಿಕರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಮಧ್ಯಮ ವರ್ಗದ ಜನರಿಗೆ ವರದಾನವಾಗಿದೆ. ಹೀಗಾಗಿ ಈ ಸಲದ ಬಜೆಟ್ ವಿರೋಧಿ ಪಕ್ಷ ದವರಿಗೆ ಹೆದರಿಕೆಯನ್ನುಂಟು ಮಾಡಿದೆ.
- ಶಶಿಕಲಾ ಜೊಲ್ಲೆ, ಶಾಸಕಿ.
ಕೇಂದ್ರ ಬಜೆಟ್ನಲ್ಲಿ ಯಾವುದೇ ಹುರುಳಿಲ್ಲ. ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನರನ್ನು ಮರಳು ಮಾಡಲು ಹೊರಟಂತಿದೆ. ರೈತರ ಬಗ್ಗೆ, ಬಡಜನರ ಬಗ್ಗೆ ಕಾಳಜಿ ಇಲ್ಲದ ಇದು ಚುನಾವಣೆ ಪ್ರಣಾಳಿಕೆಯಂತಿದೆ.
- ಅಶೋಕ ಪಟ್ಟಣ, ಮಾಜಿ ಶಾಸಕ.
ಇದು ರೈತರ ಮತ್ತು ಮಧ್ಯಮ ವರ್ಗಗಳ ಪರವಾದ ಐತಿಹಾಸಿಕ ಬಜೆಟ್. ಪ್ರಧಾನಿ ಮೋದಿ ಅವರ ಆಡಳಿತದ ಬಗ್ಗೆ ಮಾತನಾಡುತ್ತಿರುವವರ ಬಾಯಿ ಮುಚ್ಚಿಸಿದೆ. ಬಿಜೆಪಿ ಬಡವರ ಬಗ್ಗೆ ಕಾಳಜಿ ಇರುವ ಪಕ್ಷ ಎಂಬುದು ಸಾಬೀತಾಗಿದೆ.
- ಮಹಾದೇವಪ್ಪ ಯಾದವಾಡ, ಶಾಸಕ.
ಸಮಾಜದಲ್ಲಿನ ಪ್ರತಿಯೊಂದು ವರ್ಗದವರನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಇದು ಜನಪರ ಬಜೆಟ್. ಆದಾಯ ತೆರಿಗೆ ಪಾವತಿಸುವಲ್ಲಿ 5 ಲಕ್ಷ ರೂ.ಗಳವರೆಗೆ ವಿನಾಯತಿ ನೀಡಿರುವುದು ನೌಕರರಿಗೆ ಮತ್ತು ವ್ಯಾಪಾರಿ ವರ್ಗದವರಿಗೆ ಅತ್ಯಂತ ಅನುಕೂಲ.
- ಆನಂದ ಮಾಮನಿ, ಶಾಸಕ.
ಕೃಷಿ ಸಾಲ ಮನ್ನಾ ಮಾಡಬೇಕೆಂಬ ಬಲವಾದ ಬೇಡಿಕೆಗೆ ಪ್ರತಿಯಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಸಣ್ಣ ಮತ್ತು ಮಧ್ಯಮ ರೈತರಿಗೆ ವಾರ್ಷಿಕ ಆರು ಸಾವಿರ ರೂಪಾಯಿ ನೀಡುವ ಮಹತ್ತರ ಯೋಜನೆ ತಂದಿದೆ. ಇದು ಅತ್ಯಂತ ಸ್ವಾಗತಾರ್ಹ ಬಜೆಟ್.
- ಡಾ. ವಿಶ್ವನಾಥ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ.
ಲೋಕಸಭೆ ಚುನಾವಣೆ ದೃಷ್ಟಿಯಿಂದ ಈ ಬಜೆಟ್ ಮಂಡಿಸಲಾಗಿದೆ. ನಾಲ್ಕು ತಿಂಗಳಲ್ಲಿ ಯಾವುದೇ ಯೋಜನೆಗಳು ಬಹುತೇಕ ಅನುಷ್ಠಾನಗೊಳ್ಳುವುದಿಲ್ಲ.
- ಕಾರ್ತಿಕ ಪಾಟೀಲ, ಜಿಲ್ಲಾ (ಗ್ರಾ) ಯುವ ಕಾಂಗ್ರೆಸ್ ಘಟಕಾಧ್ಯಕ್ಷ.
ರಾಷ್ಟ್ರದ ಕೃಷಿವಲಯವನ್ನು ಬಲ ಪಡಿಸಲು ಹತ್ತು ಹಲವು ಯೋಜನೆಗಳನ್ನು ಘೋಷಿಸಿರುವುದು ಸ್ವಾಗತಾರ್ಹ.
- ನಿಂಗಪ್ಪ ಚೌಡಣ್ಣವರ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯ ಕಾರಿಣಿ ಸದಸ್ಯ.
ಆಡದೇ ಮಾಡುವವ ಸರ್ವರೊಳಗೆ ಉತ್ತಮ ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿಯೇ ಇದ್ದುಕೊಂಡು, ದೇಶದ ಆಗುಹೋಗುಗಳ ಬಗ್ಗೆ ಕೂಲಂಕಷ ಪರಿಶೀಲನೆ ಮಾಡಿ, ಎಲ್ಲ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಐತಿಹಾಸಿಕ ಬಜೆಟ್ ಇದಾಗಿದೆ.
- ಉಮೇಶ್ ಕತ್ತಿ, ಶಾಸಕ.
ಬಲಿಷ್ಠ ಭಾರತಕ್ಕೆ ಮುನ್ನಡಿ
ಇದು ಐತಿಹಾಸಿಕ ಬಜೆಟ್. ದೇಶದ ಸಮಗ್ರ ಅಭಿವೃದ್ಧಿ ಮತ್ತು ಸರ್ವರ ಏಳ್ಗೆ ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಪಿಯೂಷ್ ಗೋಯಲ್ ಎಲ್ಲ ವರ್ಗಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಎಲ್ಲ ಯೋಜನೆಗಳೂ ಜನಪರವಾಗಿದ್ದು, ಬಲಿಷ್ಠ ಮತ್ತು ಖುಷಿ ಭಾರತದ ನಿರ್ಮಾಣಕ್ಕೆ ಮುನ್ನುಡಿ ಬರೆದಿವೆ.
-ಡಾ. ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯರು.
ಸ್ವತಂತ್ರ ಭಾರತದಲ್ಲೇ ಮೊದಲು
ಇದು ಚಾರಿತ್ರಿಕ ಮತ್ತು ಅದ್ಭುತ ಬಜೆಟ್. ಸ್ವತಂತ್ರ ಭಾರತದಲ್ಲೇ ಮೊದಲು. 'ಸರ್ವೇಜನಾಃ ಸುಖಿನೋಭವಂತು' ಎಂಬ ಮಂತ್ರ ಅಳವಡಿಸಿಕೊಂಡಿದೆ. ಎಲ್ಲರಿಗೂ ಆರೋಗ್ಯ, ಆಯುಷ್ಯ, ಉದ್ಯೋಗ, ಆರ್ಥಿಕ ಶಕ್ತಿಯನ್ನು ಬಯಸಿದೆ. ಇದರ ಲಾಭ ಎಲ್ಲ ವರ್ಗಕ್ಕೂ ಸಿಗಲಿದೆ. ಒಟ್ಟಾರೆ ಇದೊಂದು ಜನಪರ ಮತ್ತು ಪ್ರಗತಿಪರ ಆಯವ್ಯಯ.
- ಮಹಾಂತೇಶ ಮ. ಕವಟಗಿಮಠ, ವಿಧಾನ ಪರಿಷತ್ನ ಪ್ರತಿಪಕ್ಷದ ಮುಖ್ಯಸಚೇತಕರು.
ವಿರೋಧದಲ್ಲಿ ಸತ್ಯಾಂಶವಿಲ್ಲ
ದೇಶಕ್ಕೆ ಅನ್ನಹಾಕುವ ರೈತ ಹಾಗೂ ಗಡಿಕಾಯುವ ಯೋಧನ ರಕ್ಷ ಣೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಬಜೆಟ್ ವಿಶ್ವದ ಗಮನ ಸೆಳೆದಿದೆ. ಕಾಂಗ್ರೆಸ್ನವರು ಚುನಾವಣಾ ಬಜೆಟ್ ಎಂದು ಬಿಂಬಿಸಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ. ಪ್ರತಿಪಕ್ಷ ವಾಗಿ ಕಾಂಗ್ರೆಸ್ ವಿರೋಧಿಸುವ ಕಾರ್ಯ ಮಾಡುತ್ತಿದೆ. ಇದು ಅವರ ಕರ್ತವ್ಯವೇ ಹೊರತು ಇದರಲ್ಲಿ ಸತ್ಯಾಂಶವಿಲ್ಲ.
- ರಮೇಶ್ ಕತ್ತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ .
ಗಿಮಿಕ್ ಬಜೆಟ್
ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಬೇಕೆಂದು ಈ ಮೊದಲಿನಿಂದ ಬೇಡಿಕೆ ಇದ್ದರೂ ತಲೆಕೆಡಿಸಿಕೊಳ್ಳದ ಕೇಂದ್ರ ಸರಕಾರ, ಈಗ ಲೋಕಸಭೆ ಗಮನದಲ್ಲಿಟ್ಟುಕೊಂಡು ಗಿಮಿಕ್ ಮಾಡಲು ಪ್ರಯತ್ನಿಸಿದೆ. ಬಜೆಟ್ ಮೂಲಕ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಿರುವುದು ಜನರಿಗೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಬಜೆಟ್ನಲ್ಲಿ ಜನಸಾಮಾನ್ಯರ ಕಳಕಳಿ ಏನೂ ಇಲ್ಲ.
-ಗಣೇಶ ಹುಕ್ಕೇರಿ, ಸರಕಾರದ ಮುಖ್ಯ ಸಚೇತಕ.
ಮೂಗಿಗೆ ತುಪ್ಪ
ಎಲ್ಲರ ಮೂಗಿಗೆ ತುಪ್ಪ ಹಚ್ಚಿ ಹುಚ್ಚು ಮಾಡುವ ಬಂಡಲ್ ಬಜೆಟ್. ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿದೆ. ಸಾಲಮನ್ನಾ ಅಪೇಕ್ಷೆ ಇಟ್ಟುಕೊಂಡಿದ್ದ ರೈತನಿಗೆ ಬಿಡಿಕಾಸು ನೀಡಲಾಗಿದೆ. ಇತರೆ ವರ್ಗದವರಿಗೂ ಅನುಕೂಲವಾಗಿಲ್ಲ. ಜನರ ನಿರೀಕ್ಷೆಗಳೆಲ್ಲ ತಳೆಕೆಳಗಾಗಿದೆ.
-ಲಕ್ಷ್ಮೇ ಹೆಬ್ಬಾಳಕರ್, ಶಾಸಕಿ.
2022ಕ್ಕೆ ಎಲ್ಲರಿಗೂ ಮನೆ ನೀಡುವುದು, ರಿಯಲ್ ಎಸ್ಟೇಟ್ ಉತ್ತೇಜಿಸಿರುವುದು, ಎರಡನೇ ಮನೆ ಬಾಡಿಗೆ ಮತ್ತು ಹೂಡಿಕೆ ಮೇಲೆ ತೆರಿಗೆ ರಿಯಾಯಿತಿ ತೋರಿರುವುದು, ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂ.ಗಳವರೆಗೆ ವಿಸ್ತರಿಸಿರುವುದು ಖುಷಿ ತರುವ ಸಂಗತಿ. ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
- ಕ್ವೈಸ್ ನೂರಾನಿ, ಕ್ರೆಡಾಯ್ ಅಧ್ಯಕ್ಷ.
ಆದಾಯ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಿ ಮಧ್ಯಮ ವರ್ಗಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇದರಿಂದ ಇವರ ಖರೀದಿ ಶಕ್ತಿ ಹೆಚ್ಚಾಗುವುದರಿಂದ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ದ್ವಿಚಕ್ರ ವಾಹನ, ಟಿ.ವಿ. ಫ್ರಿಜ್ ಮತ್ತು ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಮಾರುಕಟ್ಟೆ ಸಿಗುತ್ತದೆ.
-ಮಲ್ಲಿಕಾರ್ಜುನ ಜಗಜಂಪಿ, ಉದ್ಯಮಿ
ಈ ಬಜೆಟ್ ರಿಯಲ್ ಎಸ್ಟೇಟ್ಗೆ ಉತ್ತೇಜಕ. ಎರಡನೇ ಮನೆ ಮೇಲೆ ಹೂಡಿಕೆ ಹಾಗೂ ಬಾಡಿಗೆ ವಿಚಾರವಾಗಿ ತೆರಿಗೆ ವಿನಾಯಿತಿ ನೀಡಿರುವುದು, ಸಣ್ಣ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ., ಆದಾಯ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಿರುವುದು ಸ್ವಾಗತಾರ್ಹ. ಕೈಗಾರಿಕೆಗಳಿಗೂ ಆದ್ಯತೆ ಸಿಗಬೇಕಿತ್ತು.
-ಚೈತನ್ಯ ಕುಲಕರ್ಣಿ, ಕ್ರೆಡಾಯ್ ರಾಜ್ಯ ಉಪಾಧ್ಯಕ್ಷ.
ದೇಶದ ಎಲ್ಲ ವರ್ಗದ ಜನರ ಯೋಗಕ್ಷೇಮ ಗಮನದಲ್ಲಿಟ್ಟುಕೊಂಡು ಹಣಕಾಸು ಸಚಿವ ಪಿಯೂಷ್ ಗೋಯಲ್ ಬಜೆಟ್ ಮಂಡಿಸಿದ್ದಾರೆ. ಇದು ಕಳೆದ ಐದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಜನೋಪಯೋಗಿ ಹಾಗೂ ಆರ್ಥಿಕಾಭಿವೃದ್ಧಿಯ ಕಾರ್ಯಗಳ ಮೇಲೆ ಕಳಶ ಇಟ್ಟಿದೆ.
-ಬಾಲಚಂದ್ರ ಜಾರಕಿಹೊಳಿ, ಶಾಸಕ.
ಇದೊಂದು ಐತಿಹಾಸಿಕ ಬಜೆಟ್. ಮಧ್ಯಮ ವರ್ಗ, ಕಾರ್ಮಿಕ, ರೈತ, ಯುವಕ, ಮಹಿಳೆ, ಲಘು ಉದ್ಯೋಗದಾರರು ಮತ್ತು ವ್ಯಾಪಾರಸ್ಥರಿಗೆ ಶಕ್ತಿ ತುಂಬಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರಿಗೆ ಅಭಿನಂದನೆ.
- ಅಭಯ ಪಾಟೀಲ, ಶಾಸಕ.
ಚುನಾವಣೆಯಲ್ಲಿ ಮತ ಸೆಳೆಯಲು ಈ ಬಜೆಟ್ ಮಂಡಣೆ ಮಾಡಿದಂತಿದೆ. ಉದ್ಯೋಗ ಸೃಷ್ಟಿಯ ಲಕ್ಷಣಗಳು ಇಲ್ಲ. ಸ್ವಾಮಿನಾಥನ್ ಆಯೋಗದ ಪ್ರಕಾರ ಕೃಷಿಕರ ಹಿತರಕ್ಷಣೆ, ಭೂಮಿ, ನೀರು ಪರಿಸರದ ಕಡೆಗೆ ಗಮನ ನೀಡಿಲ್ಲ.
- ಮಲ್ಲಿಕಾರ್ಜುನ ಜಕಾತಿ, ಕರ್ನಾಟಕ ಕೃಷಿಕ ಸಂಘದ ರಾಜಾಧ್ಯಕ್ಷ.
ಚುನಾವಣೆ ಹೊಸ್ತಿಲಲ್ಲಿ ಇದು ಕಣ್ಣೊರೆಸುವ ತಂತ್ರ. ಮಹಿಳಾ ಕಲ್ಯಾಣಕ್ಕೆ ವಿಶೇಷ ಸೌಲತ್ತು ಸಿಕ್ಕಿಲ್ಲ. ಹಿರಿಯರು, ರೈತರಿಗೆ ಘೋಷಣೆ ಮಾಡಿರುವ ನೆರವು ಅರೆಕಾಸಿನ ಮಜ್ಜಿಗೆಯಾಗಿದೆ. ಬಜೆಟ್ನಲ್ಲಿ ಹೊಸತನವಿಲ್ಲ, ನೀರಸವಾಗಿದೆ.
- ಮಂಜುಳಾ ಮುಕುಂದ, ರಾಜ್ಯ ಮಹಿಳಾ ಕಾಂಗ್ರೆಸ್ ಮುಖಂಡರು.
ಬಜೆಟ್ ಅನ್ನದಾತನಿಗೆ ಅಭಯ, ಮಧ್ಯಮ ವರ್ಗಕ್ಕೆ ನಿರಾಳ, ಅಸಂಘಟಿತ ಕಾರ್ಮಿಕರ ಮೊಗದಲ್ಲಿ ಸಂತಸ ತಂದಿದೆ. ಡಿಜಿಟಲ್ ಗ್ರಾಮ ಯೋಜನೆ ಇಡೀ ವಿಶ್ವವನ್ನು ಅಂಗೈಯಲ್ಲಿ ತರುವ ಪ್ರಯತ್ನವಾಗಿದ್ದು, ತೃಪ್ತಿ ತಂದಿದೆ.
-ಸುನಂದಾ ಭರಮನಾಯ್ಕರ, ಸಾಹಿತಿ, ನಾಗನೂರು (ಬೈಲಹೊಂಗಲ).
ಬಜೆಟ್ ಎಲ್ಲ ಸಮುದಾಯಗಳನ್ನು ಆರ್ಥಿಕತೆಯಿಂದ ಮೇಲೆಬ್ಬಿಸುವ ಕಾರ್ಯಸೂಚಿಗಳನ್ನು ಒಳಗೊಂಡಿದ್ದರೂ, ಘೋಷಣೆಯಾದ ಎಲ್ಲ ಯೋಜನೆಗಳು ಜಾರಿಯಾಗಬೆಕು. ಚುನಾವಣೆಗೆ ಸೀಮಿತವಾಗಿ ಉಳಿದುಕೊಳ್ಳಬಾರದು.
- ಶಿವಾನಂದ ಕಲ್ಲೂರ, ಅರ್ಥಶಾಸ್ತ್ರ ಉಪನ್ಯಾಸಕರು.
ಇದು ಚುನಾವಣೆ ವರ್ಷದ ಮುಂಗಡ ಪತ್ರವಾದರೂ ಮಧ್ಯಮ ವರ್ಗ, ರೈತ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಸ್ವಾಗತಾರ್ಹವಾಗಿದೆ. ಆದಾಯ ಮಿತಿ ಹೆಚ್ಚಳ, ಸಣ್ಣ ರೈತರಿಗೆ ವಾರ್ಷಿಕ 6 ಸಾವಿರ ರೂ., ನಿವೃತ್ತಿ ಕಾರ್ಮಿಕರಿಗೆ 3 ಸಾವಿರ ರೂ. ಪಿಂಚಣಿ, ಸಣ್ಣ ಉದ್ದಿಮೆದಾರರ ಸಾಲದ ಮೇಲಿನ ಬಡ್ಡಿಯಲ್ಲಿ ಶೇ. 2 ರಷ್ಟು ರಿಯಾಯಿತಿ ಉತ್ತೇಜಕ ಸಂಗತಿಗಳಾಗಿವೆ.
- ಅಶೋಕ ಚಂದರಗಿ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ.
ಆದಾಯ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಿರುವುದು ಸ್ವಾಗತಾರ್ಹ. ಇದರಿಂದ ಮಧ್ಯಮ ವರ್ಗದ ದೀರ್ಘ ಕಾಲದ ಬೇಡಿಕೆ ಈಡೇರಿದೆ.
- ಬಸವರಾಜ ಸುಣಗಾರ, ಬೆಳಗಾವಿ ತಾಲೂಕು ಪ್ರಾಥಮಿಕ ಶಾಲಾ ಮುಖ್ಯೊಪಾಧ್ಯಾಯರ ಸಂಘದ ಅಧ್ಯಕ್ಷ .
ಇದು ರೈತಪರ ಬಜೆಟ್. ಇಲ್ಲಿಯವರೆಗೆ ಯಾರೂ ಮಾಡದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ.
- ಡಿ.ಎಂ. ಐಹೊಳೆ, ಶಾಸಕ.
ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಅಂಸಘಟಿತ ಕಾರ್ಮಿಕರು, ರೈತರು, ಹಿರಿಯ ನಾಗರಿಕರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಮಧ್ಯಮ ವರ್ಗದ ಜನರಿಗೆ ವರದಾನವಾಗಿದೆ. ಹೀಗಾಗಿ ಈ ಸಲದ ಬಜೆಟ್ ವಿರೋಧಿ ಪಕ್ಷ ದವರಿಗೆ ಹೆದರಿಕೆಯನ್ನುಂಟು ಮಾಡಿದೆ.
- ಶಶಿಕಲಾ ಜೊಲ್ಲೆ, ಶಾಸಕಿ.
ಕೇಂದ್ರ ಬಜೆಟ್ನಲ್ಲಿ ಯಾವುದೇ ಹುರುಳಿಲ್ಲ. ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನರನ್ನು ಮರಳು ಮಾಡಲು ಹೊರಟಂತಿದೆ. ರೈತರ ಬಗ್ಗೆ, ಬಡಜನರ ಬಗ್ಗೆ ಕಾಳಜಿ ಇಲ್ಲದ ಇದು ಚುನಾವಣೆ ಪ್ರಣಾಳಿಕೆಯಂತಿದೆ.
- ಅಶೋಕ ಪಟ್ಟಣ, ಮಾಜಿ ಶಾಸಕ.
ಇದು ರೈತರ ಮತ್ತು ಮಧ್ಯಮ ವರ್ಗಗಳ ಪರವಾದ ಐತಿಹಾಸಿಕ ಬಜೆಟ್. ಪ್ರಧಾನಿ ಮೋದಿ ಅವರ ಆಡಳಿತದ ಬಗ್ಗೆ ಮಾತನಾಡುತ್ತಿರುವವರ ಬಾಯಿ ಮುಚ್ಚಿಸಿದೆ. ಬಿಜೆಪಿ ಬಡವರ ಬಗ್ಗೆ ಕಾಳಜಿ ಇರುವ ಪಕ್ಷ ಎಂಬುದು ಸಾಬೀತಾಗಿದೆ.
- ಮಹಾದೇವಪ್ಪ ಯಾದವಾಡ, ಶಾಸಕ.
ಸಮಾಜದಲ್ಲಿನ ಪ್ರತಿಯೊಂದು ವರ್ಗದವರನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಇದು ಜನಪರ ಬಜೆಟ್. ಆದಾಯ ತೆರಿಗೆ ಪಾವತಿಸುವಲ್ಲಿ 5 ಲಕ್ಷ ರೂ.ಗಳವರೆಗೆ ವಿನಾಯತಿ ನೀಡಿರುವುದು ನೌಕರರಿಗೆ ಮತ್ತು ವ್ಯಾಪಾರಿ ವರ್ಗದವರಿಗೆ ಅತ್ಯಂತ ಅನುಕೂಲ.
- ಆನಂದ ಮಾಮನಿ, ಶಾಸಕ.
ಕೃಷಿ ಸಾಲ ಮನ್ನಾ ಮಾಡಬೇಕೆಂಬ ಬಲವಾದ ಬೇಡಿಕೆಗೆ ಪ್ರತಿಯಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಸಣ್ಣ ಮತ್ತು ಮಧ್ಯಮ ರೈತರಿಗೆ ವಾರ್ಷಿಕ ಆರು ಸಾವಿರ ರೂಪಾಯಿ ನೀಡುವ ಮಹತ್ತರ ಯೋಜನೆ ತಂದಿದೆ. ಇದು ಅತ್ಯಂತ ಸ್ವಾಗತಾರ್ಹ ಬಜೆಟ್.
- ಡಾ. ವಿಶ್ವನಾಥ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ.
ಲೋಕಸಭೆ ಚುನಾವಣೆ ದೃಷ್ಟಿಯಿಂದ ಈ ಬಜೆಟ್ ಮಂಡಿಸಲಾಗಿದೆ. ನಾಲ್ಕು ತಿಂಗಳಲ್ಲಿ ಯಾವುದೇ ಯೋಜನೆಗಳು ಬಹುತೇಕ ಅನುಷ್ಠಾನಗೊಳ್ಳುವುದಿಲ್ಲ.
- ಕಾರ್ತಿಕ ಪಾಟೀಲ, ಜಿಲ್ಲಾ (ಗ್ರಾ) ಯುವ ಕಾಂಗ್ರೆಸ್ ಘಟಕಾಧ್ಯಕ್ಷ.
ರಾಷ್ಟ್ರದ ಕೃಷಿವಲಯವನ್ನು ಬಲ ಪಡಿಸಲು ಹತ್ತು ಹಲವು ಯೋಜನೆಗಳನ್ನು ಘೋಷಿಸಿರುವುದು ಸ್ವಾಗತಾರ್ಹ.
- ನಿಂಗಪ್ಪ ಚೌಡಣ್ಣವರ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯ ಕಾರಿಣಿ ಸದಸ್ಯ.
ಆಡದೇ ಮಾಡುವವ ಸರ್ವರೊಳಗೆ ಉತ್ತಮ ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿಯೇ ಇದ್ದುಕೊಂಡು, ದೇಶದ ಆಗುಹೋಗುಗಳ ಬಗ್ಗೆ ಕೂಲಂಕಷ ಪರಿಶೀಲನೆ ಮಾಡಿ, ಎಲ್ಲ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಐತಿಹಾಸಿಕ ಬಜೆಟ್ ಇದಾಗಿದೆ.
- ಉಮೇಶ್ ಕತ್ತಿ, ಶಾಸಕ.
ಬಲಿಷ್ಠ ಭಾರತಕ್ಕೆ ಮುನ್ನಡಿ
ಇದು ಐತಿಹಾಸಿಕ ಬಜೆಟ್. ದೇಶದ ಸಮಗ್ರ ಅಭಿವೃದ್ಧಿ ಮತ್ತು ಸರ್ವರ ಏಳ್ಗೆ ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಪಿಯೂಷ್ ಗೋಯಲ್ ಎಲ್ಲ ವರ್ಗಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಎಲ್ಲ ಯೋಜನೆಗಳೂ ಜನಪರವಾಗಿದ್ದು, ಬಲಿಷ್ಠ ಮತ್ತು ಖುಷಿ ಭಾರತದ ನಿರ್ಮಾಣಕ್ಕೆ ಮುನ್ನುಡಿ ಬರೆದಿವೆ.
-ಡಾ. ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯರು.
ಸ್ವತಂತ್ರ ಭಾರತದಲ್ಲೇ ಮೊದಲು
ಇದು ಚಾರಿತ್ರಿಕ ಮತ್ತು ಅದ್ಭುತ ಬಜೆಟ್. ಸ್ವತಂತ್ರ ಭಾರತದಲ್ಲೇ ಮೊದಲು. 'ಸರ್ವೇಜನಾಃ ಸುಖಿನೋಭವಂತು' ಎಂಬ ಮಂತ್ರ ಅಳವಡಿಸಿಕೊಂಡಿದೆ. ಎಲ್ಲರಿಗೂ ಆರೋಗ್ಯ, ಆಯುಷ್ಯ, ಉದ್ಯೋಗ, ಆರ್ಥಿಕ ಶಕ್ತಿಯನ್ನು ಬಯಸಿದೆ. ಇದರ ಲಾಭ ಎಲ್ಲ ವರ್ಗಕ್ಕೂ ಸಿಗಲಿದೆ. ಒಟ್ಟಾರೆ ಇದೊಂದು ಜನಪರ ಮತ್ತು ಪ್ರಗತಿಪರ ಆಯವ್ಯಯ.
- ಮಹಾಂತೇಶ ಮ. ಕವಟಗಿಮಠ, ವಿಧಾನ ಪರಿಷತ್ನ ಪ್ರತಿಪಕ್ಷದ ಮುಖ್ಯಸಚೇತಕರು.
ವಿರೋಧದಲ್ಲಿ ಸತ್ಯಾಂಶವಿಲ್ಲ
ದೇಶಕ್ಕೆ ಅನ್ನಹಾಕುವ ರೈತ ಹಾಗೂ ಗಡಿಕಾಯುವ ಯೋಧನ ರಕ್ಷ ಣೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಬಜೆಟ್ ವಿಶ್ವದ ಗಮನ ಸೆಳೆದಿದೆ. ಕಾಂಗ್ರೆಸ್ನವರು ಚುನಾವಣಾ ಬಜೆಟ್ ಎಂದು ಬಿಂಬಿಸಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ. ಪ್ರತಿಪಕ್ಷ ವಾಗಿ ಕಾಂಗ್ರೆಸ್ ವಿರೋಧಿಸುವ ಕಾರ್ಯ ಮಾಡುತ್ತಿದೆ. ಇದು ಅವರ ಕರ್ತವ್ಯವೇ ಹೊರತು ಇದರಲ್ಲಿ ಸತ್ಯಾಂಶವಿಲ್ಲ.
- ರಮೇಶ್ ಕತ್ತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ .
ಗಿಮಿಕ್ ಬಜೆಟ್
ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಬೇಕೆಂದು ಈ ಮೊದಲಿನಿಂದ ಬೇಡಿಕೆ ಇದ್ದರೂ ತಲೆಕೆಡಿಸಿಕೊಳ್ಳದ ಕೇಂದ್ರ ಸರಕಾರ, ಈಗ ಲೋಕಸಭೆ ಗಮನದಲ್ಲಿಟ್ಟುಕೊಂಡು ಗಿಮಿಕ್ ಮಾಡಲು ಪ್ರಯತ್ನಿಸಿದೆ. ಬಜೆಟ್ ಮೂಲಕ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಿರುವುದು ಜನರಿಗೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಬಜೆಟ್ನಲ್ಲಿ ಜನಸಾಮಾನ್ಯರ ಕಳಕಳಿ ಏನೂ ಇಲ್ಲ.
-ಗಣೇಶ ಹುಕ್ಕೇರಿ, ಸರಕಾರದ ಮುಖ್ಯ ಸಚೇತಕ.
ಮೂಗಿಗೆ ತುಪ್ಪ
ಎಲ್ಲರ ಮೂಗಿಗೆ ತುಪ್ಪ ಹಚ್ಚಿ ಹುಚ್ಚು ಮಾಡುವ ಬಂಡಲ್ ಬಜೆಟ್. ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿದೆ. ಸಾಲಮನ್ನಾ ಅಪೇಕ್ಷೆ ಇಟ್ಟುಕೊಂಡಿದ್ದ ರೈತನಿಗೆ ಬಿಡಿಕಾಸು ನೀಡಲಾಗಿದೆ. ಇತರೆ ವರ್ಗದವರಿಗೂ ಅನುಕೂಲವಾಗಿಲ್ಲ. ಜನರ ನಿರೀಕ್ಷೆಗಳೆಲ್ಲ ತಳೆಕೆಳಗಾಗಿದೆ.
-ಲಕ್ಷ್ಮೇ ಹೆಬ್ಬಾಳಕರ್, ಶಾಸಕಿ.